ಕೋವಿಡ್-19 ಸಂಕಷ್ಟದಲ್ಲಿ ನಟ ಶಿವರಾಜ್ ಕುಮಾರ್ ₹ 75 ಸಾವಿರ ಪಾವತಿಸಿ ‘ಪಾರ್ವತಿ’ಯನ್ನು 20-08-2020ರಿಂದ 19-08-2021ರ ಅವಧಿಗೆ ದತ್ತು ಪಡೆದು, ಮೃಗಾಲಯ ಮತ್ತು ಪ್ರಾಣಿಗಳ ನಿರ್ವಹಣೆಗೆ ಸಹಕಾರ ನೀಡಿರುವುದಕ್ಕೆ ಮೈಸೂರು ಮೃಗಾಲಯ ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿದೇಶಕ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.