<p><strong>ಮೈಸೂರು: </strong>ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಹಾಸ್ಯನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ‘ಹಾಸ್ಯನಟ ರತ್ನಾಕರ್ ಅವರ 10ನೇ ವರ್ಷದ ನೆನಪಿನ ಕಾರ್ಯಕ್ರಮ’ದಲ್ಲಿ ಅವರ ಕುಟುಂಬದ ಸದಸ್ಯರು ಭಾವಪರವಶರಾದರು.</p>.<p>ರತ್ನಾಕರ ಪುತ್ರ ರಾಘವೇಂದ್ರ ಪ್ರಾರ್ಥನೆ ಮಾಡಿದರೆ, ಇವರ ಪತ್ನಿ ಡಾ.ಪ್ರೀತಂ, ‘ರತ್ನಾಕರ ಅವರ ಕುಟುಂಬದ ಸದಸ್ಯೆಯಾಗಿರುವುದು ಹೆಮ್ಮೆ ಎನಿಸಿದೆ. ಅವರು ನನಗೆ ಕೊಟ್ಟ ದೊಡ್ಡ ಆಸ್ತಿ ಅವರ ಪುತ್ರ ರಾಘವೇಂದ್ರ’ ಎಂದು ಭಾವುಕರಾದರು.</p>.<p>ಇದಕ್ಕೂ ಮುನ್ನ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ‘ನಿರ್ಲಕ್ಷಿತ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು. ಪ್ರಾಧಿಕಾರದ ಸ್ವರೂಪದಲ್ಲಿ ಏನಾದರೂ ಸಹಾಯ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ರತ್ನಾಕರ್ ಅವರು ಕೇವಲ ಹಾಸ್ಯನಟ ಎಂದು ಬಹಳಷ್ಟು ಮಂದಿ ತಿಳಿದಿದ್ದಾರೆ. ಆದರೆ, ಅವರು 3 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜ್ಕುಮಾರ್ ಅಭಿಯನದ ‘ಭಾಗ್ಯದೇವತೆ’ ಸಿನಿಮಾ ಇದರಲ್ಲಿ ಸೇರಿದೆ’ ಎಂದು ಹೇಳಿರು.</p>.<p>ಖ್ಯಾತ ನಟಿ ಜಯಂತಿ ಸೇರಿದಂತೆ ಹೊರರಾಜ್ಯದ ಕನ್ನಡ ಬಾರದ ಕಲಾವಿದರಿಗೆ ಕನ್ನಡ ಕಲಿಸಿದವರು ರತ್ನಾಕರ್. ಹಾಸ್ಯನಟನೆಗೂ ಮೀರಿದ ಕೊಡುಗೆಯನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ಎಂದು ಶ್ಲಾಘಿಸಿದರು.</p>.<p>ಇಂತಹ ನಟನನ್ನು ಸರ್ಕಾರ, ಚಲನಚಿತ್ರ ಪ್ರಾಧಿಕಾರ, ಚಲನಚಿತ್ರ ವಾಣಿಜ್ಯ ಮಂಡಳಿಗಳು ನಿರ್ಲಕ್ಷ್ಯ ವಹಿಸಿವೆ. ರತ್ನಾಕರ ಅವರು ದೊಡ್ಡ ಆಸ್ತಿ ಮಾಡಲಿಲ್ಲ. ಇವರ ಕುಟುಂಬದ ಸದಸ್ಯರು ಹೇಗಿದ್ದಾರೆ ಎಂದು ವಿಚಾರಿಸುವ ಸೌಜನ್ಯವನ್ನೂ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಬಬ್ರುವಾಹನ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಕಾಂಚನಾ ಇಂದಿಗೂ ಬೆಂಗಳೂರಿನ ದೇವಾಲಯವೊಂದರಲ್ಲಿ ಕಸ ಗುಡಿಸುತ್ತಿದ್ದಾರೆ. ಅನೇಕ ಹಿರಿಯ ಕಲಾವಿದರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.</p>.<p>ಕುಪ್ಯಾ ವೆಂಕಟರಾಮು ಗೀತೆಯೊಂದನ್ನು ಹಾಡಿದರು. ರತ್ನಾಕರ್ ಅವರು ಬರೆದ ಸಿನಿಮಾ ಗೀತೆಗಳನ್ನು ಕೇಳಿಸಲಾಯಿತು.</p>.<p>ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮುಖಂಡರಾದ ಮಡ್ಡಿಕೆರೆ ಗೋಪಾಲ್, ಗೋಪಾಲರಾವ್, ಎಸ್.ರಾಮಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಹಾಸ್ಯನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ನಡೆದ ‘ಹಾಸ್ಯನಟ ರತ್ನಾಕರ್ ಅವರ 10ನೇ ವರ್ಷದ ನೆನಪಿನ ಕಾರ್ಯಕ್ರಮ’ದಲ್ಲಿ ಅವರ ಕುಟುಂಬದ ಸದಸ್ಯರು ಭಾವಪರವಶರಾದರು.</p>.<p>ರತ್ನಾಕರ ಪುತ್ರ ರಾಘವೇಂದ್ರ ಪ್ರಾರ್ಥನೆ ಮಾಡಿದರೆ, ಇವರ ಪತ್ನಿ ಡಾ.ಪ್ರೀತಂ, ‘ರತ್ನಾಕರ ಅವರ ಕುಟುಂಬದ ಸದಸ್ಯೆಯಾಗಿರುವುದು ಹೆಮ್ಮೆ ಎನಿಸಿದೆ. ಅವರು ನನಗೆ ಕೊಟ್ಟ ದೊಡ್ಡ ಆಸ್ತಿ ಅವರ ಪುತ್ರ ರಾಘವೇಂದ್ರ’ ಎಂದು ಭಾವುಕರಾದರು.</p>.<p>ಇದಕ್ಕೂ ಮುನ್ನ ಮಾತನಾಡಿದ ಸಾಹಿತಿ ಬನ್ನೂರು ಕೆ.ರಾಜು, ‘ನಿರ್ಲಕ್ಷಿತ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಬೇಕು. ಪ್ರಾಧಿಕಾರದ ಸ್ವರೂಪದಲ್ಲಿ ಏನಾದರೂ ಸಹಾಯ ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ರತ್ನಾಕರ್ ಅವರು ಕೇವಲ ಹಾಸ್ಯನಟ ಎಂದು ಬಹಳಷ್ಟು ಮಂದಿ ತಿಳಿದಿದ್ದಾರೆ. ಆದರೆ, ಅವರು 3 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ರಾಜ್ಕುಮಾರ್ ಅಭಿಯನದ ‘ಭಾಗ್ಯದೇವತೆ’ ಸಿನಿಮಾ ಇದರಲ್ಲಿ ಸೇರಿದೆ’ ಎಂದು ಹೇಳಿರು.</p>.<p>ಖ್ಯಾತ ನಟಿ ಜಯಂತಿ ಸೇರಿದಂತೆ ಹೊರರಾಜ್ಯದ ಕನ್ನಡ ಬಾರದ ಕಲಾವಿದರಿಗೆ ಕನ್ನಡ ಕಲಿಸಿದವರು ರತ್ನಾಕರ್. ಹಾಸ್ಯನಟನೆಗೂ ಮೀರಿದ ಕೊಡುಗೆಯನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ಎಂದು ಶ್ಲಾಘಿಸಿದರು.</p>.<p>ಇಂತಹ ನಟನನ್ನು ಸರ್ಕಾರ, ಚಲನಚಿತ್ರ ಪ್ರಾಧಿಕಾರ, ಚಲನಚಿತ್ರ ವಾಣಿಜ್ಯ ಮಂಡಳಿಗಳು ನಿರ್ಲಕ್ಷ್ಯ ವಹಿಸಿವೆ. ರತ್ನಾಕರ ಅವರು ದೊಡ್ಡ ಆಸ್ತಿ ಮಾಡಲಿಲ್ಲ. ಇವರ ಕುಟುಂಬದ ಸದಸ್ಯರು ಹೇಗಿದ್ದಾರೆ ಎಂದು ವಿಚಾರಿಸುವ ಸೌಜನ್ಯವನ್ನೂ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಬಬ್ರುವಾಹನ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಕಾಂಚನಾ ಇಂದಿಗೂ ಬೆಂಗಳೂರಿನ ದೇವಾಲಯವೊಂದರಲ್ಲಿ ಕಸ ಗುಡಿಸುತ್ತಿದ್ದಾರೆ. ಅನೇಕ ಹಿರಿಯ ಕಲಾವಿದರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.</p>.<p>ಕುಪ್ಯಾ ವೆಂಕಟರಾಮು ಗೀತೆಯೊಂದನ್ನು ಹಾಡಿದರು. ರತ್ನಾಕರ್ ಅವರು ಬರೆದ ಸಿನಿಮಾ ಗೀತೆಗಳನ್ನು ಕೇಳಿಸಲಾಯಿತು.</p>.<p>ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮುಖಂಡರಾದ ಮಡ್ಡಿಕೆರೆ ಗೋಪಾಲ್, ಗೋಪಾಲರಾವ್, ಎಸ್.ರಾಮಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>