<p><strong>ಮೈಸೂರು</strong>: ‘ದೇಶದಲ್ಲಿ ಕಾಂಗ್ರೆಸ್ ಸ್ಥಾಪನೆಗೂ ಹಿಂದಿನಿಂದಲೇ ಸ್ವಾತಂತ್ರ್ಯ ಚಳಚಳಿ ಆರಂಭವಾಗಿತ್ತು. ಆ ಹೋರಾಟ ನಡೆದದ್ದು ನಮ್ಮಿಂದಲೇ ಎಂದು ಯಾರೂ ಹೇಳಿಕೊಳ್ಳಬಾರದು. ನಾವೆಲ್ಲರೂ ಸ್ವಾತಂತ್ರ್ಯದ ಫಲವನ್ನು ಉಣ್ಣುತ್ತಿದ್ದೇವೆಯೇ ಹೊರತು ಜೈಲಿಗೆ ಹೋಗಿ ಬಂದವರಲ್ಲ...’</p>.<p>– ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದು ಹೀಗೆ.</p>.<p>ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ವಿ.ವಿಯಿಂದ ಗುರುವಾರ ಆಯೋಜಿಸಿದ್ದ ಯುವಜನ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಾವು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಹೋರಾಡಿದವರ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಟೀಕಿಸಿದರು.</p>.<p>‘ಸ್ವಾತಂತ್ರ್ಯ ಯೋಧರ ಬಗ್ಗೆ ಮಾತನಾಡುವಾಗ ಗೌರವವಿರಬೇಕು. ಚಳವಳಿಯಲ್ಲಿದ್ದ ವೀರ ಸಾವರ್ಕರ್ ಹಲವು ವರ್ಷ ಜೈಲಿನಲ್ಲಿದ್ದರು. ಮೊದಲು ಅವರ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅಂಥವರನ್ನು ಟೀಕಿಸಬಾರದು’ ಎಂದರು.</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊಗಳಿದ ಶಾಸಕ, ‘ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರನ್ನು ಅಧಿಕಾರದಿಂದ ಇಳಿಸಲು ಯಾರಿಗೂ ಆಗದು. ಹಾಗೇನಾದರೂ ಇದ್ದರೆ ಇಳಿಸುವುದಾಗಿ ಹೇಳಬೇಕಾದವರು ಯಾರು?’ ಎಂದು ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.</p>.<p>‘ಒಮ್ಮೆಯೂ ದರ್ಪ ತೋರಿಲ್ಲ. ಜನರ ಸೇವಕ ಎಂದು ಹೇಳಿ ಅದರಂತೆಯೇ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಕುಟುಂಬ ರಾಜಕಾರಣದಿಂದ ಮೇಲೆ ಬಂದವರಲ್ಲ. ಸ್ವಂತವಾಗಿ ಬೆಳೆದವರು. ತಂದೆಯಂತೆಯೇ ಕುಟುಂಬವನ್ನು ರಾಜಕೀಯದಿಂದ ದೂರವಿಟ್ಟಿದ್ದಾರೆ’ ಎಂದು ಗುಣಗಾಣ ಮಾಡಿದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ, ಜನರು ಮನೆಗಳ ಮೇಲೆ ತಿರಂಗಾ ಹಾರಿಸಬೇಕು’ ಎಂದು ಕೋರಿದರು.</p>.<p><a href="https://www.prajavani.net/district/mysore/azadi-ka-amrit-mahotsava-cm-bommai-attended-in-mysuru-youth-fest-962354.html" itemprop="url">ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮೈಸೂರಿನಯುವಜನೋತ್ಸವದಲ್ಲಿ ಸಿಎಂ ಭಾಗಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ದೇಶದಲ್ಲಿ ಕಾಂಗ್ರೆಸ್ ಸ್ಥಾಪನೆಗೂ ಹಿಂದಿನಿಂದಲೇ ಸ್ವಾತಂತ್ರ್ಯ ಚಳಚಳಿ ಆರಂಭವಾಗಿತ್ತು. ಆ ಹೋರಾಟ ನಡೆದದ್ದು ನಮ್ಮಿಂದಲೇ ಎಂದು ಯಾರೂ ಹೇಳಿಕೊಳ್ಳಬಾರದು. ನಾವೆಲ್ಲರೂ ಸ್ವಾತಂತ್ರ್ಯದ ಫಲವನ್ನು ಉಣ್ಣುತ್ತಿದ್ದೇವೆಯೇ ಹೊರತು ಜೈಲಿಗೆ ಹೋಗಿ ಬಂದವರಲ್ಲ...’</p>.<p>– ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದು ಹೀಗೆ.</p>.<p>ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ವಿ.ವಿಯಿಂದ ಗುರುವಾರ ಆಯೋಜಿಸಿದ್ದ ಯುವಜನ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ನಾವು ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿಯೂ ಹೋರಾಡಿದವರ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಟೀಕಿಸಿದರು.</p>.<p>‘ಸ್ವಾತಂತ್ರ್ಯ ಯೋಧರ ಬಗ್ಗೆ ಮಾತನಾಡುವಾಗ ಗೌರವವಿರಬೇಕು. ಚಳವಳಿಯಲ್ಲಿದ್ದ ವೀರ ಸಾವರ್ಕರ್ ಹಲವು ವರ್ಷ ಜೈಲಿನಲ್ಲಿದ್ದರು. ಮೊದಲು ಅವರ ಬಗ್ಗೆ ಓದಿ ತಿಳಿದುಕೊಳ್ಳಬೇಕು. ಅಂಥವರನ್ನು ಟೀಕಿಸಬಾರದು’ ಎಂದರು.</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊಗಳಿದ ಶಾಸಕ, ‘ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರನ್ನು ಅಧಿಕಾರದಿಂದ ಇಳಿಸಲು ಯಾರಿಗೂ ಆಗದು. ಹಾಗೇನಾದರೂ ಇದ್ದರೆ ಇಳಿಸುವುದಾಗಿ ಹೇಳಬೇಕಾದವರು ಯಾರು?’ ಎಂದು ಕಾಂಗ್ರೆಸ್ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.</p>.<p>‘ಒಮ್ಮೆಯೂ ದರ್ಪ ತೋರಿಲ್ಲ. ಜನರ ಸೇವಕ ಎಂದು ಹೇಳಿ ಅದರಂತೆಯೇ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಕುಟುಂಬ ರಾಜಕಾರಣದಿಂದ ಮೇಲೆ ಬಂದವರಲ್ಲ. ಸ್ವಂತವಾಗಿ ಬೆಳೆದವರು. ತಂದೆಯಂತೆಯೇ ಕುಟುಂಬವನ್ನು ರಾಜಕೀಯದಿಂದ ದೂರವಿಟ್ಟಿದ್ದಾರೆ’ ಎಂದು ಗುಣಗಾಣ ಮಾಡಿದರು.</p>.<p>‘ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ, ಜನರು ಮನೆಗಳ ಮೇಲೆ ತಿರಂಗಾ ಹಾರಿಸಬೇಕು’ ಎಂದು ಕೋರಿದರು.</p>.<p><a href="https://www.prajavani.net/district/mysore/azadi-ka-amrit-mahotsava-cm-bommai-attended-in-mysuru-youth-fest-962354.html" itemprop="url">ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮೈಸೂರಿನಯುವಜನೋತ್ಸವದಲ್ಲಿ ಸಿಎಂ ಭಾಗಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>