<p><strong>ಮೈಸೂರು:</strong> ಕೋವಿಡ್ ದೃಢಪಡುವ ಪ್ರಮಾಣ ಇಳಿಕೆಯಾಗುತ್ತಿರುವ ಬೆನ್ನಿಗೆ, ಸರ್ಕಾರದ ಸೂಚನೆಯನುಸಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಪತ್ತೆಗಾಗಿ ತಪಾಸಣೆಯನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಈಚೆಗಷ್ಟೇ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಹಳ್ಳಿಗಳಲ್ಲಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು.</p>.<p>ಈ ವಿದ್ಯಮಾನದ ಬೆನ್ನಿಗೆ ಜಿಲ್ಲಾಡಳಿತ ಜಿಲ್ಲೆಯ ಏಳು ತಾಲ್ಲೂಕಿನ ಹಳ್ಳಿಗಳಲ್ಲೂ ತಪಾಸಣೆಗೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕಾರ್ಯಪಡೆಯೂ ಕೋವಿಡ್ ತಪಾಸಣೆಯನ್ನು ಗ್ರಾಮಗಳಲ್ಲೂ ನಡೆಸುವಂತೆ ಸೂಚಿಸಿದೆ.</p>.<p>ಸರ್ವೆ ಆಧಾರದಲ್ಲಿ ತಪಾಸಣೆ: ‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆ ಸರ್ವೆ ನಡೆಸಲಾಗುತ್ತಿದೆ. ಈ ಸರ್ವೆಯಲ್ಲಿ ಸೋಂಕಿನ ಗುಣಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಮೊದಲು ಇವರನ್ನು ತಪಾಸಣೆಗೊಳಪಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೇಶ್ ತಿಳಿಸಿದರು.</p>.<p>‘ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕಿನ ಲಕ್ಷಣ ಹೊಂದಿರುವ 50ಕ್ಕೂ ಹೆಚ್ಚು ವ್ಯಕ್ತಿಗಳಿದ್ದಾರೋ, ಅಂತಹ ಗ್ರಾಮಗಳಲ್ಲಿ ಪರೀಕ್ಷೆಗೆ ಮೊದಲ ಒತ್ತು ನೀಡಲಾಗುವುದು. ಇದೀಗ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ನಲ್ಲಿ ತಪಾಸಣೆ ನಡೆಸುವುದರಿಂದ ಸ್ಥಳದಲ್ಲಿಯೇ ವರದಿ ಗೊತ್ತಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.</p>.<p>‘ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯಲ್ಲೇ ಐಸೋಲೇಟ್ ಆಗುವ ಎಲ್ಲ ಅವಕಾಶ ಇದ್ದರೆ ಮಾತ್ರ, ಅಂತಹವರಿಗೆ ಹೋಂ ಐಸೋಲೇಷನ್ ಆಗಲು ಅವಕಾಶ ನೀಡುತ್ತೇವೆ. ಸೌಲಭ್ಯಗಳ ಕೊರತೆಯಿದ್ದರೆ ಸಮೀಪದ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುವುದು’ ಎಂದು ಯೋಗೇಶ್ ಮಾಹಿತಿ ನೀಡಿದರು.</p>.<p>‘ಜಿಲ್ಲಾ ಆರೋಗ್ಯ ಇಲಾಖೆಗೆ ಈಗಾಗಲೇ 10 ಸಾವಿರ ಪರೀಕ್ಷಾ ಕಿಟ್ ಬಂದಿವೆ. ಉಳಿದವು ಶೀಘ್ರದಲ್ಲೇ ಬರಲಿವೆ. ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸೋಂಕಿನ ಲಕ್ಷಣ ಹೊಂದಿರುವ 2 ಸಾವಿರ ಜನರ ಪರೀಕ್ಷೆ ನಡೆಸಲಾಗುವುದು. ಶುಕ್ರವಾರದಿಂದಲೇ ಜಿಲ್ಲೆಯಾದ್ಯಂತ ತಪಾಸಣೆಗೆ ಚಾಲನೆ ಸಿಗಲಿದೆ’ ಎಂದು ಅವರು ತಿಳಿಸಿದರು.