<p><strong>ಮೈಸೂರು:</strong> ನಗರದಲ್ಲಿ ಈಚೆಗಷ್ಟೇ ಕಾರ್ಯಾರಂಭ ಮಾಡಿದ್ದ ತುರ್ತು ಸ್ಪಂದನಾ ವ್ಯವಸ್ಥೆಯಿಂದ ಹಲವು ಅಪರಾಧ ಪ್ರಕರಣಗಳು ತಪ್ಪಿವೆ.</p>.<p>ಗೌಸಿಯಾನಗರದಲ್ಲಿ ನಿಶ್ಚಯವಾಗಿದ್ದ ಬಾಲ್ಯವಿವಾಹವನ್ನು ಡಿ.20ರಂದು ತಡೆಯಲಾಗಿದೆ. ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧರಿಸಿ ತುರ್ತಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.</p>.<p>ಆರ್ಎಂಪಿಕ್ವಾರ್ಟರ್ಸ್ ಬಳಿ ಅನುಮಾನಾಸ್ಪದವಾಗಿ ಕೆಲವು ವ್ಯಕ್ತಿಗಳು ಸಂಚರಿಸುತ್ತಿರುವ ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ವಾಹನವು ಸ್ಥಳವನ್ನು ತಲುಪಿದೆ. ಪೊಲೀಸರನ್ನು ನೋಡುತ್ತಲೇ ಗಂಧದ ಮರಗಳನ್ನು ಕಡಿಯುತ್ತಿದ್ದ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮರ ಕತ್ತರಿಸಲು ಬಳಸುತ್ತಿದ್ದ ಉಪಕರಣಗಳು ಸಿಕ್ಕಿವೆ.</p>.<p>ಸಾರ್ವಜನಿಕರು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ, 5ರಿಂದ 10 ನಿಮಿಷಗಳಲ್ಲಿ ಪೊಲೀಸರು ಸ್ಥಳವನ್ನು ತಲುಪಿ ಅಪರಾಧ ಘಟನೆಗಳನ್ನು ತಡೆಯುತ್ತಾರೆ ಎಂದು ಪೊಲೀಸ್ ಕಮಿಷನರ್ ಕಚೇರಿಯ ಪ್ರಕಟಣೆ ತಿಳಿಸಿದೆ.</p>.<p class="Briefhead"><strong>ವ್ಯಕ್ತಿ ಆತ್ಮಹತ್ಯೆ</strong></p>.<p>ಮೈಸೂರು: ಗೆಳತಿ ದುಬೈಗೆ ತೆರಳಿದ್ದಕ್ಕೆ ಮನನೊಂದ, ಇಲ್ಲಿನ ಸಾತಗಳ್ಳಿಯ ನಿವಾಸಿ ಶಂಶೀರ್ (33) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಇವರು ಮಹಿಳೆಯೊಬ್ಬರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಆದರೆ, ಈಚೆಗೆ ಮಹಿಳೆಯು ವಿದೇಶಕ್ಕೆ ತೆರಳಿದ್ದರು. ಇದರಿಂದ ಇವರು ಖಿನ್ನತೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಮನೆ ಕಳ್ಳತನ</strong></p>.<p>ಮೈಸೂರು: ಇಲ್ಲಿನ ಲಷ್ಕರ್ ಮೊಹಲ್ಲಾದ ಕಬೀರ್ ರಸ್ತೆಯ ನಿವಾಸಿ ಮಹಮ್ಮದ್ ಅಯೂಬ್ ಅವರು ಸಮಾರಂಭ ವೊಂದಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಬಾಗಿಲು ಒಡೆದ ಕಳ್ಳರು ನಗ, ನಾಣ್ಯ ದೋಚಿದ್ದಾರೆ.</p>.<p>300 ಗ್ರಾಂ ಚಿನ್ನಾಭರಣ, 50 ರೇಷ್ಮೆ ಸೀರೆಗಳು ಸೇರಿದಂತೆ ವಿವಿಧ ಉಡುಪುಗಳು, ಟಿ.ವಿ ಸೇರಿದಂತೆ ಅನೇಕ ವಸ್ತುಗಳನ್ನು ಕಳವು ಮಾಡಿ ದ್ದಾರೆ ಎಂದು ಮಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದಲ್ಲಿ ಈಚೆಗಷ್ಟೇ ಕಾರ್ಯಾರಂಭ ಮಾಡಿದ್ದ ತುರ್ತು ಸ್ಪಂದನಾ ವ್ಯವಸ್ಥೆಯಿಂದ ಹಲವು ಅಪರಾಧ ಪ್ರಕರಣಗಳು ತಪ್ಪಿವೆ.