<p><strong>ಮೈಸೂರು:</strong> ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಭಾನುವಾರ ಹದವಾದ ಮಳೆ ಸುರಿದಿದೆ. ಎಲ್ಲೆಡೆ ತಂಪಾದ ವಾತಾವರಣವಿತ್ತು. ಕುಳಿರ್ಗಾಳಿಯ ಬೀಸುವಿಕೆ ಹೆಚ್ಚಿತ್ತು.</p>.<p>ನಂಜನಗೂಡು ತಾಲ್ಲೂಕಿನ ಮರಳೂರಿನಲ್ಲಿ 3.5 ಸೆಂ.ಮೀ.ಗೂ ಅಧಿಕ ಮಳೆಯಾಗಿದೆ. ತಾಲ್ಲೂಕಿನ ಚಿಕ್ಕಯ್ಯನಛತ್ರ, ರಾಮಾಪುರಗಳಲ್ಲಿ 3, ಸುತ್ತೂರಿನಲ್ಲಿ 2 ಸೆಂ.ಮೀ, ಮಲ್ಲೂಪುರ, ತಾಯೂರು, ತಗಡೂರಿನಲ್ಲಿ 1.5, ಹುಳಿಮಾವಿನಲ್ಲಿ 2.5 ಸೆಂ.ಮೀ ಮಳೆಯಾಗಿದೆ.</p>.<p>ಮೈಸೂರು ನಗರದಲ್ಲಿ 2 ಸೆಂ.ಮೀ, ಯಡಕೊಳ ಭಾಗದಲ್ಲಿ 1.6, ಶ್ರೀರಾಂಪುರದಲ್ಲಿ 1 ಸೆಂ.ಮೀ ಆಗಿದೆ.</p>.<p>ಎಚ್.ಡಿ.ಕೋಟೆಯ ಅಂತರಸಂತೆ, ಕಂಚಮಳ್ಳಿ, ಹೊಮ್ಮರಗಳ್ಳಿ, ಹೆಬ್ಬಳಗುಪ್ಪೆ ಭಾಗಗಳಲ್ಲಿ 1.5, ಹುಣಸೂರಿನ ಧರ್ಮಾಪುರದ ಕರಿಮುದ್ದನಹಳ್ಳಿ 12.5, ಕೆ.ಆರ್.ನಗರದ ಸಾಲಿಗ್ರಾಮ, ಹರದನಹಳ್ಳಿ, ಲಕ್ಷ್ಮೀಪುರದಲ್ಲಿ 10.5, ಪಿರಿಯಾಪಟ್ಟಣದ ಹಾರನಹಳ್ಳಿ ಕಣಗಾಲು, ದೊಡ್ಡಕಮರವಳ್ಳಿ, ಚಂದಗಾಲುಕಾವಲ್ 12.5, ತಿ.ನರಸೀಪುರದ ಕುಪ್ಪೇಗಾಲ ಮತ್ತು ಬೆನಕನಹಳ್ಳಿಯಲ್ಲಿ 2 ಸೆಂ.ಮೀ ಮಳೆ ಸುರಿದಿದೆ. ಸೋಮವಾರವೂ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.</p>.<p>ನಗರದಲ್ಲಿ ಪೊಲೀಸ್ ಭವನದ ಸಮೀಪ ಮರದ ಕೊಂಬೆ ಬಿದ್ದಿರುವುದು ಬಿಟ್ಟರೆ, ನಗರದಲ್ಲಿ ಮಳೆಯು ಹೆಚ್ಚೇನು ಅನಾಹುತ ಸೃಷ್ಟಿಸಲಿಲ್ಲ.</p>.<p>ಮಳೆಯು ಗ್ರಾಮೀಣ ಪ್ರದೇಶಗಳ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ, ಕೊಳವೆಬಾವಿಗಳಿಗೆ ಸಹಕಾರಿಯಾಗಿದೆ. ಕೆಲವೆಡೆ ಭತ್ತ ಬಿತ್ತನೆಗೆ ತೊಡಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಭಾನುವಾರ ಹದವಾದ ಮಳೆ ಸುರಿದಿದೆ. ಎಲ್ಲೆಡೆ ತಂಪಾದ ವಾತಾವರಣವಿತ್ತು. ಕುಳಿರ್ಗಾಳಿಯ ಬೀಸುವಿಕೆ ಹೆಚ್ಚಿತ್ತು.