<p><strong>ಮೈಸೂರು:</strong> ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೋವಿಡ್ ವಾರಿಯರ್ ಗಳಾಗಿ ಕಾರ್ಯನಿರ್ವ ಹಿಸುತ್ತಿದ್ದ ಐವರು ಪೌರಕಾರ್ಮಿಕರು ಕೋವಿಡ್ 19ನಿಂದ ಮೃತರಾಗಿದ್ದು, ಇವರಲ್ಲಿ ಇಬ್ಬರು ಗುತ್ತಿಗೆ ಪೌರಕಾರ್ಮಿಕರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಸೋಮವಾರ ತಲಾ ₹ 30 ಲಕ್ಷ ಪರಿಹಾರ ವಿತರಿಸಲಾಯಿತು.</p>.<p>ಪಾಲಿಕೆಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ತಸ್ನೀಂ ಹಾಗೂ ಆಯುಕ್ತ ಗುರುದತ್ತ ಹೆಗಡೆ ಚೆಕ್ಹಸ್ತಾಂತರಿಸಿದರು.</p>.<p>ಹೊರಗುತ್ತಿಗೆ ಪೌರಕಾರ್ಮಿಕರಾದ ಓಬಮ್ಮ ಹಾಗೂ ಶಶಿಕುಮಾರ್ ಅವರು ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸೋಂಕು ತಗುಲಿ ಮೃತಪಟ್ಟಿದ್ದರು.</p>.<p>‘ಪಾಲಿಕೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿವಿಧ ವಿಭಾಗಗಳ ಒಟ್ಟು 121 ನೌಕರರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಕಾಯಂ ನೌಕರರಾದ ಮಹದೇವ, ಎಸ್.ಜೆ.ಕೃಷ್ಣಮ್ಮ, ವಿ.ಬನ್ನಾರಿ ಇನ್ನುಳಿದ ಮೂವರು. ಇವರ ಕುಟುಂಬಕ್ಕೆ ಸದ್ಯದಲ್ಲೇ ಪರಿಹಾರ ವಿತರಿಸಲಾಗುವುದು’ ಎಂದು ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.</p>.<p>‘ಇದಕ್ಕೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. ಸದ್ಯಕ್ಕೆ ಪಾಲಿಕೆಯಿಂದಲೇ ಆ ಹಣ ಭರಿಸಿದ್ದೇವೆ’ ಎಂದರು.</p>.<p class="Subhead">ಅನುಕಂಪದ ನೌಕರಿಗೆ ಆಗ್ರಹ: ಅನುಕಂಪದ ಆಧಾರದ ಮೇಲೆ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕೆಂದು ಮೃತ ಪೌರಕಾರ್ಮಿಕರ ಸಂಬಂಧಿಕರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಈವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ಆಯುಕ್ತರು ಹೇಳಿದರು.</p>.<p class="Subhead">ತುಂಬಾ ಹೊತ್ತು ಕಾದರು: ಪರಿಹಾರ ವಿತರಣೆ ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ನಿಗದಿಯಾಗಿತ್ತು. ಪರಿಹಾರ ಪಡೆಯಲುಕುಟುಂಬದವರು11 ಗಂಟೆಗೆ ಬಂದಿದ್ದರು. ಆದರೆ, ಶಿಷ್ಟಾಚಾರ ವಿಚಾರವಾಗಿ ಮೇಯರ್ಹಾಗೂ ಅಧಿಕಾರಿಗಳ ತಿಕ್ಕಾಟದಿಂದ ಸುಮಾರು ಒಂದೂವರೆ ಗಂಟೆ ಕಾಯಬೇಕಾಯಿತು.</p>.<p>ಉಪ ಮೇಯರ್ ಶ್ರೀಧರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ ಇದ್ದರು.</p>.<p><strong>‘ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇವೆ’</strong></p>.