<p>ತಿ.ನರಸೀಪುರ: ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆ ಆಚರಣೆ ವೇಳೆ ಪುರಸಭೆಯ ಅಧಿಕಾರಿಗಳು ಬಾಬೂಜಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಡಾ.ಬಾಬು ಜಗಜೀವನರಾಂ ಸಂಘಟನೆಯ ಮುಖಂಡರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.</p>.<p>ಪುರಸಭೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಬಾಬೂಜಿ ಭಾವಚಿತ್ರದ ಕೆಳಗೆ ಪೊರಕೆ ಇಟ್ಟು ಅಪಮಾನ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.</p>.<p>ಪುರಸಭಾ ಸದಸ್ಯ ಅರ್ಜುನ್ ಮಾತನಾಡಿ, ‘ಬಾಬೂಜಿ ಅವರ ಭಾವಚಿತ್ರವನ್ನು ಕತ್ತಲೆ ಕೋಣೆಯಲ್ಲಿ ಇಡಲಾಗಿದೆ. ಭಾವಚಿತ್ರದ ಕೆಳಗೆ ಪೊರಕೆ ಇಟ್ಟಿದ್ದಾರೆ. ಇದು ಅಸಂಬದ್ಧ ವರ್ತನೆ. ಹಸಿರು ಕ್ರಾಂತಿಯ ಹರಿಕಾರನಿಗೆ ಅಗೌರವ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.</p>.<p>ಸ್ಥಳಕ್ಕೆ ಬಂದ ತಹಶೀಲ್ದಾರ್ ಡಿ.ನಾಗೇಶ್, ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.</p>.<p>ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಮಲೆಯೂರು ಶಂಕರ್, ಗೋವಿಂದರಾಜು, ಖಜಾಂಚಿ ಬಿ.ಎಲ್. ಮಹದೇವ್, ಕಾರ್ಯದರ್ಶಿ ಪುಟ್ಟಸ್ವಾಮಿ, ಮೂಗೂರು ಮಹದೇವ ಸ್ವಾಮಿ, ಕುಮಾರ್, ಸಿ.ಡಿ.ವೆಂಕಟೇಶ್, ಶಿವಣ್ಣ, ರವಿ, ಮಲ್ಲೇಶ್, ಕರಿಯಪ್ಪ, ವಸಂತಕುಮಾರ್, ಮಾದೇ ಸ್ವಾಮಿ, ವಿಶ್ವ, ಶಿವಣ್ಣ, ರವಿ, ಚೇತನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ: ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆ ಆಚರಣೆ ವೇಳೆ ಪುರಸಭೆಯ ಅಧಿಕಾರಿಗಳು ಬಾಬೂಜಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಡಾ.ಬಾಬು ಜಗಜೀವನರಾಂ ಸಂಘಟನೆಯ ಮುಖಂಡರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.</p>.<p>ಪುರಸಭೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಬಾಬೂಜಿ ಭಾವಚಿತ್ರದ ಕೆಳಗೆ ಪೊರಕೆ ಇಟ್ಟು ಅಪಮಾನ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.</p>.<p>ಪುರಸಭಾ ಸದಸ್ಯ ಅರ್ಜುನ್ ಮಾತನಾಡಿ, ‘ಬಾಬೂಜಿ ಅವರ ಭಾವಚಿತ್ರವನ್ನು ಕತ್ತಲೆ ಕೋಣೆಯಲ್ಲಿ ಇಡಲಾಗಿದೆ. ಭಾವಚಿತ್ರದ ಕೆಳಗೆ ಪೊರಕೆ ಇಟ್ಟಿದ್ದಾರೆ. ಇದು ಅಸಂಬದ್ಧ ವರ್ತನೆ. ಹಸಿರು ಕ್ರಾಂತಿಯ ಹರಿಕಾರನಿಗೆ ಅಗೌರವ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.</p>.<p>ಸ್ಥಳಕ್ಕೆ ಬಂದ ತಹಶೀಲ್ದಾರ್ ಡಿ.ನಾಗೇಶ್, ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.</p>.<p>ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಮಲೆಯೂರು ಶಂಕರ್, ಗೋವಿಂದರಾಜು, ಖಜಾಂಚಿ ಬಿ.ಎಲ್. ಮಹದೇವ್, ಕಾರ್ಯದರ್ಶಿ ಪುಟ್ಟಸ್ವಾಮಿ, ಮೂಗೂರು ಮಹದೇವ ಸ್ವಾಮಿ, ಕುಮಾರ್, ಸಿ.ಡಿ.ವೆಂಕಟೇಶ್, ಶಿವಣ್ಣ, ರವಿ, ಮಲ್ಲೇಶ್, ಕರಿಯಪ್ಪ, ವಸಂತಕುಮಾರ್, ಮಾದೇ ಸ್ವಾಮಿ, ವಿಶ್ವ, ಶಿವಣ್ಣ, ರವಿ, ಚೇತನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>