</p>.<p>ಗೌಸಿಯಾನಗರದಲ್ಲಿ ನಿಶ್ಚಯವಾಗಿದ್ದ ಬಾಲ್ಯವಿವಾಹವನ್ನು ಡಿ.20ರಂದು ತಡೆಯಲಾಗಿದೆ. ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಆಧರಿಸಿ ತುರ್ತಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.</p>.<p>ಆರ್ಎಂಪಿಕ್ವಾರ್ಟರ್ಸ್ ಬಳಿ ಅನುಮಾನಾಸ್ಪದವಾಗಿ ಕೆಲವು ವ್ಯಕ್ತಿಗಳು ಸಂಚರಿಸುತ್ತಿರುವ ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ಪೊಲೀಸ್ ವಾಹನವು ಸ್ಥಳವನ್ನು ತಲುಪಿದೆ. ಪೊಲೀಸರನ್ನು ನೋಡುತ್ತಲೇ ಗಂಧದ ಮರಗಳನ್ನು ಕಡಿಯುತ್ತಿದ್ದ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮರ ಕತ್ತರಿಸಲು ಬಳಸುತ್ತಿದ್ದ ಉಪಕರಣಗಳು ಸಿಕ್ಕಿವೆ.</p>.<p>ಸಾರ್ವಜನಿಕರು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು 112 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ, 5ರಿಂದ 10 ನಿಮಿಷಗಳಲ್ಲಿ ಪೊಲೀಸರು ಸ್ಥಳವನ್ನು ತಲುಪಿ ಅಪರಾಧ ಘಟನೆಗಳನ್ನು ತಡೆಯುತ್ತಾರೆ ಎಂದು ಪೊಲೀಸ್ ಕಮಿಷನರ್ ಕಚೇರಿಯ ಪ್ರಕಟಣೆ ತಿಳಿಸಿದೆ.</p>.<p class="Briefhead"><strong>ವ್ಯಕ್ತಿ ಆತ್ಮಹತ್ಯೆ</strong></p>.<p>ಮೈಸೂರು: ಗೆಳತಿ ದುಬೈಗೆ ತೆರಳಿದ್ದಕ್ಕೆ ಮನನೊಂದ, ಇಲ್ಲಿನ ಸಾತಗಳ್ಳಿಯ ನಿವಾಸಿ ಶಂಶೀರ್ (33) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಇವರು ಮಹಿಳೆಯೊಬ್ಬರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಆದರೆ, ಈಚೆಗೆ ಮಹಿಳೆಯು ವಿದೇಶಕ್ಕೆ ತೆರಳಿದ್ದರು. ಇದರಿಂದ ಇವರು ಖಿನ್ನತೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಮನೆ ಕಳ್ಳತನ</strong></p>.<p>ಮೈಸೂರು: ಇಲ್ಲಿನ ಲಷ್ಕರ್ ಮೊಹಲ್ಲಾದ ಕಬೀರ್ ರಸ್ತೆಯ ನಿವಾಸಿ ಮಹಮ್ಮದ್ ಅಯೂಬ್ ಅವರು ಸಮಾರಂಭ ವೊಂದಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾಗ ಬಾಗಿಲು ಒಡೆದ ಕಳ್ಳರು ನಗ, ನಾಣ್ಯ ದೋಚಿದ್ದಾರೆ.</p>.<p>300 ಗ್ರಾಂ ಚಿನ್ನಾಭರಣ, 50 ರೇಷ್ಮೆ ಸೀರೆಗಳು ಸೇರಿದಂತೆ ವಿವಿಧ ಉಡುಪುಗಳು, ಟಿ.ವಿ ಸೇರಿದಂತೆ ಅನೇಕ ವಸ್ತುಗಳನ್ನು ಕಳವು ಮಾಡಿ ದ್ದಾರೆ ಎಂದು ಮಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>