</p>.<p><strong>19 ಕೋವಿಡ್ ಆರೈಕೆ ಕೇಂದ್ರ</strong><br />‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ 19 ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಹೋಬಳಿಗೊಂದು ಕೇಂದ್ರ ಆರಂಭಿಸಲು ಬೇಕಾದ ಸಿದ್ಧತೆ ನಡೆಸಿಕೊಳ್ಳಿ ಎಂದು ತಾ.ಪಂ. ಇಒಗಳಿಗೆ ಸೂಚಿಸಲಾಗಿದೆ’ ಎಂದು ಸಿಇಒ ತಿಳಿಸಿದರು.</p>.<p>‘ಒಂದೊಂದು ತಾಲ್ಲೂಕಿಗೆ ಐದು ತಂಡ ನಿಯೋಜಿಸಲಾಗಿದೆ. 35 ವಾಹನಗಳನ್ನು ಕೊಡಲಾಗಿದೆ. ಈ ಮೊಬೈಲ್ ತಪಾಸಣಾ ವಾಹನದಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ, ಸ್ಟಾಫ್ ನರ್ಸ್, ಸ್ವ್ಯಾಬ್ ತೆಗೆಯಲು ಎಎನ್ಎಂ, ಆಶಾ–ಅಂಗನವಾಡಿ ಕಾರ್ಯಕರ್ತೆ, ಗ್ರೂಪ್ ಡಿ ಸಿಬ್ಬಂದಿಯೊಬ್ಬರಿರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.</p>.<p>‘ತಹಶೀಲ್ದಾರ್, ಇಒ, ಟಿಎಚ್ಒ ಸೂಚಿಸುವ ಸ್ಥಳಗಳಿಗೆ ಈ ಮೊಬೈಲ್ ವಾಹನ ತಂಡಗಳು ತೆರಳಿ ಕೋವಿಡ್ ತಪಾಸಣೆ ನಡೆಸಲಿವೆ. ಹಂತ ಹಂತವಾಗಿ ಈ ಸೇವೆ ಹೆಚ್ಚಿಸಲಾಗುವುದು’ ಎಂದು ಯೋಗೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕೋವಿಡ್ ದೃಢಪಡುವ ಪ್ರಮಾಣ ಇಳಿಕೆಯಾಗುತ್ತಿರುವ ಬೆನ್ನಿಗೆ, ಸರ್ಕಾರದ ಸೂಚನೆಯನುಸಾರ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಪತ್ತೆಗಾಗಿ ತಪಾಸಣೆಯನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ.</p>.<p>ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಈಚೆಗಷ್ಟೇ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಹಳ್ಳಿಗಳಲ್ಲಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು.</p>.<p>ಈ ವಿದ್ಯಮಾನದ ಬೆನ್ನಿಗೆ ಜಿಲ್ಲಾಡಳಿತ ಜಿಲ್ಲೆಯ ಏಳು ತಾಲ್ಲೂಕಿನ ಹಳ್ಳಿಗಳಲ್ಲೂ ತಪಾಸಣೆಗೆ ಮುಂದಾಗಿದೆ. ಇದಕ್ಕೆ ಪೂರಕವಾಗಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕಾರ್ಯಪಡೆಯೂ ಕೋವಿಡ್ ತಪಾಸಣೆಯನ್ನು ಗ್ರಾಮಗಳಲ್ಲೂ ನಡೆಸುವಂತೆ ಸೂಚಿಸಿದೆ.</p>.<p>ಸರ್ವೆ ಆಧಾರದಲ್ಲಿ ತಪಾಸಣೆ: ‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆ ಸರ್ವೆ ನಡೆಸಲಾಗುತ್ತಿದೆ. ಈ ಸರ್ವೆಯಲ್ಲಿ ಸೋಂಕಿನ ಗುಣಲಕ್ಷಣ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಮೊದಲು ಇವರನ್ನು ತಪಾಸಣೆಗೊಳಪಡಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿಯ ಸಿಇಒ ಎ.