<p><strong>ಮೈಸೂರು: </strong>ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು.</p>.<p>ವಿವಿಧ ಸಂಘಟನೆಗಳು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು ಗೌರವ ನಮನ ಸಮರ್ಪಿಸಲಾಯಿತು. ಇದೇ ಸಂದರ್ಭ ಅಂಬೇಡ್ಕರ್ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.</p>.<p>ಜಯಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಬಸವಣ್ಣ ಮತ್ತು ಸದಸ್ಯರು, ಪಿಡಿಓ ನರಹರಿ ಪುಷ್ಪ ನಮನ ಸಲ್ಲಿಸಿದರು.</p>.<p>ರೈತ ಸಂಪರ್ಕ ಕೇಂದ್ರ, ಬಾಲಕರ ವಿದ್ಯಾರ್ಥಿ ನಿಲಯ, ನಾಡಕಚೇರಿ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಪುಷ್ಪನಮನ ಸಲ್ಲಿಕೆಯಾಯ್ತು.</p>.<p>ಧನಗಹಳ್ಳಿ, ದೇವಗಳ್ಳಿ, ಗೋಪಾಲಪುರ, ಆನಗಳ್ಳಿ, ಕುಮಾರಬೀಡು, ಜಯಪುರ ತಳೂರು, ಮಾವಿನಹಳ್ಳಿ, ಉದ್ಬೂರು, ಮುರುಡಗಳ್ಳಿ, ದೂರ, ಗುಜ್ಜೇಗೌಡನಪುರ, ಅರಸಿನಕೆರೆ, ಮಾರ್ಬಳ್ಳಿ, ಸಿಂಧುವಳ್ಳಿ, ಕಡಕೋಳ, ದೊಡ್ಡಕಾನ್ಯ, ಬ್ಯಾತಹಳ್ಳಿ, ಹಾರೋಹಳ್ಳಿ, ಕಲ್ಲಹಳ್ಳಿ, ಮದ್ದೂರು, ಟಿ.ಕಾಟೂರು, ಕೆಂಚಲಗೂಡು ಸೇರಿದಂತೆ ವಿವಿಧೆಡೆ ಜಯಂತಿ ಆಚರಣೆಯಾಯ್ತು.</p>.<p class="Briefhead">ಅಂಬೇಡ್ಕರ್ಗೆ ನಮನ</p>.<p>ವರುಣಾ: ಎಸ್.ಹೊಸಕೋಟೆ ಗ್ರಾಮದಲ್ಲಿ ಸರಳಾಚರಣೆ ಮೂಲಕ ನಮನ ಸಲ್ಲಿಸಲಾಯಿತು.</p>.<p>ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೊಸಕೋಟೆ ಕುಮಾರ್ ಮಾತನಾಡಿದರು. ಉಪಾಧ್ಯಕ್ಷೆ ಇಂದ್ರಾಣಿ ಕುಮಾರ್, ಸಂಘದ ಅಧ್ಯಕ್ಷ ಸುನೀಲ್, ಉಪಾಧ್ಯಕ್ಷ ಗಿರೀಶ್ ಹಾಜರಿದ್ದರು.</p>.<p>ಸಿದ್ದರಾಮನಹುಂಡಿ, ವರುಣಾ, ಮೆಲ್ಲಹಳ್ಳಿ, ನಗರ್ಲೆ, ದೇವಲಾಪುರ ಇನ್ನಿತರ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಸರಳವಾಗಿ ಆಚರಿಸಿದರು.</p>.<p class="Briefhead"><strong>ಕೊರೊನಾ ಕಾಪಾಡಿದ ಸಮಾನತೆ</strong></p>.<p>ಕೆ.ಆರ್.ನಗರ: ‘ಕೊರೊನಾ ವೈರಸ್ ಯಾವುದೇ ಜಾತಿ, ಮತ, ಧರ್ಮ ಎನ್ನದೇ ಬಡವ–ಶ್ರೀಮಂತರಲ್ಲೂ ಕಾಣಿಸಿಕೊಂಡು ಸಮಾನತೆ ಕಾಪಾಡಿದೆ’ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ ಹೇಳಿದರು.</p>.<p>ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ’ಕೊರೊನಾ ಬರಬಾರದ್ದಾಗಿತ್ತು. ಇದು ಜಾಗತಿಕ ಸಮಸ್ಯೆಯಾಗಿದೆ. ಜತೆಗೆ ನಾವೆಲ್ಲರೂ ಸಮಾನರು’ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.</p>.<p>ಹನಸೋಗೆ ನಾಗರಾಜು, ತಹಶೀಲ್ದಾರ್ ಎಂ.ಮಂಜುಳಾ ಮಾತನಾಡಿದರು. ಪುರಸಭೆ ಸದಸ್ಯ ಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗೊರಗುಂಡಿ ಶ್ರೀನಿವಾಸ ಪ್ರಸಾದ್, ವಕೀಲ ಗೋವಿಂದರಾಜು ಮತ್ತಿತರರಿದ್ದರು.</p>.<p class="Briefhead"><strong>ಪಡಿತರ ವಿತರಣೆ</strong></p>.<p>ಹುಣಸೂರು: ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಲಾಕ್ಡೌನ್ನಿಂದ ಪಡಿತರ ಸಮಸ್ಯೆ ಎದುರಿಸುತ್ತಿರುವ 1 ಸಾವಿರ ಬಡವರಿಗೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ್ ಮಲ್ಲಾಡಿ ಪಡಿತರ ಕಿಟ್ ವಿತರಿಸಿದರು.</p>.<p>ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ 1 ಸಾವಿರ ಕಡು ಬಡವರನ್ನು ಗುರುತಿಸಿದ್ದು, ಮನೆ ಮನೆಗೆ ಪಡಿತರ ಕಿಟ್ ವಿತರಿಸುವ ಕಾರ್ಯ ಹಮ್ಮಿಕೊಂಡಿರುವೆ ಎಂದು ಹೇಳಿದರು.</p>.<p>ಗ್ರಾ.ಪಂ.ಅಧ್ಯಕ್ಷೆ ಚೆಲುವಮ್ಮ, ಉಪಾಧ್ಯಕ್ಷೆ ಸಿಂಗಮ್ಮ, ಮುಖಂಡ ಕೃಷ್ಣಶೆಟ್ಟಿ, ಡಾ.ಪ್ರಫುಲ್ಲಾ ಮಲ್ಲಾಡಿ ಇದ್ದರು.</p>.<p>ನೇರಳಕುಪ್ಪೆ ಗ್ರಾ.ಪಂ.ಕಚೇರಿಯಲ್ಲಿ ಕೆ.ಡಿ.ಮಹೇಶ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪಿಡಿಒ ದೊಡ್ಡಮಾದಯ್ಯ ಅಂಬೇಡ್ಕರ್ ಗುಣಗಾನ ಮಾಡಿದರು.</p>.<p>ಗ್ರಾ.ಪಂ.ಉಪಾಧ್ಯಕ್ಷೆ ಈಶ್ವರಿ, ಸದಸ್ಯರಾದ ಸುಮತಿ, ರಾಮೇಗೌಡ, ಸಣ್ಣತಮ್ಮೇಗೌಡ, ಮಧುರ, ಮುಖಂಡರಾದ ಕರಣೇಗೌಡ ಹಾಜರಿದ್ದರು.</p>.<p class="Briefhead"><strong>ಅಂಬೇಡ್ಕರ್ ಸಮಾಜ</strong></p>.<p>ಸರಗೂರು: ಪಟ್ಟಣದ ನಾಲ್ಕನೇ ವಾರ್ಡ್ನ ಅಂಬೇಡ್ಕರ್ ಸಮಾಜದ ವತಿಯಿಂದ ಜಯಂತಿ ಆಚರಿಸಲಾಯಿತು. ಎಸ್.ಎಲ್.ರಾಜಣ್ಣ, ಸುಬ್ರಹ್ಮಣ್ಯ, ಟ್ರಸ್ಟ್ ಅಧ್ಯಕ್ಷ ಶಿವನಂಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಹಾಜರಿದ್ದರು.</p>.<p class="Briefhead"><strong>‘ಅನುಯಾಯಿಗಳು ಬೇಕು’</strong></p>.<p>ಪಿರಿಯಾಪಟ್ಟಣ: ‘ಅಂಬೇಡ್ಕರ್ಗೆ ಅಭಿಮಾನಿಗಳ ಅವಶ್ಯಕತೆಯಿಲ್ಲ. ಅವರ ಹೋರಾಟ, ಸಿದ್ಧಾಂತದ ರಥವನ್ನು ಎಳೆಯುವ ಅನುಯಾಯಿಗಳು ಬೇಕಾಗಿದ್ದಾರೆ’ ಎಂದು ಉಪನ್ಯಾಸಕ ಡಾ.ಸೋಮಣ್ಣ ಅಭಿಪ್ರಾಯಪಟ್ಟರು.</p>.