ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದ ಮಳೆಯಲ್ಲಿ ಮಿಂದ ಮೈಸೂರು

ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ, ಮೋಡಕವಿದ ವಾತಾವರಣ
Last Updated 3 ಆಗಸ್ಟ್ 2020, 5:56 IST
ಅಕ್ಷರ ಗಾತ್ರ

ಮೈಸೂರು: ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಭಾನುವಾರ ಹದವಾದ ಮಳೆ ಸುರಿದಿದೆ. ಎಲ್ಲೆಡೆ ತಂಪಾದ ವಾತಾವರಣವಿತ್ತು. ಕುಳಿರ್ಗಾಳಿಯ ಬೀಸುವಿಕೆ ಹೆಚ್ಚಿತ್ತು.

ನಂಜನಗೂಡು ತಾಲ್ಲೂಕಿನ ಮರಳೂರಿನಲ್ಲಿ 3.5 ಸೆಂ.ಮೀ.ಗೂ ಅಧಿಕ ಮಳೆಯಾಗಿದೆ. ತಾಲ್ಲೂಕಿನ ಚಿಕ್ಕಯ್ಯನಛತ್ರ, ರಾಮಾಪುರಗಳಲ್ಲಿ 3, ಸುತ್ತೂರಿನಲ್ಲಿ 2 ಸೆಂ.ಮೀ, ಮಲ್ಲೂಪುರ, ತಾಯೂರು, ತಗಡೂರಿನಲ್ಲಿ 1.5, ಹುಳಿಮಾವಿನಲ್ಲಿ 2.5 ಸೆಂ.ಮೀ ಮಳೆಯಾಗಿದೆ.‌

ಮೈಸೂರು ನಗರದಲ್ಲಿ 2 ಸೆಂ.ಮೀ, ಯಡಕೊಳ ಭಾಗದಲ್ಲಿ 1.6, ಶ್ರೀರಾಂಪುರದಲ್ಲಿ 1 ಸೆಂ.ಮೀ ಆಗಿದೆ.

ಎಚ್.ಡಿ.ಕೋಟೆಯ ಅಂತರಸಂತೆ, ಕಂಚಮಳ್ಳಿ, ಹೊಮ್ಮರಗಳ್ಳಿ, ಹೆಬ್ಬಳಗುಪ್ಪೆ ಭಾಗಗಳಲ್ಲಿ 1.5, ಹುಣಸೂರಿನ ಧರ್ಮಾಪುರದ ಕರಿಮುದ್ದನಹಳ್ಳಿ 12.5, ಕೆ.ಆರ್.ನಗರದ ಸಾಲಿಗ್ರಾಮ, ಹರದನಹಳ್ಳಿ, ಲಕ್ಷ್ಮೀಪುರದಲ್ಲಿ 10.5, ಪಿರಿಯಾಪಟ್ಟಣದ ಹಾರನಹಳ್ಳಿ ಕಣಗಾಲು, ದೊಡ್ಡಕಮರವಳ್ಳಿ, ಚಂದಗಾಲುಕಾವಲ್ 12.5‌, ತಿ.ನರಸೀಪುರದ ಕುಪ್ಪೇಗಾಲ ಮತ್ತು ಬೆನಕನಹಳ್ಳಿಯಲ್ಲಿ 2 ಸೆಂ.ಮೀ ಮಳೆ ಸುರಿದಿದೆ. ಸೋಮವಾರವೂ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ನಗರದಲ್ಲಿ ಪೊಲೀಸ್ ಭವನದ ಸಮೀಪ ಮರದ ಕೊಂಬೆ ಬಿದ್ದಿರುವುದು ಬಿಟ್ಟರೆ, ನಗರದಲ್ಲಿ ಮಳೆಯು ಹೆಚ್ಚೇನು ಅನಾಹುತ ಸೃಷ್ಟಿಸಲಿಲ್ಲ.

ಮಳೆಯು ಗ್ರಾಮೀಣ ಪ್ರದೇಶಗಳ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ, ಕೊಳವೆಬಾವಿಗಳಿಗೆ ಸಹಕಾರಿಯಾಗಿದೆ. ಕೆಲವೆಡೆ ಭತ್ತ ಬಿತ್ತನೆಗೆ ತೊಡಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT