<p><strong>ಮೈಸೂರು: </strong>ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಕೋವಿಡ್ ಕಾರಣಕ್ಕಾಗಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ಬಹಳಷ್ಟು ಮಂದಿ ಭಕ್ತರು ಬೆಟ್ಟದ ಪಾದದಲ್ಲೇ ದೇವರಿಗೆ ನಮಿಸಿ ಹೊರಟರು. ಆದರೆ, ಸರ್ಕಾರದಿಂದ ಶಿಷ್ಟಾಚಾರ ಪಾಲನೆ ಮಾಡಲಾಗುವ ವ್ಯಕ್ತಿಗಳು ಹಾಗೂ ಅವರೊಂದಿಗೆ ಹಲವು ಮಂದಿ ದೇಗುಲ ಪ್ರವೇಶಿಸಿದರು.</p>.<p>ಉತ್ತನಹಳ್ಳಿ, ತಾವರೆಕಟ್ಟೆ ಹಾಗೂ ಮೆಟ್ಟಿಲುಗಳ ಬಳಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಸಾಮಾನ್ಯ ಜನರನ್ನು ಇಲ್ಲಿ ಪೊಲೀಸರು ಬಿಡಲಿಲ್ಲ. ಮೆಟ್ಟಿಲುಗಳ ಬಳಿಯೇ ಕರ್ಪೂರ ಹಚ್ಚಿ, ಕೈಮುಗಿದ ಭಕ್ತರು ಮನೆಯತ್ತ ಸಾಗಿದರು.</p>.<p>ಆದರೆ, ಶಾಸಕರಾದ ಎಸ್.ಎ.ರಾಮದಾಸ್, ಸಚಿವರಾದ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು ದೇಗುಲ ಪ್ರವೇಶಿಸಿದರು. ನಟ ದರ್ಶನ್ ಅವರೂ ದೇಗುಲಕ್ಕೆ ಬರುತ್ತಾರೆ ಎಂಬ ಊಹಾಪೋಹಾಗಳು ಹರಡಿದ್ದವು. ಆದರೆ, ಅವರು ದೇಗುಲಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಕೋವಿಡ್ ಕಾರಣಕ್ಕಾಗಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ಬಹಳಷ್ಟು ಮಂದಿ ಭಕ್ತರು ಬೆಟ್ಟದ ಪಾದದಲ್ಲೇ ದೇವರಿಗೆ ನಮಿಸಿ ಹೊರಟರು. ಆದರೆ, ಸರ್ಕಾರದಿಂದ ಶಿಷ್ಟಾಚಾರ ಪಾಲನೆ ಮಾಡಲಾಗುವ ವ್ಯಕ್ತಿಗಳು ಹಾಗೂ ಅವರೊಂದಿಗೆ ಹಲವು ಮಂದಿ ದೇಗುಲ ಪ್ರವೇಶಿಸಿದರು.</p>.<p>ಉತ್ತನಹಳ್ಳಿ, ತಾವರೆಕಟ್ಟೆ ಹಾಗೂ ಮೆಟ್ಟಿಲುಗಳ ಬಳಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಸಾಮಾನ್ಯ ಜನರನ್ನು ಇಲ್ಲಿ ಪೊಲೀಸರು ಬಿಡಲಿಲ್ಲ. ಮೆಟ್ಟಿಲುಗಳ ಬಳಿಯೇ ಕರ್ಪೂರ ಹಚ್ಚಿ, ಕೈಮುಗಿದ ಭಕ್ತರು ಮನೆಯತ್ತ ಸಾಗಿದರು.</p>.<p>ಆದರೆ, ಶಾಸಕರಾದ ಎಸ್.ಎ.ರಾಮದಾಸ್, ಸಚಿವರಾದ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು ದೇಗುಲ ಪ್ರವೇಶಿಸಿದರು. ನಟ ದರ್ಶನ್ ಅವರೂ ದೇಗುಲಕ್ಕೆ ಬರುತ್ತಾರೆ ಎಂಬ ಊಹಾಪೋಹಾಗಳು ಹರಡಿದ್ದವು. ಆದರೆ, ಅವರು ದೇಗುಲಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>