<p><strong>ಮೈಸೂರು</strong>: ಗೌರಿ–ಗಣಪನ ಮೂರ್ತಿಗಳ ಮಾರಾಟಗಾರರ ಮೇಲೆ ಕವಿದಿರುವ ಕೋವಿಡ್ ಕಾರ್ಮೋಡ ಇನ್ನೂ ಮರೆಗೆ ಸರಿದಿಲ್ಲ. ಹಬ್ಬದ ಆಚರಣೆಗೆ ಜಿಲ್ಲಾಡಳಿತ ಕೆಲ ನಿರ್ಬಂಧ ಹೇರಿರುವುದರಿಂದ ಈ ಬಾರಿಯೂ ವ್ಯಾಪಾರ ನೀರಸವಾಗಿದೆ. ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.</p>.<p>ಗಣೇಶ ಚತುರ್ಥಿಗೂ ಮೂರು ದಿನಗಳ ಮುನ್ನ ಗೌರಿ–ಗಣಪನ ಮೂರ್ತಿಗಳ ಖರೀದಿ ಆರಂಭವಾಗುತ್ತದೆ. ನಗರದ ಗಾಂಧಿ ಚೌಕ, ಒಲಂಪಿಯ ಚಿತ್ರಮಂದಿರದ ಬಳಿ, ಕುಂಬಾರಗೇರಿ, ಅಗ್ರಹಾರ, ವಿದ್ಯಾರಣ್ಯಪುರಂ, ಹೆಬ್ಬಾಳ, ಕುಂಬಾರಕೊಪ್ಪಲು, ದಟ್ಟಗಳ್ಳಿ ಸೇರಿದಂತೆ ನಗರದ ಹಲವೆಡೆ ಬುಧವಾರ ಮೂರ್ತಿಗಳ ಖರೀದಿ ನೀರಸವಾಗಿತ್ತು.</p>.<p>ಈ ಬಾರಿ ಮೂರ್ತಿಗಳ ದರ ಹೆಚ್ಚಾಗಿಲ್ಲ. ಕೆಲ ವ್ಯಾಪಾರಿಗಳು ಶೇ 5ರಷ್ಟು ಬೆಲೆ ಏರಿಸಿದ್ದರೂ, ಗ್ರಾಹಕರ ಕೊರತೆಯಿಂದಾಗಿ ಕಡಿಮೆ ದರಕ್ಕೇ ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಬುಧವಾರ ಬೆಳಿಗ್ಗೆಯಿಂದ ಎಲ್ಲೆಡೆ ಮೂರ್ತಿಗಳ ಮಾರಾಟಕ್ಕೆ ವರ್ತಕರು ಅಣಿಯಾಗಿದ್ದರು. 4 ಅಡಿವರೆಗಿನ ಮೂರ್ತಿಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೂ, ಬಹುತೇಕ ವ್ಯಾಪಾರಿಗಳು 2 ಅಡಿವರೆಗಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಗಾಂಧಿ ಚೌಕದ ಹನುಮಂತರಾವ್ ರಸ್ತೆಯಲ್ಲಿ 10ಕ್ಕೂ ಹೆಚ್ಚಿನ ವರ್ತಕರು ಕಂಡರು. ಆದರೆ, ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.</p>.<p>ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರಸಿದ್ಧಿ ಪಡೆದಿರುವ<strong>ಕುಂಬಾರಗೇರಿಯಲ್ಲಿ</strong> ಅನೇಕ ಮನೆಗಳ ಎದುರು, ಗಲ್ಲಿಗಳಲ್ಲಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಅಲ್ಲಿಯೂ ಗ್ರಾಹಕರು ಕಡಿಮೆ ಇದ್ದರು.</p>.<p>ಕುಂಬಾರಗೇರಿ 3ನೇ ಅಡ್ಡರಸ್ತೆಯ ನಿವಾಸಿ ಗಾಯತ್ರಿ, ‘ಈ ವರ್ಷ 3 ಇಂಚಿನಿಂದ 1.5 ಅಡಿವರೆಗೂ ಸುಮಾರು 2 ಸಾವಿರ ಮೂರ್ತಿಗಳನ್ನು ತಯಾರಿಸಿದ್ದೇವೆ. ಸಗಟು ವ್ಯಾಪಾರವೂ ಕಡಿಮೆಯಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಕುಂಬಾರಗೇರಿಯ ಭಾರತಿ ಈ ಬಾರಿ ಸಗಟು ವ್ಯಾಪಾರವನ್ನೇ ನಿಲ್ಲಿಸಿದ್ದಾರೆ. ಪ್ರತಿ ವರ್ಷ 1 ಸಾವಿರ ಮೂರ್ತಿಗಳನ್ನು ತಯಾರಿಸುತ್ತಿದ್ದವರು ಈ ಬಾರಿ 300 ಮೂರ್ತಿಗಳನ್ನು ತಯಾರಿಸಿದ್ದು, ಮನೆ ಮುಂದೆಯೇ ಮಾರಾಟಕ್ಕೆ ಇಟ್ಟಿದ್ದಾರೆ.