ಎಂ.ಯೋಗೇಶ್ ತಿಳಿಸಿದರು.</p>.<p>‘ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕಿನ ಲಕ್ಷಣ ಹೊಂದಿರುವ 50ಕ್ಕೂ ಹೆಚ್ಚು ವ್ಯಕ್ತಿಗಳಿದ್ದಾರೋ, ಅಂತಹ ಗ್ರಾಮಗಳಲ್ಲಿ ಪರೀಕ್ಷೆಗೆ ಮೊದಲ ಒತ್ತು ನೀಡಲಾಗುವುದು. ಇದೀಗ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ನಲ್ಲಿ ತಪಾಸಣೆ ನಡೆಸುವುದರಿಂದ ಸ್ಥಳದಲ್ಲಿಯೇ ವರದಿ ಗೊತ್ತಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದರು.</p>.<p>‘ಸೋಂಕು ದೃಢಪಟ್ಟ ವ್ಯಕ್ತಿಯ ಮನೆಯಲ್ಲೇ ಐಸೋಲೇಟ್ ಆಗುವ ಎಲ್ಲ ಅವಕಾಶ ಇದ್ದರೆ ಮಾತ್ರ, ಅಂತಹವರಿಗೆ ಹೋಂ ಐಸೋಲೇಷನ್ ಆಗಲು ಅವಕಾಶ ನೀಡುತ್ತೇವೆ. ಸೌಲಭ್ಯಗಳ ಕೊರತೆಯಿದ್ದರೆ ಸಮೀಪದ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುವುದು’ ಎಂದು ಯೋಗೇಶ್ ಮಾಹಿತಿ ನೀಡಿದರು.</p>.<p>‘ಜಿಲ್ಲಾ ಆರೋಗ್ಯ ಇಲಾಖೆಗೆ ಈಗಾಗಲೇ 10 ಸಾವಿರ ಪರೀಕ್ಷಾ ಕಿಟ್ ಬಂದಿವೆ. ಉಳಿದವು ಶೀಘ್ರದಲ್ಲೇ ಬರಲಿವೆ. ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸೋಂಕಿನ ಲಕ್ಷಣ ಹೊಂದಿರುವ 2 ಸಾವಿರ ಜನರ ಪರೀಕ್ಷೆ ನಡೆಸಲಾಗುವುದು. ಶುಕ್ರವಾರದಿಂದಲೇ ಜಿಲ್ಲೆಯಾದ್ಯಂತ ತಪಾಸಣೆಗೆ ಚಾಲನೆ ಸಿಗಲಿದೆ’ ಎಂದು ಅವರು ತಿಳಿಸಿದರು.</p>.<p><strong>19 ಕೋವಿಡ್ ಆರೈಕೆ ಕೇಂದ್ರ</strong><br />‘ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ 19 ಕೋವಿಡ್ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಹೋಬಳಿಗೊಂದು ಕೇಂದ್ರ ಆರಂಭಿಸಲು ಬೇಕಾದ ಸಿದ್ಧತೆ ನಡೆಸಿಕೊಳ್ಳಿ ಎಂದು ತಾ.ಪಂ. ಇಒಗಳಿಗೆ ಸೂಚಿಸಲಾಗಿದೆ’ ಎಂದು ಸಿಇಒ ತಿಳಿಸಿದರು.</p>.<p>‘ಒಂದೊಂದು ತಾಲ್ಲೂಕಿಗೆ ಐದು ತಂಡ ನಿಯೋಜಿಸಲಾಗಿದೆ. 35 ವಾಹನಗಳನ್ನು ಕೊಡಲಾಗಿದೆ. ಈ ಮೊಬೈಲ್ ತಪಾಸಣಾ ವಾಹನದಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ, ಸ್ಟಾಫ್ ನರ್ಸ್, ಸ್ವ್ಯಾಬ್ ತೆಗೆಯಲು ಎಎನ್ಎಂ, ಆಶಾ–ಅಂಗನವಾಡಿ ಕಾರ್ಯಕರ್ತೆ, ಗ್ರೂಪ್ ಡಿ ಸಿಬ್ಬಂದಿಯೊಬ್ಬರಿರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.</p>.<p>‘ತಹಶೀಲ್ದಾರ್, ಇಒ, ಟಿಎಚ್ಒ ಸೂಚಿಸುವ ಸ್ಥಳಗಳಿಗೆ ಈ ಮೊಬೈಲ್ ವಾಹನ ತಂಡಗಳು ತೆರಳಿ ಕೋವಿಡ್ ತಪಾಸಣೆ ನಡೆಸಲಿವೆ. ಹಂತ ಹಂತವಾಗಿ ಈ ಸೇವೆ ಹೆಚ್ಚಿಸಲಾಗುವುದು’ ಎಂದು ಯೋಗೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>