<p><strong>ಮೈಸೂರು:</strong> ತ್ಯಾಗ, ಬಲಿದಾನದ ಪ್ರತೀಕವಾಗಿರುವ ಈದ್-ಉಲ್-ಅಜಾ (ಬಕ್ರೀದ್) ಹಬ್ಬವನ್ನು ನಗರದಲ್ಲಿ ಶನಿವಾರ ಕೊರೊನಾ ಸಂಕಷ್ಟದ ಮಧ್ಯೆ ಸರಳವಾಗಿ ಆಚರಿಸಲಾಯಿತು.</p>.<p>ಈ ಹಿಂದಿನ ವರ್ಷಗಳಲ್ಲಿ ಕಾಣಬರುತ್ತಿದ್ದ ಅದ್ದೂರಿತನವಾಗಲಿ, ಸಾಮೂಹಿಕ ಪ್ರಾರ್ಥನೆಗಳಾಗಲಿ ಈ ಬಾರಿ ಕಂಡು ಬರಲಿಲ್ಲ. ಮಸೀದಿಗಳಲ್ಲಿ 50 ಮಂದಿಗಷ್ಟೇ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಯಿತು. ಎಲ್ಲರೂ ಪೊಲೀಸರ ಈ ನಿಯಮಕ್ಕೆ ಸ್ಪಂದಿಸಿದರು. ಶಾಂತಿಯುತವಾಗಿ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.</p>.<p>ಮೈಸೂರಿನ ತಿಲಕ್ ನಗರ, ರಾಜೀವ್ನಗರ, ಗೌಸಿಯಾ ನಗರ, ಉದಯಗಿರಿ ಸೇರಿದಂತೆ ವಿವಿಧ 172ಕ್ಕೂ ಹೆಚ್ಚಿನ ಮಸೀದಿಗಳಲ್ಲಿ ಮುಸ್ಲಿಮರು ಈದ್ ಪ್ರಯುಕ್ತ ವಿಶೇಷ ‘ವಾಜೀಬ್’ ನಮಾಜ್ ಸಲ್ಲಿಸಿದರು. ಕೆಲಹೊತ್ತು ಧರ್ಮ ಗುರುಗಳಿಂದ ‘ಬಯಾನ್’ (ಪ್ರವಚನ) ಆಲಿಸಿದರು.</p>.<p>ವಿಶೇಷ ಟೋಪಿ, ವಿವಿಧ ಬಗೆಯ ಅತ್ತರ್ ಧರಿಸಿಕೊಂಡು ಕೆಲವರು ನಮಾಜ್ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಹೆಚ್ಚಿನ ಜನರು ಬಂದರೂ ಒಂದು ತಂಡದ ನಂತರ ಮತ್ತೊಂದು ತಂಡದಂತೆ ಅವಕಾಶ ಮಾಡಿಕೊಡಲಾಯಿತು. ಪರಸ್ಪರ ಅಂತರ ಕಾಯ್ದುಕೊಂಡೇ ಪ್ರಾರ್ಥನೆ ಸಲ್ಲಿಸಲಾಯಿತು.</p>.<p>ಬಕ್ರೀದ್ ಹಬ್ಬದ ವಿಶೇಷ ಎನಿಸಿದ ಜಾನುವಾರು ಬಲಿ ಸಹ ಈ ಬಾರಿ ಅಷ್ಟೇನೂ ಅದ್ದೂರಿಯಾಗಿ ನಡೆಯಲಿಲ್ಲ. ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಜಾನುವಾರು ಬಲಿಯ ಸಂಖ್ಯೆಯೂ ಕಡಿಮೆ ಇತ್ತು. ಮಾಂಸವನ್ನು ಬಡವರೊಂದಿಗೆ ಹಂಚಿಕೊಂಡು ಸಾರ್ಥಕತೆ ಮರೆದರು.</p>.<p>ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಇದ್ದಿದ್ದರೆ ಮಕ್ಕಳ ಸಂಭ್ರಮ ಮೇರೆ ಮೀರುತ್ತಿತ್ತು. ಆದರೆ, ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದೇ ಇದ್ದುದ್ದರಿಂದ ಚಿಕ್ಕಮಕ್ಕಳಿಗೆ ಈ ಬಾರಿಯ ಬಕ್ರೀದ್ ಅಷ್ಟೇನೂ ಪ್ರಿಯ ಎನಿಸಲಿಲ್ಲ. ಬಹುತೇಕ ಮಂದಿ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಮಸೀದಿಗಳಿಗೆ ಬಂದಿದ್ದರು.</p>.<p>ಬಿರಿಯಾನಿ ಮತ್ತಿತ್ತರ ಮಾಂಸಾಹಾರಿ ಖಾದ್ಯಗಳನ್ನು ಬಹುತೇಕ ಎಲ್ಲರ ಮನೆಗಳಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ, ಭೋಜನಕ್ಕಾಗಿ ಹಿಂದಿನ ವರ್ಷಗಳಂತೆ ಹೆಚ್ಚಿನ ಜನರಿಗೆ ಆಹ್ವಾನ ನೀಡಿದ್ದು ಕಂಡು ಬರಲಿಲ್ಲ.</p>.<p>ಮೈಸೂರಿನ ಸರ್ ಖಾಜಿಯಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಈ ಬಾರಿ ಕೊರೊನಾ ಸಂಕಷ್ಟದಿಂದಾಗಿ ಅತ್ಯಂತ ಸರಳವಾಗಿ ಬಕ್ರೀದ್ ಆಚರಿಸಲಾಗಿದೆ. ಕೊರೊನಾ ಸಂಕಷ್ಟ ಬೇಗ ನಿವಾರಣೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ತ್ಯಾಗ, ಬಲಿದಾನದ ಪ್ರತೀಕವಾಗಿರುವ ಈದ್-ಉಲ್-ಅಜಾ (ಬಕ್ರೀದ್) ಹಬ್ಬವನ್ನು ನಗರದಲ್ಲಿ ಶನಿವಾರ ಕೊರೊನಾ ಸಂಕಷ್ಟದ ಮಧ್ಯೆ ಸರಳವಾಗಿ ಆಚರಿಸಲಾಯಿತು.</p>.<p>ಈ ಹಿಂದಿನ ವರ್ಷಗಳಲ್ಲಿ ಕಾಣಬರುತ್ತಿದ್ದ ಅದ್ದೂರಿತನವಾಗಲಿ, ಸಾಮೂಹಿಕ ಪ್ರಾರ್ಥನೆಗಳಾಗಲಿ ಈ ಬಾರಿ ಕಂಡು ಬರಲಿಲ್ಲ. ಮಸೀದಿಗಳಲ್ಲಿ 50 ಮಂದಿಗಷ್ಟೇ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಯಿತು. ಎಲ್ಲರೂ ಪೊಲೀಸರ ಈ ನಿಯಮಕ್ಕೆ ಸ್ಪಂದಿಸಿದರು. ಶಾಂತಿಯುತವಾಗಿ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.</p>.<p>ಮೈಸೂರಿನ ತಿಲಕ್ ನಗರ, ರಾಜೀವ್ನಗರ, ಗೌಸಿಯಾ ನಗರ, ಉದಯಗಿರಿ ಸೇರಿದಂತೆ ವಿವಿಧ 172ಕ್ಕೂ ಹೆಚ್ಚಿನ ಮಸೀದಿಗಳಲ್ಲಿ ಮುಸ್ಲಿಮರು ಈದ್ ಪ್ರಯುಕ್ತ ವಿಶೇಷ ‘ವಾಜೀಬ್’ ನಮಾಜ್ ಸಲ್ಲಿಸಿದರು. ಕೆಲಹೊತ್ತು ಧರ್ಮ ಗುರುಗಳಿಂದ ‘ಬಯಾನ್’ (ಪ್ರವಚನ) ಆಲಿಸಿದರು.</p>.<p>ವಿಶೇಷ ಟೋಪಿ, ವಿವಿಧ ಬಗೆಯ ಅತ್ತರ್ ಧರಿಸಿಕೊಂಡು ಕೆಲವರು ನಮಾಜ್ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಹೆಚ್ಚಿನ ಜನರು ಬಂದರೂ ಒಂದು ತಂಡದ ನಂತರ ಮತ್ತೊಂದು ತಂಡದಂತೆ ಅವಕಾಶ ಮಾಡಿಕೊಡಲಾಯಿತು. ಪರಸ್ಪರ ಅಂತರ ಕಾಯ್ದುಕೊಂಡೇ ಪ್ರಾರ್ಥನೆ ಸಲ್ಲಿಸಲಾಯಿತು.</p>.<p>ಬಕ್ರೀದ್ ಹಬ್ಬದ ವಿಶೇಷ ಎನಿಸಿದ ಜಾನುವಾರು ಬಲಿ ಸಹ ಈ ಬಾರಿ ಅಷ್ಟೇನೂ ಅದ್ದೂರಿಯಾಗಿ ನಡೆಯಲಿಲ್ಲ. ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಜಾನುವಾರು ಬಲಿಯ ಸಂಖ್ಯೆಯೂ ಕಡಿಮೆ ಇತ್ತು. ಮಾಂಸವನ್ನು ಬಡವರೊಂದಿಗೆ ಹಂಚಿಕೊಂಡು ಸಾರ್ಥಕತೆ ಮರೆದರು.</p>.<p>ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಇದ್ದಿದ್ದರೆ ಮಕ್ಕಳ ಸಂಭ್ರಮ ಮೇರೆ ಮೀರುತ್ತಿತ್ತು. ಆದರೆ, ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲದೇ ಇದ್ದುದ್ದರಿಂದ ಚಿಕ್ಕಮಕ್ಕಳಿಗೆ ಈ ಬಾರಿಯ ಬಕ್ರೀದ್ ಅಷ್ಟೇನೂ ಪ್ರಿಯ ಎನಿಸಲಿಲ್ಲ. ಬಹುತೇಕ ಮಂದಿ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಮಸೀದಿಗಳಿಗೆ ಬಂದಿದ್ದರು.</p>.<p>ಬಿರಿಯಾನಿ ಮತ್ತಿತ್ತರ ಮಾಂಸಾಹಾರಿ ಖಾದ್ಯಗಳನ್ನು ಬಹುತೇಕ ಎಲ್ಲರ ಮನೆಗಳಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ, ಭೋಜನಕ್ಕಾಗಿ ಹಿಂದಿನ ವರ್ಷಗಳಂತೆ ಹೆಚ್ಚಿನ ಜನರಿಗೆ ಆಹ್ವಾನ ನೀಡಿದ್ದು ಕಂಡು ಬರಲಿಲ್ಲ.</p>.<p>ಮೈಸೂರಿನ ಸರ್ ಖಾಜಿಯಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಈ ಬಾರಿ ಕೊರೊನಾ ಸಂಕಷ್ಟದಿಂದಾಗಿ ಅತ್ಯಂತ ಸರಳವಾಗಿ ಬಕ್ರೀದ್ ಆಚರಿಸಲಾಗಿದೆ. ಕೊರೊನಾ ಸಂಕಷ್ಟ ಬೇಗ ನಿವಾರಣೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>