ನಿಸರ್ಗದೊಡನೆ ಬದುಕನ್ನು ಏಕೀಕರಿಸಿಕೊಂಡು ಬದುಕುವ ಬದಲು, ನಾವು ಕಡಿದುಕೊಂಡು ಬದುಕು ನಡೆಸುತ್ತಿದ್ದೇವೆ. ಮನಸ್ಸಿನಲ್ಲಿ ಕ್ರೂರತೆ ತುಂಬಿಕೊಂಡು ನಾನು, ನನ್ನ ಮನೆ, ನನ್ನ ಕುಟುಂಬ ಎಂಬ ಸ್ವಕೇಂದ್ರಿತ ಬದುಕಿಗೆ ಒಗ್ಗಿ ಹೋಗಿದ್ದೇವೆ. ಆದರೆ, ಶರಣರು ಸಮಾಜದ ಹಿತಕ್ಕಾಗಿ ಬದುಕಿದ್ದರು. ಅಂತಹ ಶಿವಶರಣರಲ್ಲಿ 14ನೇ ಶತಮಾನದಲ್ಲಿಬಸವ ತತ್ವದ ಚಿಂತನೆಗಳನ್ನು ತಿಳಿಸುತ್ತಾ, ಮಾನವೀಯ ಮೌಲ್ಯಗಳ ಬೆಳಕುಕೊಟ್ಟವರು ಕರಸ್ಥಳದ ನಾಗಲಿಂಗ ಶರಣರು ಎಂದು ಅವರು ಹೇಳಿದರು.