<p>ಮೈಸೂರು: ಸಾಹಿತಿ ಎಲ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ತರಲು ₹50 ಲಕ್ಷದಷ್ಟು ಹಣವನ್ನು ಸರ್ಕಾರದಿಂದ ರಂಗಾಯಣಕ್ಕೆ ಕೊಡಿಸುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.</p>.<p>ರಂಗಾಯಣದ ಭೂಮಿಗೀತದಲ್ಲಿ ಗುರುವಾರ ಅವರು ‘ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಪರ್ವ’ ಕಾದಂಬರಿಯ ರಂಗ ಪ್ರಯೋಗ ಮಹತ್ವದ ಕಾರ್ಯ. ಇದಕ್ಕೆ ಹೆಚ್ಚಿನ ಹಣ ಬೇಕಿರುವುದು ನಿಜ. ಕಾರ್ಯಪ್ಪ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಗತ್ಯ ಇರುವ ಹಣವನ್ನು ಕೊಡಿಸಲು ಬದ್ಧನಾಗಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.</p>.<p>ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿಯೂ ರಂಗಾಯಣ ಸುಮ್ಮನಿರಲಿಲ್ಲ. ಜೂನ್ 5ರಿಂದ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಯಶಸ್ವಿಯಾಗಿ ರಂಗ ಚಟುವಟಿಕೆಗಳನ್ನು ಆರಂಭಿಸಲಾಯಿತು. ಇವುಗಳೆಲ್ಲದರ ದಾಖಲೆಯೆ ‘ಕೋವಿಡ್ ಕತ್ತಲೆಯಲ್ಲೂ ರಂಗ ಬೆಳಕು’ ಪುಸ್ತಕ ಎಂದರು.</p>.<p>ನಿರ್ದೇಶಕ ಶಶಿಧರ ಅಡಪ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.</p>.<p>ಸೂಜಿಗಲ್ಲಿನಂತೆ ಸೆಳೆದ ‘ರಾಗ-ಸರಾಗ’: ರಂಗಾಯಣದಲ್ಲಿ ನಡೆದ ‘ರಾಗ–ಸರಾಗ’ ಕಾರ್ಯಕ್ರಮ ನೋಡುಗರನ್ನು ಬಹುವಾಗಿ ಸೆಳೆಯಿತು.</p>.<p>ಬಿ.ವಿ.ಕಾರಂತ ಅವರು ಅವಾದ್ಯ ಕಛೇರಿಯನ್ನು 31 ವರ್ಷದ ಹಿಂದೆ ನಡೆಸಿದ್ದರು. ಕಲ್ಲು, ಜಾಗಟೆ, ಮಡಕೆ, ಚಿಟಿಕೆ, ಬಿದಿರಿನ ಬೊಂಬು, ತೆಂಗಿನಕಾಯಿ ಚಿಪ್ಪು ಮೊದಲಾದ ವಸ್ತುಗಳನ್ನು ನುಡಿಸುವ ಮೂಲಕ ಹೊಸದೊಂದು ಪ್ರಯೋಗ ಮಾಡಿದ್ದರು. ಈಗ ಮತ್ತೆ ಅದೇ ಸಂಗೀತ<br />ಕಛೇರಿ ಕೇಳಿ ಬಂದಿತು. ಇದಕ್ಕೂ ಮುನ್ನ ನಡೆದ ಕೋಲಾಟ ಸೂಜಿಗಲ್ಲಿನಂತೆ ಸೆಳೆಯಿತು. ಕಲಾವಿದ ಧನಂಜಯ್ಯ ಮತ್ತು ಸಂಗಡಿಗರು ಹಾಡಿದ ಮಂಕುತಿಮ್ಮನ ಕಗ್ಗವೂ ಬಹುವಾಗೆ ಸೆಳೆಯುವಲ್ಲಿ ಸಫಲವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಸಾಹಿತಿ ಎಲ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ತರಲು ₹50 ಲಕ್ಷದಷ್ಟು ಹಣವನ್ನು ಸರ್ಕಾರದಿಂದ ರಂಗಾಯಣಕ್ಕೆ ಕೊಡಿಸುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.</p>.<p>ರಂಗಾಯಣದ ಭೂಮಿಗೀತದಲ್ಲಿ ಗುರುವಾರ ಅವರು ‘ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಪರ್ವ’ ಕಾದಂಬರಿಯ ರಂಗ ಪ್ರಯೋಗ ಮಹತ್ವದ ಕಾರ್ಯ. ಇದಕ್ಕೆ ಹೆಚ್ಚಿನ ಹಣ ಬೇಕಿರುವುದು ನಿಜ. ಕಾರ್ಯಪ್ಪ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಗತ್ಯ ಇರುವ ಹಣವನ್ನು ಕೊಡಿಸಲು ಬದ್ಧನಾಗಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.</p>.<p>ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿಯೂ ರಂಗಾಯಣ ಸುಮ್ಮನಿರಲಿಲ್ಲ. ಜೂನ್ 5ರಿಂದ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಯಶಸ್ವಿಯಾಗಿ ರಂಗ ಚಟುವಟಿಕೆಗಳನ್ನು ಆರಂಭಿಸಲಾಯಿತು. ಇವುಗಳೆಲ್ಲದರ ದಾಖಲೆಯೆ ‘ಕೋವಿಡ್ ಕತ್ತಲೆಯಲ್ಲೂ ರಂಗ ಬೆಳಕು’ ಪುಸ್ತಕ ಎಂದರು.</p>.<p>ನಿರ್ದೇಶಕ ಶಶಿಧರ ಅಡಪ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.</p>.<p>ಸೂಜಿಗಲ್ಲಿನಂತೆ ಸೆಳೆದ ‘ರಾಗ-ಸರಾಗ’: ರಂಗಾಯಣದಲ್ಲಿ ನಡೆದ ‘ರಾಗ–ಸರಾಗ’ ಕಾರ್ಯಕ್ರಮ ನೋಡುಗರನ್ನು ಬಹುವಾಗಿ ಸೆಳೆಯಿತು.</p>.<p>ಬಿ.ವಿ.ಕಾರಂತ ಅವರು ಅವಾದ್ಯ ಕಛೇರಿಯನ್ನು 31 ವರ್ಷದ ಹಿಂದೆ ನಡೆಸಿದ್ದರು. ಕಲ್ಲು, ಜಾಗಟೆ, ಮಡಕೆ, ಚಿಟಿಕೆ, ಬಿದಿರಿನ ಬೊಂಬು, ತೆಂಗಿನಕಾಯಿ ಚಿಪ್ಪು ಮೊದಲಾದ ವಸ್ತುಗಳನ್ನು ನುಡಿಸುವ ಮೂಲಕ ಹೊಸದೊಂದು ಪ್ರಯೋಗ ಮಾಡಿದ್ದರು. ಈಗ ಮತ್ತೆ ಅದೇ ಸಂಗೀತ<br />ಕಛೇರಿ ಕೇಳಿ ಬಂದಿತು. ಇದಕ್ಕೂ ಮುನ್ನ ನಡೆದ ಕೋಲಾಟ ಸೂಜಿಗಲ್ಲಿನಂತೆ ಸೆಳೆಯಿತು. ಕಲಾವಿದ ಧನಂಜಯ್ಯ ಮತ್ತು ಸಂಗಡಿಗರು ಹಾಡಿದ ಮಂಕುತಿಮ್ಮನ ಕಗ್ಗವೂ ಬಹುವಾಗೆ ಸೆಳೆಯುವಲ್ಲಿ ಸಫಲವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>