<p>‘ಮಾನವ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯ ಸಾಮಾಜಿಕ ನ್ಯಾಯದ ಎರಡು ಕಣ್ಣುಗಳು. ಇದಕ್ಕಾಗಿ ತನ್ನ ವೈಚಾರಿಕ ನೆಲೆಗಟ್ಟಿನಲ್ಲಿಯೇ ಕೊನೆಯವರೆಗೂ ಹೋರಾಟ ನಡೆಸಿದರು’ ಎಂದು ಸ್ಮರಿಸಿದರು.</p>.<p>ಎಚ್.ಕೆ.ಮಹೇಶ್, ಶ್ರೀನಿವಾಸ್, ಎಂ.ಹರೀಶ್ ಹಾಜರಿದ್ದರು. ತಾಲ್ಲೂಕಿನ ನಂದಿನಾಥಪುರ ಆಲನಹಳ್ಳಿ, ನವಿಲೂರು, ಕಂದೇಗಾಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಸರಳವಾಗಿ ಆಚರಿಸಲಾಯಿತು.</p>.<p>ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಜಯಂತಿ ಆಚರಿಸಲಾಯಿತು. ಡಾ.ರಚನ್ ರಾಜ್, ಆರೋಗ್ಯ ಮೇಲ್ವಿಚಾರಕರಾದ ಅಜಾರಾಬಿ, ಪುಷ್ಪಲತಾ, ಸಿಬ್ಬಂದಿ ಗೀತಾ, ಮುತ್ತಮ್ಮ ಇದ್ದರು.</p>.<p class="Briefhead"><strong>ಸರಳ ಆಚರಣೆ</strong></p>.<p>ತಿ.ನರಸೀಪುರ: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಸರಳವಾಗಿ ಜಯಂತಿ ಆಚರಿಸಲಾಯಿತು. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.</p>.<p>ತಹಶೀಲ್ದಾರ್ ನಿಶ್ಚಯ್ ಮಾತನಾಡಿದರು. ತಾ.ಪಂ. ಇಓ ಜೆರಾಲ್ಡ್ ರಾಜೇಶ್, ಬಿಇಓ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾ.ಪಂ.ಸದಸ್ಯ ಗಣೇಶ್ ಮತ್ತಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು.</p>.<p>ವಿವಿಧ ಸಂಘಟನೆಗಳು, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು ಗೌರವ ನಮನ ಸಮರ್ಪಿಸಲಾಯಿತು. ಇದೇ ಸಂದರ್ಭ ಅಂಬೇಡ್ಕರ್ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.</p>.<p>ಜಯಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಬಸವಣ್ಣ ಮತ್ತು ಸದಸ್ಯರು, ಪಿಡಿಓ ನರಹರಿ ಪುಷ್ಪ ನಮನ ಸಲ್ಲಿಸಿದರು.</p>.<p>ರೈತ ಸಂಪರ್ಕ ಕೇಂದ್ರ, ಬಾಲಕರ ವಿದ್ಯಾರ್ಥಿ ನಿಲಯ, ನಾಡಕಚೇರಿ, ಸಮುದಾಯ ಆರೋಗ್ಯ ಕೇಂದ್ರದಲ್ಲೂ ಪುಷ್ಪನಮನ ಸಲ್ಲಿಕೆಯಾಯ್ತು.</p>.<p>ಧನಗಹಳ್ಳಿ, ದೇವಗಳ್ಳಿ, ಗೋಪಾಲಪುರ, ಆನಗಳ್ಳಿ, ಕುಮಾರಬೀಡು, ಜಯಪುರ ತಳೂರು, ಮಾವಿನಹಳ್ಳಿ, ಉದ್ಬೂರು, ಮುರುಡಗಳ್ಳಿ, ದೂರ, ಗುಜ್ಜೇಗೌಡನಪುರ, ಅರಸಿನಕೆರೆ, ಮಾರ್ಬಳ್ಳಿ, ಸಿಂಧುವಳ್ಳಿ, ಕಡಕೋಳ, ದೊಡ್ಡಕಾನ್ಯ, ಬ್ಯಾತಹಳ್ಳಿ, ಹಾರೋಹಳ್ಳಿ, ಕಲ್ಲಹಳ್ಳಿ, ಮದ್ದೂರು, ಟಿ.ಕಾಟೂರು, ಕೆಂಚಲಗೂಡು ಸೇರಿದಂತೆ ವಿವಿಧೆಡೆ ಜಯಂತಿ ಆಚರಣೆಯಾಯ್ತು.</p>.<p class="Briefhead">ಅಂಬೇಡ್ಕರ್ಗೆ ನಮನ</p>.<p>ವರುಣಾ: ಎಸ್.ಹೊಸಕೋಟೆ ಗ್ರಾಮದಲ್ಲಿ ಸರಳಾಚರಣೆ ಮೂಲಕ ನಮನ ಸಲ್ಲಿಸಲಾಯಿತು.</p>.<p>ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೊಸಕೋಟೆ ಕುಮಾರ್ ಮಾತನಾಡಿದರು. ಉಪಾಧ್ಯಕ್ಷೆ ಇಂದ್ರಾಣಿ ಕುಮಾರ್, ಸಂಘದ ಅಧ್ಯಕ್ಷ ಸುನೀಲ್, ಉಪಾಧ್ಯಕ್ಷ ಗಿರೀಶ್ ಹಾಜರಿದ್ದರು.</p>.<p>ಸಿದ್ದರಾಮನಹುಂಡಿ, ವರುಣಾ, ಮೆಲ್ಲಹಳ್ಳಿ, ನಗರ್ಲೆ, ದೇವಲಾಪುರ ಇನ್ನಿತರ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಸರಳವಾಗಿ ಆಚರಿಸಿದರು.</p>.<p class="Briefhead"><strong>ಕೊರೊನಾ ಕಾಪಾಡಿದ ಸಮಾನತೆ</strong></p>.<p>ಕೆ.ಆರ್.ನಗರ: ‘ಕೊರೊನಾ ವೈರಸ್ ಯಾವುದೇ ಜಾತಿ, ಮತ, ಧರ್ಮ ಎನ್ನದೇ ಬಡವ–ಶ್ರೀಮಂತರಲ್ಲೂ ಕಾಣಿಸಿಕೊಂಡು ಸಮಾನತೆ ಕಾಪಾಡಿದೆ’ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಚ್ಯುತಾನಂದ ಹೇಳಿದರು.</p>.<p>ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದ ಅವರು, ’ಕೊರೊನಾ ಬರಬಾರದ್ದಾಗಿತ್ತು. ಇದು ಜಾಗತಿಕ ಸಮಸ್ಯೆಯಾಗಿದೆ. ಜತೆಗೆ ನಾವೆಲ್ಲರೂ ಸಮಾನರು’ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.</p>.<p>ಹನಸೋಗೆ ನಾಗರಾಜು, ತಹಶೀಲ್ದಾರ್ ಎಂ.ಮಂಜುಳಾ ಮಾತನಾಡಿದರು. ಪುರಸಭೆ ಸದಸ್ಯ ಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗೊರಗುಂಡಿ ಶ್ರೀನಿವಾಸ ಪ್ರಸಾದ್, ವಕೀಲ ಗೋವಿಂದರಾಜು ಮತ್ತಿತರರಿದ್ದರು.</p>.<p class="Briefhead"><strong>ಪಡಿತರ ವಿತರಣೆ</strong></p>.<p>ಹುಣಸೂರು: ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಲಾಕ್ಡೌನ್ನಿಂದ ಪಡಿತರ ಸಮಸ್ಯೆ ಎದುರಿಸುತ್ತಿರುವ 1 ಸಾವಿರ ಬಡವರಿಗೆ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ್ ಮಲ್ಲಾಡಿ ಪಡಿತರ ಕಿಟ್ ವಿತರಿಸಿದರು.</p>.<p>ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ 1 ಸಾವಿರ ಕಡು ಬಡವರನ್ನು ಗುರುತಿಸಿದ್ದು, ಮನೆ ಮನೆಗೆ ಪಡಿತರ ಕಿಟ್ ವಿತರಿಸುವ ಕಾರ್ಯ ಹಮ್ಮಿಕೊಂಡಿರುವೆ ಎಂದು ಹೇಳಿದರು.</p>.<p>ಗ್ರಾ.ಪಂ.ಅಧ್ಯಕ್ಷೆ ಚೆಲುವಮ್ಮ, ಉಪಾಧ್ಯಕ್ಷೆ ಸಿಂಗಮ್ಮ, ಮುಖಂಡ ಕೃಷ್ಣಶೆಟ್ಟಿ, ಡಾ.ಪ್ರಫುಲ್ಲಾ ಮಲ್ಲಾಡಿ ಇದ್ದರು.</p>.<p>ನೇರಳಕುಪ್ಪೆ ಗ್ರಾ.ಪಂ.ಕಚೇರಿಯಲ್ಲಿ ಕೆ.ಡಿ.ಮಹೇಶ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪಿಡಿಒ ದೊಡ್ಡಮಾದಯ್ಯ ಅಂಬೇಡ್ಕರ್ ಗುಣಗಾನ ಮಾಡಿದರು.</p>.<p>ಗ್ರಾ.ಪಂ.ಉಪಾಧ್ಯಕ್ಷೆ ಈಶ್ವರಿ, ಸದಸ್ಯರಾದ ಸುಮತಿ, ರಾಮೇಗೌಡ, ಸಣ್ಣತಮ್ಮೇಗೌಡ, ಮಧುರ, ಮುಖಂಡರಾದ ಕರಣೇಗೌಡ ಹಾಜರಿದ್ದರು.</p>.<p class="Briefhead"><strong>ಅಂಬೇಡ್ಕರ್ ಸಮಾಜ</strong></p>.<p>ಸರಗೂರು: ಪಟ್ಟಣದ ನಾಲ್ಕನೇ ವಾರ್ಡ್ನ ಅಂಬೇಡ್ಕರ್ ಸಮಾಜದ ವತಿಯಿಂದ ಜಯಂತಿ ಆಚರಿಸಲಾಯಿತು. ಎಸ್.ಎಲ್.ರಾಜಣ್ಣ, ಸುಬ್ರಹ್ಮಣ್ಯ, ಟ್ರಸ್ಟ್ ಅಧ್ಯಕ್ಷ ಶಿವನಂಜು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಹಾಜರಿದ್ದರು.</p>.<p class="Briefhead"><strong>‘ಅನುಯಾಯಿಗಳು ಬೇಕು’</strong></p>.<p>ಪಿರಿಯಾಪಟ್ಟಣ: ‘ಅಂಬೇಡ್ಕರ್ಗೆ ಅಭಿಮಾನಿಗಳ ಅವಶ್ಯಕತೆಯಿಲ್ಲ. ಅವರ ಹೋರಾಟ, ಸಿದ್ಧಾಂತದ ರಥವನ್ನು ಎಳೆಯುವ ಅನುಯಾಯಿಗಳು ಬೇಕಾಗಿದ್ದಾರೆ’ ಎಂದು ಉಪನ್ಯಾಸಕ ಡಾ.ಸೋಮಣ್ಣ ಅಭಿಪ್ರಾಯಪಟ್ಟರು.</p>.<p>‘ಮಾನವ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯ ಸಾಮಾಜಿಕ ನ್ಯಾಯದ ಎರಡು ಕಣ್ಣುಗಳು. ಇದಕ್ಕಾಗಿ ತನ್ನ ವೈಚಾರಿಕ ನೆಲೆಗಟ್ಟಿನಲ್ಲಿಯೇ ಕೊನೆಯವರೆಗೂ ಹೋರಾಟ ನಡೆಸಿದರು’ ಎಂದು ಸ್ಮರಿಸಿದರು.</p>.<p>ಎಚ್.ಕೆ.ಮಹೇಶ್, ಶ್ರೀನಿವಾಸ್, ಎಂ.ಹರೀಶ್ ಹಾಜರಿದ್ದರು. ತಾಲ್ಲೂಕಿನ ನಂದಿನಾಥಪುರ ಆಲನಹಳ್ಳಿ, ನವಿಲೂರು, ಕಂದೇಗಾಲ ಸೇರಿದಂತೆ ಹಲವು ಗ್ರಾಮಗಳಲ್ಲಿ ಸರಳವಾಗಿ ಆಚರಿಸಲಾಯಿತು.</p>.<p>ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಳವಾಗಿ ಜಯಂತಿ ಆಚರಿಸಲಾಯಿತು. ಡಾ.ರಚನ್ ರಾಜ್, ಆರೋಗ್ಯ ಮೇಲ್ವಿಚಾರಕರಾದ ಅಜಾರಾಬಿ, ಪುಷ್ಪಲತಾ, ಸಿಬ್ಬಂದಿ ಗೀತಾ, ಮುತ್ತಮ್ಮ ಇದ್ದರು.</p>.<p class="Briefhead"><strong>ಸರಳ ಆಚರಣೆ</strong></p>.<p>ತಿ.ನರಸೀಪುರ: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಸರಳವಾಗಿ ಜಯಂತಿ ಆಚರಿಸಲಾಯಿತು. ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.</p>.<p>ತಹಶೀಲ್ದಾರ್ ನಿಶ್ಚಯ್ ಮಾತನಾಡಿದರು. ತಾ.ಪಂ. ಇಓ ಜೆರಾಲ್ಡ್ ರಾಜೇಶ್, ಬಿಇಓ ಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ತಾ.ಪಂ.ಸದಸ್ಯ ಗಣೇಶ್ ಮತ್ತಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>