</p>.<p>ಹನುಮಂತರಾವ್ ರಸ್ತೆಯಲ್ಲಿ ಮೂರ್ತಿಗಳ ಮಾರಾಟದಲ್ಲಿ ತೊಡಗಿದ್ದ ಕುಂಬಾರಕೊಪ್ಪಲಿನ ರಾಜಶ್ರೀ, ಶ್ರೀನಿವಾಸ್, ಹೆಬ್ಬಾಳದ ಆರ್.ಕುಮಾರ್, ರಾಮಸ್ವಾಮಿ ವೃತ್ತದ ವಿನಯ್ ಅವರು ಗುರುವಾರ, ಶುಕ್ರವಾರ ವಹಿವಾಟು ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.</p>.<p>ಮನೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಮಾತ್ರ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಮೂರ್ತಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ‘ಹಬ್ಬದ ಆಚರಣೆ ಸಾಧಾರಣವಾಗಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಕೋವಿಡ್ನಿಂದಾಗಿ ಅದ್ಧೂರಿ ಆಚರಣೆ ಮಾಡುತ್ತಿಲ್ಲ’ ಎಂದು ವಸಂತನಗರದ ನಾಗರಾಜ್ ತಿಳಿಸಿದರು.</p>.<p>***</p>.<p><strong>ಮೂರ್ತಿಗಳನ್ನು ನಾವೇ ತಯಾರಿಸಿ ಮಾರಾಟಕ್ಕೆ ಇಟ್ಟಿದ್ದೇವೆ. ನಿರೀಕ್ಷಿತ ಮಟ್ಟದಲ್ಲಿ ಖರೀದಿ ನಡೆದಿಲ್ಲ.</strong></p>.<p><strong>–ತನುಜಾ, ಕುಂಬಾರಕೊಪ್ಪಲು</strong></p>.<p>***</p>.<p><strong>ಯರಗನಹಳ್ಳಿಯಿಂದ ಮೂರ್ತಿಗಳನ್ನು ತಂದಿದ್ದೇವೆ. ಕೋವಿಡ್ನಿಂದಾಗಿ ಖರೀದಿ ಕಡಿಮೆಯಾಗಿದೆ.</strong></p>.<p><strong>–ವಿನಯ್, ಗಣೇಶ ಮೂರ್ತಿ ವ್ಯಾಪಾರಿ</strong></p>.<p>***</p>.<p><strong>ಬೆಂಗಳೂರಿನಿಂದ ಮೂರ್ತಿಗಳನ್ನು ತಂದಿದ್ದೇನೆ. ಮಧ್ಯಾಹ್ನವಾದರೂ ಖರೀದಿಯೇ ನಡೆದಿಲ್ಲ.</strong></p>.<p><strong>–ವೇಣುಗೋಪಾಲ್, ಕುವೆಂಪುನಗರ</strong></p>.<p>***</p>.<p><strong>ಗೌರಿ ಹಬ್ಬ ಆಚರಿಸುವುದರಿಂದ ಗೌರಿ ಮೂರ್ತಿ ಖರೀದಿಗೆ ಬಂದಿದ್ದೇನೆ. ಹಬ್ಬ ಜೋರಾಗಿದೆ.</strong></p>.<p><strong>–ಗಾಯತ್ರಿ, ಹೆಬ್ಬಾಳ</strong></p>.<p>***</p>.<p><strong>ಮನೆಯಲ್ಲಿ 2 ಅಡಿ ಗಣಪತಿ ಪ್ರತಿಷ್ಠಾಪಿಸಲಿದ್ದು, ಒಳ್ಳೆಯ ಮೂರ್ತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮುಂಗಡ ನೀಡಿ ಗುರುವಾರ ಖರೀದಿಸುತ್ತೇವೆ.</strong></p>.<p><strong>–ಸರಸ್ವತಿ, ಲಷ್ಕರ್ ಮೊಹಲ್ಲಾ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಗೌರಿ–ಗಣಪನ ಮೂರ್ತಿಗಳ ಮಾರಾಟಗಾರರ ಮೇಲೆ ಕವಿದಿರುವ ಕೋವಿಡ್ ಕಾರ್ಮೋಡ ಇನ್ನೂ ಮರೆಗೆ ಸರಿದಿಲ್ಲ. ಹಬ್ಬದ ಆಚರಣೆಗೆ ಜಿಲ್ಲಾಡಳಿತ ಕೆಲ ನಿರ್ಬಂಧ ಹೇರಿರುವುದರಿಂದ ಈ ಬಾರಿಯೂ ವ್ಯಾಪಾರ ನೀರಸವಾಗಿದೆ. ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದಾರೆ.</p>.<p>ಗಣೇಶ ಚತುರ್ಥಿಗೂ ಮೂರು ದಿನಗಳ ಮುನ್ನ ಗೌರಿ–ಗಣಪನ ಮೂರ್ತಿಗಳ ಖರೀದಿ ಆರಂಭವಾಗುತ್ತದೆ. ನಗರದ ಗಾಂಧಿ ಚೌಕ, ಒಲಂಪಿಯ ಚಿತ್ರಮಂದಿರದ ಬಳಿ, ಕುಂಬಾರಗೇರಿ, ಅಗ್ರಹಾರ, ವಿದ್ಯಾರಣ್ಯಪುರಂ, ಹೆಬ್ಬಾಳ, ಕುಂಬಾರಕೊಪ್ಪಲು, ದಟ್ಟಗಳ್ಳಿ ಸೇರಿದಂತೆ ನಗರದ ಹಲವೆಡೆ ಬುಧವಾರ ಮೂರ್ತಿಗಳ ಖರೀದಿ ನೀರಸವಾಗಿತ್ತು.</p>.<p>ಈ ಬಾರಿ ಮೂರ್ತಿಗಳ ದರ ಹೆಚ್ಚಾಗಿಲ್ಲ. ಕೆಲ ವ್ಯಾಪಾರಿಗಳು ಶೇ 5ರಷ್ಟು ಬೆಲೆ ಏರಿಸಿದ್ದರೂ, ಗ್ರಾಹಕರ ಕೊರತೆಯಿಂದಾಗಿ ಕಡಿಮೆ ದರಕ್ಕೇ ಮಾರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಬುಧವಾರ ಬೆಳಿಗ್ಗೆಯಿಂದ ಎಲ್ಲೆಡೆ ಮೂರ್ತಿಗಳ ಮಾರಾಟಕ್ಕೆ ವರ್ತಕರು ಅಣಿಯಾಗಿದ್ದರು. 4 ಅಡಿವರೆಗಿನ ಮೂರ್ತಿಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೂ, ಬಹುತೇಕ ವ್ಯಾಪಾರಿಗಳು 2 ಅಡಿವರೆಗಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಗಾಂಧಿ ಚೌಕದ ಹನುಮಂತರಾವ್ ರಸ್ತೆಯಲ್ಲಿ 10ಕ್ಕೂ ಹೆಚ್ಚಿನ ವರ್ತಕರು ಕಂಡರು. ಆದರೆ, ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.</p>.<p>ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ಪ್ರಸಿದ್ಧಿ ಪಡೆದಿರುವ<strong>ಕುಂಬಾರಗೇರಿಯಲ್ಲಿ</strong> ಅನೇಕ ಮನೆಗಳ ಎದುರು, ಗಲ್ಲಿಗಳಲ್ಲಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಅಲ್ಲಿಯೂ ಗ್ರಾಹಕರು ಕಡಿಮೆ ಇದ್ದರು.</p>.<p>ಕುಂಬಾರಗೇರಿ 3ನೇ ಅಡ್ಡರಸ್ತೆಯ ನಿವಾಸಿ ಗಾಯತ್ರಿ, ‘ಈ ವರ್ಷ 3 ಇಂಚಿನಿಂದ 1.5 ಅಡಿವರೆಗೂ ಸುಮಾರು 2 ಸಾವಿರ ಮೂರ್ತಿಗಳನ್ನು ತಯಾರಿಸಿದ್ದೇವೆ. ಸಗಟು ವ್ಯಾಪಾರವೂ ಕಡಿಮೆಯಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಕುಂಬಾರಗೇರಿಯ ಭಾರತಿ ಈ ಬಾರಿ ಸಗಟು ವ್ಯಾಪಾರವನ್ನೇ ನಿಲ್ಲಿಸಿದ್ದಾರೆ. ಪ್ರತಿ ವರ್ಷ 1 ಸಾವಿರ ಮೂರ್ತಿಗಳನ್ನು ತಯಾರಿಸುತ್ತಿದ್ದವರು ಈ ಬಾರಿ 300 ಮೂರ್ತಿಗಳನ್ನು ತಯಾರಿಸಿದ್ದು, ಮನೆ ಮುಂದೆಯೇ ಮಾರಾಟಕ್ಕೆ ಇಟ್ಟಿದ್ದಾರೆ.