<p>ಪರಿಹಾರ ರೂಪದಲ್ಲಿ ಬಂದಿರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿ ಸುತ್ತೇವೆ ಎಂದು ಓಬಮ್ಮ, ಶಶಿಕುಮಾರ್ ಕುಟುಂಬದವರು ತಿಳಿಸಿದರು.</p>.<p>ಕೋವಿಡ್ನಿಂದ ಜುಲೈನಲ್ಲಿ ಮೃತರಾದ ಶಶಿಕುಮಾರ್ (40), ಕಸ ಸಾಗಿಸುವ ವಾಹನ ಚಾಲಕರಾಗಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತ್ನಿ ಲಕ್ಷ್ಮೀದೇವಿ ಬಂದಿದ್ದರು. ಇಬ್ಬರಿಬ್ಬರ ಪುಟ್ಟ ಮಕ್ಕಳು ಹಾಗೂ ಶಶಿಕುಮಾರ್ ತಂದೆ ನಾಗರಾಜು ಇದ್ದರು.</p>.<p>‘ಪರಿಹಾರದ ಮೊತ್ತವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇನೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಕೇಳಿದ್ದೇನೆ’ ಎಂದು ಲಕ್ಷ್ಮೀದೇವಿ ಹೇಳಿದರು.</p>.<p>ಸೋಂಕಿನಿಂದ ಆಗಸ್ಟ್ನಲ್ಲಿ ಮೃತರಾದ ಓಬಮ್ಮ (53) ಅವರು 14 ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತಿ ಲಕ್ಷ್ಮಣ, ಮಗಳು ಲಕ್ಷ್ಮಿ, ಪುತ್ರ ಮಹೇಶ್ ಬಂದಿದ್ದರು.</p>.<p>‘ಕಷ್ಟಕಾಲದಲ್ಲಿ ಹಣ ಸಿಕ್ಕಿದ್ದು ಸಮಾಧಾನ ತಂದಿದೆ. ಈ ಹಣವನ್ನು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ’ ಎಂದು ಮಂಡಿ ಮೊಹಲ್ಲಾ ನಿವಾಸಿ ಲಕ್ಷ್ಮಣ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೋವಿಡ್ ವಾರಿಯರ್ ಗಳಾಗಿ ಕಾರ್ಯನಿರ್ವ ಹಿಸುತ್ತಿದ್ದ ಐವರು ಪೌರಕಾರ್ಮಿಕರು ಕೋವಿಡ್ 19ನಿಂದ ಮೃತರಾಗಿದ್ದು, ಇವರಲ್ಲಿ ಇಬ್ಬರು ಗುತ್ತಿಗೆ ಪೌರಕಾರ್ಮಿಕರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಸೋಮವಾರ ತಲಾ ₹ 30 ಲಕ್ಷ ಪರಿಹಾರ ವಿತರಿಸಲಾಯಿತು.</p>.<p>ಪಾಲಿಕೆಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ತಸ್ನೀಂ ಹಾಗೂ ಆಯುಕ್ತ ಗುರುದತ್ತ ಹೆಗಡೆ ಚೆಕ್ಹಸ್ತಾಂತರಿಸಿದರು.</p>.<p>ಹೊರಗುತ್ತಿಗೆ ಪೌರಕಾರ್ಮಿಕರಾದ ಓಬಮ್ಮ ಹಾಗೂ ಶಶಿಕುಮಾರ್ ಅವರು ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸೋಂಕು ತಗುಲಿ ಮೃತಪಟ್ಟಿದ್ದರು.</p>.<p>‘ಪಾಲಿಕೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿವಿಧ ವಿಭಾಗಗಳ ಒಟ್ಟು 121 ನೌಕರರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಕಾಯಂ ನೌಕರರಾದ ಮಹದೇವ, ಎಸ್.ಜೆ.ಕೃಷ್ಣಮ್ಮ, ವಿ.ಬನ್ನಾರಿ ಇನ್ನುಳಿದ ಮೂವರು. ಇವರ ಕುಟುಂಬಕ್ಕೆ ಸದ್ಯದಲ್ಲೇ ಪರಿಹಾರ ವಿತರಿಸಲಾಗುವುದು’ ಎಂದು ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.</p>.