<p><strong>ತಿ.ನರಸೀಪುರ: </strong>ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ರಾತ್ರಿ ಬೈಕ್ನಿಂದ ಬಿದ್ದು ಯುವಕ ಮೃತಪಟ್ಟು, ಮೊತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.</p>.<p>ಗ್ರಾಮದ ಶ್ರೀರಾಮ ಕಾಲೊನಿಯ ನಿವಾಸಿ ಪುಟ್ಟಸ್ವಾಮಿ ಅವರ ಪುತ್ರ ಅಭಿಷೇಕ್ (25)ಮೃತಪಟ್ಟವರು. ಗ್ರಾಮದ ಬಸ್ ನಿಲ್ದಾಣದ ಕಡೆಗೆ ಹೋಗುವಾಗ ನಾಯಿ ಅಡ್ಡಬಂದಿದೆ. ನಾಯಿ ತಪ್ಪಿಸಲು ಹೋಗಿ ಬೈಕ್ ಕೆಳಗೆ ಬಿದ್ದಿದೆ. ಗಾಯಗೊಂಡ ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.</p>.<p>ಬೈಕ್ ಓಡಿಸುತ್ತಿದ್ದ ಶಶಿಕುಮಾರ್ ಎಂಬಾತ ಗಾಯಗೊಂಡಿದ್ದಾನೆ. ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಬೈಕ್ ಸವಾರ ಸಾವು</strong></p>.<p>ಮೈಸೂರು–ತಿ.ನರಸೀಪುರ ರಸ್ತೆಯ ವರಕೋಡು ಗೇಟ್ ಬಳಿ ಗುರುವಾರ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ತಿ.ನರಸೀಪುರ ತಾಲ್ಲೂಕಿನ ಕಲಿಯೂರು ಗ್ರಾಮದ ರಾಮು (37) ಮೃತಪಟ್ಟಿದ್ದಾರೆ.</p>.<p>ಇವರು ಬೈಕ್ನಲ್ಲಿ ಮೈಸೂರಿನತ್ತ ಬರುತ್ತಿದ್ದರು. ಲಾರಿ ಮೈಸೂರಿನಿಂದ ತಿ.ನರಸೀಪುರದ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವರುಣಾ ಠಾಣೆಯಲ್ಲಿ ದಾಖಲಾಗಿದೆ.</p>.<p class="Briefhead"><strong>ಬಾಲಕ ಸಾವು</strong></p>.<p>ಮೊಬೈಲ್ ಗೇಮ್ ಆಡುವ ಗೀಳು ಹೊಂದಿದ್ದ 14 ವರ್ಷದ ಬಾಲಕನೊಬ್ಬ ಗುರುವಾರ ಸಂಜೆ ಶಟರ್ ಎಳೆಯುವ ಕಬ್ಬಿಣದ ಕೊಕ್ಕೆ ಕುತ್ತಿಗೆಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾನೆ.</p>.<p>9ನೇ ತರಗತಿ ಓದುತ್ತಿದ್ದ ಈ ಬಾಲಕ ಮೊಬೈಲ್ ಗೇಮ್ವೊಂದನ್ನು ಹೆಚ್ಚು ಆಡುತ್ತಿದ್ದ. ಅದರಲ್ಲಿ ನೀಡಿದ್ದ ‘ಟಾಸ್ಕ್’ಅನ್ನು ಪೂರ್ಣಗೊಳಿಸಲು ಕಬ್ಬಿಣದ ಕೊಕ್ಕೆಯನ್ನು ಕುತ್ತಿಗೆಗೆ ಸಿಲುಕಿಸಿಕೊಂಡು ಸಾಹಸ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಕೊಕ್ಕೆಯು ಕುತ್ತಿಗೆಗೆ ಬಿಗಿದು ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ: </strong>ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ರಾತ್ರಿ ಬೈಕ್ನಿಂದ ಬಿದ್ದು ಯುವಕ ಮೃತಪಟ್ಟು, ಮೊತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.</p>.<p>ಗ್ರಾಮದ ಶ್ರೀರಾಮ ಕಾಲೊನಿಯ ನಿವಾಸಿ ಪುಟ್ಟಸ್ವಾಮಿ ಅವರ ಪುತ್ರ ಅಭಿಷೇಕ್ (25)ಮೃತಪಟ್ಟವರು. ಗ್ರಾಮದ ಬಸ್ ನಿಲ್ದಾಣದ ಕಡೆಗೆ ಹೋಗುವಾಗ ನಾಯಿ ಅಡ್ಡಬಂದಿದೆ. ನಾಯಿ ತಪ್ಪಿಸಲು ಹೋಗಿ ಬೈಕ್ ಕೆಳಗೆ ಬಿದ್ದಿದೆ. ಗಾಯಗೊಂಡ ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.</p>.<p>ಬೈಕ್ ಓಡಿಸುತ್ತಿದ್ದ ಶಶಿಕುಮಾರ್ ಎಂಬಾತ ಗಾಯಗೊಂಡಿದ್ದಾನೆ. ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಬೈಕ್ ಸವಾರ ಸಾವು</strong></p>.<p>ಮೈಸೂರು–ತಿ.ನರಸೀಪುರ ರಸ್ತೆಯ ವರಕೋಡು ಗೇಟ್ ಬಳಿ ಗುರುವಾರ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ತಿ.ನರಸೀಪುರ ತಾಲ್ಲೂಕಿನ ಕಲಿಯೂರು ಗ್ರಾಮದ ರಾಮು (37) ಮೃತಪಟ್ಟಿದ್ದಾರೆ.</p>.<p>ಇವರು ಬೈಕ್ನಲ್ಲಿ ಮೈಸೂರಿನತ್ತ ಬರುತ್ತಿದ್ದರು. ಲಾರಿ ಮೈಸೂರಿನಿಂದ ತಿ.ನರಸೀಪುರದ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವರುಣಾ ಠಾಣೆಯಲ್ಲಿ ದಾಖಲಾಗಿದೆ.</p>.<p class="Briefhead"><strong>ಬಾಲಕ ಸಾವು</strong></p>.<p>ಮೊಬೈಲ್ ಗೇಮ್ ಆಡುವ ಗೀಳು ಹೊಂದಿದ್ದ 14 ವರ್ಷದ ಬಾಲಕನೊಬ್ಬ ಗುರುವಾರ ಸಂಜೆ ಶಟರ್ ಎಳೆಯುವ ಕಬ್ಬಿಣದ ಕೊಕ್ಕೆ ಕುತ್ತಿಗೆಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾನೆ.</p>.<p>9ನೇ ತರಗತಿ ಓದುತ್ತಿದ್ದ ಈ ಬಾಲಕ ಮೊಬೈಲ್ ಗೇಮ್ವೊಂದನ್ನು ಹೆಚ್ಚು ಆಡುತ್ತಿದ್ದ. ಅದರಲ್ಲಿ ನೀಡಿದ್ದ ‘ಟಾಸ್ಕ್’ಅನ್ನು ಪೂರ್ಣಗೊಳಿಸಲು ಕಬ್ಬಿಣದ ಕೊಕ್ಕೆಯನ್ನು ಕುತ್ತಿಗೆಗೆ ಸಿಲುಕಿಸಿಕೊಂಡು ಸಾಹಸ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಕೊಕ್ಕೆಯು ಕುತ್ತಿಗೆಗೆ ಬಿಗಿದು ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>