</p>.<p>ನಂಜನಗೂಡು ತಾಲ್ಲೂಕಿನ ಮರಳೂರಿನಲ್ಲಿ 3.5 ಸೆಂ.ಮೀ.ಗೂ ಅಧಿಕ ಮಳೆಯಾಗಿದೆ. ತಾಲ್ಲೂಕಿನ ಚಿಕ್ಕಯ್ಯನಛತ್ರ, ರಾಮಾಪುರಗಳಲ್ಲಿ 3, ಸುತ್ತೂರಿನಲ್ಲಿ 2 ಸೆಂ.ಮೀ, ಮಲ್ಲೂಪುರ, ತಾಯೂರು, ತಗಡೂರಿನಲ್ಲಿ 1.5, ಹುಳಿಮಾವಿನಲ್ಲಿ 2.5 ಸೆಂ.ಮೀ ಮಳೆಯಾಗಿದೆ.</p>.<p>ಮೈಸೂರು ನಗರದಲ್ಲಿ 2 ಸೆಂ.ಮೀ, ಯಡಕೊಳ ಭಾಗದಲ್ಲಿ 1.6, ಶ್ರೀರಾಂಪುರದಲ್ಲಿ 1 ಸೆಂ.ಮೀ ಆಗಿದೆ.</p>.<p>ಎಚ್.ಡಿ.ಕೋಟೆಯ ಅಂತರಸಂತೆ, ಕಂಚಮಳ್ಳಿ, ಹೊಮ್ಮರಗಳ್ಳಿ, ಹೆಬ್ಬಳಗುಪ್ಪೆ ಭಾಗಗಳಲ್ಲಿ 1.5, ಹುಣಸೂರಿನ ಧರ್ಮಾಪುರದ ಕರಿಮುದ್ದನಹಳ್ಳಿ 12.5, ಕೆ.ಆರ್.ನಗರದ ಸಾಲಿಗ್ರಾಮ, ಹರದನಹಳ್ಳಿ, ಲಕ್ಷ್ಮೀಪುರದಲ್ಲಿ 10.5, ಪಿರಿಯಾಪಟ್ಟಣದ ಹಾರನಹಳ್ಳಿ ಕಣಗಾಲು, ದೊಡ್ಡಕಮರವಳ್ಳಿ, ಚಂದಗಾಲುಕಾವಲ್ 12.5, ತಿ.ನರಸೀಪುರದ ಕುಪ್ಪೇಗಾಲ ಮತ್ತು ಬೆನಕನಹಳ್ಳಿಯಲ್ಲಿ 2 ಸೆಂ.ಮೀ ಮಳೆ ಸುರಿದಿದೆ. ಸೋಮವಾರವೂ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.</p>.<p>ನಗರದಲ್ಲಿ ಪೊಲೀಸ್ ಭವನದ ಸಮೀಪ ಮರದ ಕೊಂಬೆ ಬಿದ್ದಿರುವುದು ಬಿಟ್ಟರೆ, ನಗರದಲ್ಲಿ ಮಳೆಯು ಹೆಚ್ಚೇನು ಅನಾಹುತ ಸೃಷ್ಟಿಸಲಿಲ್ಲ.</p>.<p>ಮಳೆಯು ಗ್ರಾಮೀಣ ಪ್ರದೇಶಗಳ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ, ಕೊಳವೆಬಾವಿಗಳಿಗೆ ಸಹಕಾರಿಯಾಗಿದೆ. ಕೆಲವೆಡೆ ಭತ್ತ ಬಿತ್ತನೆಗೆ ತೊಡಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>