ಎಪಿಸಿಸಿಎಫ್ ಜಗತ್ರಾಮ್, ಮೈಸೂರು ವೃತ್ತದ ಸಿಎಫ್ ಡಾ.ಮಾಲತಿ ಪ್ರಿಯಾ, ಡಿಸಿಎಫ್ಗಳಾದ ಕಮಲಾ ವಿ.ಕರಿಕಾಳನ್, ಶ್ರೀಧರ್, ಪ್ರಸನ್ನಕುಮಾರ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ಸೂಚಿಸಿದರು. ನಂತರ, ಸಾರ್ವಜನಿಕರು, ಮಾಧ್ಯಮದವರು, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಸಿಕೊಂಡಿರುವ ಒಬ್ಬೊಬ್ಬರು ಗೌರವ ಸಲ್ಲಿಸಿದರು. ಪೊಲೀಸ್ ತುಕಡಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವಿಸಿತು.