‘ಮಂಗಳವಾರ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ ಇರುವುದಿಲ್ಲ. ಆದರೆ, ಮಧ್ಯಾಹ್ನ 3 ಗಂಟೆ ಬಳಿಕ ಬೆಟ್ಟದಲ್ಲಿ ದಾಸೋಹ ಇರುವುದಿಲ್ಲ. ರಾತ್ರಿ ಎಂದಿನಂತೆ 9 ಗಂಟೆಗೆ ಬಾಗಿಲು ಮುಚ್ಚುತ್ತೇವೆ. ಬುಧವಾರ ನಸುಕಿನ 3 ಗಂಟೆಯಿಂದ 4.45ರವರೆಗೆ ಪೂಜೆ ನಡೆಯಲಿದೆ. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷದವರೆಗೆ ಜಪ-ತಪ, ಮಂತ್ರ ಪಠಣ ನಡೆಯಲಿವೆ. ಬಳಿಕ ದೇಗುಲ ವನ್ನು ಶುದ್ಧಿಗೊಳಿಸಿ ಬೆಳಿಗ್ಗೆ 8 ಗಂಟೆಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.