ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗೂರು ತಾಲ್ಲೂಕಿನ ನಂದಿನಾಥಪುರದಲ್ಲಿ 192 ಬಡವರಿಗೆ ನಿವೇಶನ: ಭರವಸೆ

Last Updated 19 ಸೆಪ್ಟೆಂಬರ್ 2021, 5:05 IST
ಅಕ್ಷರ ಗಾತ್ರ

ಸರಗೂರು: ‘ನಂದಿನಾಥಪುರ ಗ್ರಾಮದಲ್ಲಿ 20 ಎಕರೆ ಜಾಗದಲ್ಲಿ 192 ನಿವೇಶನ ನಿರ್ಮಿಸಿ ಬಡವರಿಗೆ ವಿತರಿಸಲಾಗುವುದು. 3 ತಿಂಗಳೊಳಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಅನಿಲ್‌ ಚಿಕ್ಕಮಾದು ತಿಳಿಸಿದರು.

ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿನಾಥ ಪುರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ನಡೆದ ವಿಶೇಷ ಗ್ರಾಮ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದರು.

‘₹50 ಕೋಟಿ ವೆಚ್ಚದಲ್ಲಿ ಕಬಿನಿ ಜಲಾಶಯದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ’ ಎಂದರು.

‘ಗ್ರಾಮದಲ್ಲಿ ಕೆರೆ, ಜಮೀನುಗಳಿಗೆ ತೆರಳಲು ಇರುವ ಓಣಿಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಬೇಕು. ಶಾಲೆಯ ಕಟ್ಟಡ ದುರಸ್ತಿಗೊಳಿಸಬೇಕು. ನೂತನ ಕಟ್ಟಡ ಹಾಗೂ ಸಿಸಿ ರಸ್ತೆ, ಚರಂಡಿಗಳನ್ನು ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅನಿಲ್‌ ಚಿಕ್ಕಮಾದು, ‘ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿ
ಗಳಿಗೆ ಸೂಚಿಸುತ್ತೇನೆ’ ಎಂದರು.

ಸಭೆಯಲ್ಲಿ ಬಿದರಹಳ್ಳಿ ಗ್ರಾ.ಪಂ ಅಧ್ಯಕ್ಷ ಬಿ.ಶಿವಣ್ಣ, ಉಪಾಧ್ಯಕ್ಷೆ ರತ್ನಮ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಸರಗೂರು ತಾ.ಪಂ ಇಒ ಲಿಂಗರಾಜು, ಸಿಡಿಪಿಒ ಆಶಾ, ನೀರಾವರಿ ಇಲಾಖೆಯ ನಾಗೇಶ್, ಕೃಷಿ ಇಲಾಖೆಯ ಶಶಿಕಾಂತ್, ಪಿಡಿಒ ಪರಮೇಶ್, ಗುರುಸ್ವಾಮಿ, ಹೇಮಂತ್‌ ಕುಮಾರ್, ಗ್ರಾ.ಪಂ ಸದಸ್ಯರಾದ ಅಂಕನಾಯಕ, ಚೆನ್ನನಾಯಕ, ವೆಂಕಟಸ್ವಾಮಿ, ವಿಜಯ್‌ಕುಮಾರ್, ಕುಮಾರ್, ನಾಗರತ್ನ, ಶಿವಪ್ಪ, ಸೋಮೇಶ್, ಪುಟ್ಟಮ್ಮ, ಸತೀಶ್, ಮುಖಂಡರಾದ ಎನ್.ಡಿ.ರಾಜಣ್ಣ, ಶಿವಣ್ಣ ಭೋವಿ, ಕೆಂಪ ಭೋವಿ, ಬಸಪ್ಪ, ಶೇಖರ್, ಚಲುವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT