<p><strong>ಮೈಸೂರು: </strong>ಇಲ್ಲಿನ ರಿಂಗ್ರಸ್ತೆಯ ಎಲ್ಲ 7 ಜಂಕ್ಷನ್ಗಳಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಎಲ್ಲಡೆಯೂ ಗ್ರೇಡ್ ಸಪರೇಟರ್ ನಿರ್ಮಿಸುವ ಪ್ರಸ್ತಾವ ಇದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.</p>.<p>ಇದಕ್ಕಾಗಿ ₹ 300ರಿಂದ ₹ 400 ಕೋಟಿ ವೆಚ್ಚವಾಗಬಹುದು ಎಂಬ ಅಂದಾಜು ಇದೆ. ಸದ್ಯ, ಕೆಆರ್ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್ ಬಳಿ ಮೊದಲ ಹಂತದಲ್ಲಿ ನಿರ್ಮಿಸುವುದಕ್ಕೆ ಮಂಜೂರಾತಿ ದೊರೆತಿದೆ ಎಂದು ಅವರು ಇಲ್ಲಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.</p>.<p>ಇಲ್ಲಿ ರೈಲ್ವೆ ಹಳಿಯೂ ಇರುವುದರಿಂದ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಂಟಿಯಾಗಿ ₹ 50 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಒಂದು ವಾರದಲ್ಲಿ ಇದರ ಅಂತಿಮ ಸ್ವರೂಪದ ನಕ್ಷೆ ತಯಾರಾಗಲಿದ್ದು, ಆದಷ್ಟು ಬೇಗ ಕೆಲಸ ಪೂರ್ಣವಾಗಲಿದೆ. ಇದರಿಂದ ಕೆಆರ್ಎಸ್ಗೆ ಹೋಗುವವರು ಸರಾಗವಾಗಿ ಹೋಗಬಹುದು ಎಂದು ಅವರು ಮಾಹಿತಿ ನೀಡಿದರು.</p>.<p><strong>2022 ಸೆಪ್ಟೆಂಬರ್ಗೆ ಮೈಸೂರು– ಬೆಂಗಳೂರು ದಶಪಥ ರಸ್ತೆ ಸಿದ್ಧ</strong><br />ಮೈಸೂರು– ಬೆಂಗಳೂರು ದಶಪಥ ರಸ್ತೆ ಕಾಮಗಾರಿಯು 2022ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಕೊಲಂಬಿಯಾ ಏಷಿಯಾ ಜಂಕ್ಷನ್ ಬಳಿಯ ‘ಕ್ಲೋವರ್ ಲೀಫ್’ ಮಾದರಿಯ ಯೋಜನೆಯೂ ಇದರಲ್ಲಿ ಸೇರಿದೆ ಎಂದು ಪ್ರತಾಪಸಿಂಹ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p><strong>ರಿಂಗ್ರಸ್ತೆಯ ಹಸಿರೀಕರಣ</strong><br />ರಿಂಗ್ರಸ್ತೆಯಲ್ಲಿ ವಿವಿಧ ಅನುದಾನಗಳನ್ನು ಬಳಸಿ ಹಸಿರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. 2,450 ವಿದ್ಯುತ್ ದೀಪದ ಕಂಬಗಳ ವೈಯರ್ಗಳನ್ನು ಇಲಿಗಳು ಹಾನಿಗೊಳಿಸಿವೆ. ಇದರಿಂದ ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯದಲ್ಲೇ ಈ ವೈಯರ್ಗಳನ್ನು ಎಚ್ಡಿಪಿಇ ಅಥವಾ ಜಿಐ ಪೈಪ್ನೊಳಗೆ ಹಾಕಲಾಗುವುದು ಎಂದು ಹೇಳಿದರು.</p>.<p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಇಲ್ಲಿನ ರಿಂಗ್ರಸ್ತೆಯ ಎಲ್ಲ 7 ಜಂಕ್ಷನ್ಗಳಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಎಲ್ಲಡೆಯೂ ಗ್ರೇಡ್ ಸಪರೇಟರ್ ನಿರ್ಮಿಸುವ ಪ್ರಸ್ತಾವ ಇದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.</p>.<p>ಇದಕ್ಕಾಗಿ ₹ 300ರಿಂದ ₹ 400 ಕೋಟಿ ವೆಚ್ಚವಾಗಬಹುದು ಎಂಬ ಅಂದಾಜು ಇದೆ. ಸದ್ಯ, ಕೆಆರ್ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್ ಬಳಿ ಮೊದಲ ಹಂತದಲ್ಲಿ ನಿರ್ಮಿಸುವುದಕ್ಕೆ ಮಂಜೂರಾತಿ ದೊರೆತಿದೆ ಎಂದು ಅವರು ಇಲ್ಲಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.</p>.<p>ಇಲ್ಲಿ ರೈಲ್ವೆ ಹಳಿಯೂ ಇರುವುದರಿಂದ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಂಟಿಯಾಗಿ ₹ 50 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಒಂದು ವಾರದಲ್ಲಿ ಇದರ ಅಂತಿಮ ಸ್ವರೂಪದ ನಕ್ಷೆ ತಯಾರಾಗಲಿದ್ದು, ಆದಷ್ಟು ಬೇಗ ಕೆಲಸ ಪೂರ್ಣವಾಗಲಿದೆ. ಇದರಿಂದ ಕೆಆರ್ಎಸ್ಗೆ ಹೋಗುವವರು ಸರಾಗವಾಗಿ ಹೋಗಬಹುದು ಎಂದು ಅವರು ಮಾಹಿತಿ ನೀಡಿದರು.</p>.<p><strong>2022 ಸೆಪ್ಟೆಂಬರ್ಗೆ ಮೈಸೂರು– ಬೆಂಗಳೂರು ದಶಪಥ ರಸ್ತೆ ಸಿದ್ಧ</strong><br />ಮೈಸೂರು– ಬೆಂಗಳೂರು ದಶಪಥ ರಸ್ತೆ ಕಾಮಗಾರಿಯು 2022ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಕೊಲಂಬಿಯಾ ಏಷಿಯಾ ಜಂಕ್ಷನ್ ಬಳಿಯ ‘ಕ್ಲೋವರ್ ಲೀಫ್’ ಮಾದರಿಯ ಯೋಜನೆಯೂ ಇದರಲ್ಲಿ ಸೇರಿದೆ ಎಂದು ಪ್ರತಾಪಸಿಂಹ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.</p>.<p><strong>ರಿಂಗ್ರಸ್ತೆಯ ಹಸಿರೀಕರಣ</strong><br />ರಿಂಗ್ರಸ್ತೆಯಲ್ಲಿ ವಿವಿಧ ಅನುದಾನಗಳನ್ನು ಬಳಸಿ ಹಸಿರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. 2,450 ವಿದ್ಯುತ್ ದೀಪದ ಕಂಬಗಳ ವೈಯರ್ಗಳನ್ನು ಇಲಿಗಳು ಹಾನಿಗೊಳಿಸಿವೆ. ಇದರಿಂದ ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸದ್ಯದಲ್ಲೇ ಈ ವೈಯರ್ಗಳನ್ನು ಎಚ್ಡಿಪಿಇ ಅಥವಾ ಜಿಐ ಪೈಪ್ನೊಳಗೆ ಹಾಕಲಾಗುವುದು ಎಂದು ಹೇಳಿದರು.</p>.<p>ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>