<p><strong>ಮೈಸೂರು:</strong> ನಾಯಿಯೊಂದು ಕಚ್ಚಿತೆಂದು ಸೇಡು ತೀರಿಸಿಕೊಳ್ಳಲು ಇಬ್ಬರು ಆರೋಪಿಗಳು ಹುಡುಕಿಕೊಂಡು ಬಂದು ನಾಯಿಯನ್ನು ಹೊಡೆದಿದ್ದಾರೆ. ಆಸ್ಪತ್ರೆಯಲ್ಲಿ ನಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.</p>.<p>ಇಲ್ಲಿನ ಲೋಕನಾಯಕ ನಗರದ ನಂಜಪ್ಪ ಅವರ ಸಾಕು ನಾಯಿಯೇ ಹಲ್ಲೇಗೀಡಾಗಿರುವುದು. ಇವರು ತಮ್ಮ ಮನೆಯ ಮುಂಭಾಗ ನಾಯಿಯನ್ನು ಬಿಟ್ಟಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಭಾನುವಾರ ರಾತ್ರಿ ಬಂದು ಕಬ್ಬಿಣದ ರಾಡಿನಿಂದ ಮನ ಬಂದಂತೆ ಥಳಿಸಿದ್ದಾರೆ.</p>.<p>ಬೆಳಿಗ್ಗೆ ನೋಡಿದಾಗ ಗಾಯಗೊಂಡ ನಾಯಿ ನರಳುತ್ತಿತ್ತು. ತಕ್ಷಣ ಆಸ್ಪತ್ರೆಗೆ ನಂಜಪ್ಪ ಅವರು ದಾಖಲಿಸಿದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ನಾಯಿಗೆ ಹೊಡೆಯುತ್ತಿರುವ ದೃಶ್ಯಗಳು ಕಂಡವು. ತಕ್ಷಣ ಹೆಬ್ಬಾಳ ಪೊಲೀಸ್ ಠಾಣೆ ಬಂದ ಅವರು ದೂರು ನೀಡಿದರು.</p>.<p>ದೂರು ಸ್ವೀಕರಿಸಿ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಯುವಕರನ್ನು ಪತ್ತೆ ಹಚ್ಚಿದರು. ಅವರಲ್ಲಿ ಒಬ್ಬಾತ ನಾಯಿ ಕಚ್ಚಿದ್ದಕ್ಕೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.</p>.<p>‘ನಾಯಿ ಕಚ್ಚಿದ್ದರಿಂದ ಔಷಧ ತೆಗೆದುಕೊಳ್ಳಬೇಕಾಯಿತು. ಇದಕ್ಕೆ ಸಾಕಷ್ಟು ಹಣ ಖರ್ಚಾಯಿತು. ಹೀಗಾಗಿ, ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಾಯಿಯೊಂದು ಕಚ್ಚಿತೆಂದು ಸೇಡು ತೀರಿಸಿಕೊಳ್ಳಲು ಇಬ್ಬರು ಆರೋಪಿಗಳು ಹುಡುಕಿಕೊಂಡು ಬಂದು ನಾಯಿಯನ್ನು ಹೊಡೆದಿದ್ದಾರೆ. ಆಸ್ಪತ್ರೆಯಲ್ಲಿ ನಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.</p>.<p>ಇಲ್ಲಿನ ಲೋಕನಾಯಕ ನಗರದ ನಂಜಪ್ಪ ಅವರ ಸಾಕು ನಾಯಿಯೇ ಹಲ್ಲೇಗೀಡಾಗಿರುವುದು. ಇವರು ತಮ್ಮ ಮನೆಯ ಮುಂಭಾಗ ನಾಯಿಯನ್ನು ಬಿಟ್ಟಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಭಾನುವಾರ ರಾತ್ರಿ ಬಂದು ಕಬ್ಬಿಣದ ರಾಡಿನಿಂದ ಮನ ಬಂದಂತೆ ಥಳಿಸಿದ್ದಾರೆ.</p>.<p>ಬೆಳಿಗ್ಗೆ ನೋಡಿದಾಗ ಗಾಯಗೊಂಡ ನಾಯಿ ನರಳುತ್ತಿತ್ತು. ತಕ್ಷಣ ಆಸ್ಪತ್ರೆಗೆ ನಂಜಪ್ಪ ಅವರು ದಾಖಲಿಸಿದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ನಾಯಿಗೆ ಹೊಡೆಯುತ್ತಿರುವ ದೃಶ್ಯಗಳು ಕಂಡವು. ತಕ್ಷಣ ಹೆಬ್ಬಾಳ ಪೊಲೀಸ್ ಠಾಣೆ ಬಂದ ಅವರು ದೂರು ನೀಡಿದರು.</p>.<p>ದೂರು ಸ್ವೀಕರಿಸಿ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಯುವಕರನ್ನು ಪತ್ತೆ ಹಚ್ಚಿದರು. ಅವರಲ್ಲಿ ಒಬ್ಬಾತ ನಾಯಿ ಕಚ್ಚಿದ್ದಕ್ಕೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.</p>.<p>‘ನಾಯಿ ಕಚ್ಚಿದ್ದರಿಂದ ಔಷಧ ತೆಗೆದುಕೊಳ್ಳಬೇಕಾಯಿತು. ಇದಕ್ಕೆ ಸಾಕಷ್ಟು ಹಣ ಖರ್ಚಾಯಿತು. ಹೀಗಾಗಿ, ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>