<p>‘ಇದಕ್ಕೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. ಸದ್ಯಕ್ಕೆ ಪಾಲಿಕೆಯಿಂದಲೇ ಆ ಹಣ ಭರಿಸಿದ್ದೇವೆ’ ಎಂದರು.</p>.<p class="Subhead">ಅನುಕಂಪದ ನೌಕರಿಗೆ ಆಗ್ರಹ: ಅನುಕಂಪದ ಆಧಾರದ ಮೇಲೆ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕೆಂದು ಮೃತ ಪೌರಕಾರ್ಮಿಕರ ಸಂಬಂಧಿಕರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಈವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ಆಯುಕ್ತರು ಹೇಳಿದರು.</p>.<p class="Subhead">ತುಂಬಾ ಹೊತ್ತು ಕಾದರು: ಪರಿಹಾರ ವಿತರಣೆ ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ನಿಗದಿಯಾಗಿತ್ತು. ಪರಿಹಾರ ಪಡೆಯಲುಕುಟುಂಬದವರು11 ಗಂಟೆಗೆ ಬಂದಿದ್ದರು. ಆದರೆ, ಶಿಷ್ಟಾಚಾರ ವಿಚಾರವಾಗಿ ಮೇಯರ್ಹಾಗೂ ಅಧಿಕಾರಿಗಳ ತಿಕ್ಕಾಟದಿಂದ ಸುಮಾರು ಒಂದೂವರೆ ಗಂಟೆ ಕಾಯಬೇಕಾಯಿತು.</p>.<p>ಉಪ ಮೇಯರ್ ಶ್ರೀಧರ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ ಇದ್ದರು.</p>.<p><strong>‘ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇವೆ’</strong></p>.<p>ಪರಿಹಾರ ರೂಪದಲ್ಲಿ ಬಂದಿರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿ ಸುತ್ತೇವೆ ಎಂದು ಓಬಮ್ಮ, ಶಶಿಕುಮಾರ್ ಕುಟುಂಬದವರು ತಿಳಿಸಿದರು.</p>.<p>ಕೋವಿಡ್ನಿಂದ ಜುಲೈನಲ್ಲಿ ಮೃತರಾದ ಶಶಿಕುಮಾರ್ (40), ಕಸ ಸಾಗಿಸುವ ವಾಹನ ಚಾಲಕರಾಗಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತ್ನಿ ಲಕ್ಷ್ಮೀದೇವಿ ಬಂದಿದ್ದರು. ಇಬ್ಬರಿಬ್ಬರ ಪುಟ್ಟ ಮಕ್ಕಳು ಹಾಗೂ ಶಶಿಕುಮಾರ್ ತಂದೆ ನಾಗರಾಜು ಇದ್ದರು.</p>.<p>‘ಪರಿಹಾರದ ಮೊತ್ತವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇನೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಕೇಳಿದ್ದೇನೆ’ ಎಂದು ಲಕ್ಷ್ಮೀದೇವಿ ಹೇಳಿದರು.</p>.<p>ಸೋಂಕಿನಿಂದ ಆಗಸ್ಟ್ನಲ್ಲಿ ಮೃತರಾದ ಓಬಮ್ಮ (53) ಅವರು 14 ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತಿ ಲಕ್ಷ್ಮಣ, ಮಗಳು ಲಕ್ಷ್ಮಿ, ಪುತ್ರ ಮಹೇಶ್ ಬಂದಿದ್ದರು.</p>.<p>‘ಕಷ್ಟಕಾಲದಲ್ಲಿ ಹಣ ಸಿಕ್ಕಿದ್ದು ಸಮಾಧಾನ ತಂದಿದೆ. ಈ ಹಣವನ್ನು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ’ ಎಂದು ಮಂಡಿ ಮೊಹಲ್ಲಾ ನಿವಾಸಿ ಲಕ್ಷ್ಮಣ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>