‘ಇದೀಗ ಆರಂಭಿಸಲಾಗುತ್ತಿರುವ ಸಹಾಯವಾಣಿ, ಕೊರೊನಾ ವೈರಸ್ ಭೀತಿ ಸಂಪೂರ್ಣ ನಿರ್ಮೂಲನೆಯಾಗುವ ತನಕವೂ ಕಾರ್ಯಾಚರಿಸಲಿದೆ. ನಾವು ನೀಡಿದ ಮೊಬೈಲ್ ನಂಬರ್ಗಳಿಗೆ ಅವಶ್ಯವಿದ್ದವರು ಕರೆ ಮಾಡಿ, ಏನು ಬೇಕು ಎಂಬುದನ್ನು ತಿಳಿಸಿದರೆ, ನಮ್ಮ ಕಾರ್ಯಕರ್ತರ ಪಡೆ ನಿಮ್ಮ ಮನೆ ಬಾಗಿಲಿಗೆ ಸೇವೆ ಒದಗಿಸಲಿದೆ. ಆ ಸೇವೆಗೆ ತಗುಲುವ ವೆಚ್ಚದ ಅಧಿಕೃತ ಬಿಲ್ ಸಹ ನೀಡಿ, ಅಷ್ಟೇ ಹಣ ಪಡೆದುಕೊಳ್ಳಲಿದೆ’ ಎಂದು ಮಾಹಿತಿ ನೀಡಿದರು.