</p>.<p>ಹನುಮಂತರಾವ್ ರಸ್ತೆಯಲ್ಲಿ ಮೂರ್ತಿಗಳ ಮಾರಾಟದಲ್ಲಿ ತೊಡಗಿದ್ದ ಕುಂಬಾರಕೊಪ್ಪಲಿನ ರಾಜಶ್ರೀ, ಶ್ರೀನಿವಾಸ್, ಹೆಬ್ಬಾಳದ ಆರ್.ಕುಮಾರ್, ರಾಮಸ್ವಾಮಿ ವೃತ್ತದ ವಿನಯ್ ಅವರು ಗುರುವಾರ, ಶುಕ್ರವಾರ ವಹಿವಾಟು ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.</p>.<p>ಮನೆಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರು ಮಾತ್ರ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಮೂರ್ತಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ‘ಹಬ್ಬದ ಆಚರಣೆ ಸಾಧಾರಣವಾಗಿದೆ. ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ. ಕೋವಿಡ್ನಿಂದಾಗಿ ಅದ್ಧೂರಿ ಆಚರಣೆ ಮಾಡುತ್ತಿಲ್ಲ’ ಎಂದು ವಸಂತನಗರದ ನಾಗರಾಜ್ ತಿಳಿಸಿದರು.</p>.<p>***</p>.<p><strong>ಮೂರ್ತಿಗಳನ್ನು ನಾವೇ ತಯಾರಿಸಿ ಮಾರಾಟಕ್ಕೆ ಇಟ್ಟಿದ್ದೇವೆ. ನಿರೀಕ್ಷಿತ ಮಟ್ಟದಲ್ಲಿ ಖರೀದಿ ನಡೆದಿಲ್ಲ.</strong></p>.<p><strong>–ತನುಜಾ, ಕುಂಬಾರಕೊಪ್ಪಲು</strong></p>.<p>***</p>.<p><strong>ಯರಗನಹಳ್ಳಿಯಿಂದ ಮೂರ್ತಿಗಳನ್ನು ತಂದಿದ್ದೇವೆ. ಕೋವಿಡ್ನಿಂದಾಗಿ ಖರೀದಿ ಕಡಿಮೆಯಾಗಿದೆ.</strong></p>.<p><strong>–ವಿನಯ್, ಗಣೇಶ ಮೂರ್ತಿ ವ್ಯಾಪಾರಿ</strong></p>.<p>***</p>.<p><strong>ಬೆಂಗಳೂರಿನಿಂದ ಮೂರ್ತಿಗಳನ್ನು ತಂದಿದ್ದೇನೆ. ಮಧ್ಯಾಹ್ನವಾದರೂ ಖರೀದಿಯೇ ನಡೆದಿಲ್ಲ.</strong></p>.<p><strong>–ವೇಣುಗೋಪಾಲ್, ಕುವೆಂಪುನಗರ</strong></p>.<p>***</p>.<p><strong>ಗೌರಿ ಹಬ್ಬ ಆಚರಿಸುವುದರಿಂದ ಗೌರಿ ಮೂರ್ತಿ ಖರೀದಿಗೆ ಬಂದಿದ್ದೇನೆ. ಹಬ್ಬ ಜೋರಾಗಿದೆ.</strong></p>.<p><strong>–ಗಾಯತ್ರಿ, ಹೆಬ್ಬಾಳ</strong></p>.<p>***</p>.<p><strong>ಮನೆಯಲ್ಲಿ 2 ಅಡಿ ಗಣಪತಿ ಪ್ರತಿಷ್ಠಾಪಿಸಲಿದ್ದು, ಒಳ್ಳೆಯ ಮೂರ್ತಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಮುಂಗಡ ನೀಡಿ ಗುರುವಾರ ಖರೀದಿಸುತ್ತೇವೆ.</strong></p>.<p><strong>–ಸರಸ್ವತಿ, ಲಷ್ಕರ್ ಮೊಹಲ್ಲಾ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>