‘ಆಡು ಮಾತಿನಲ್ಲೇ ಕಾವ್ಯ ಕಟ್ಟುವಷ್ಟು ಸರಳ ಮತ್ತು ಸಮೃದ್ದವಾಗಿದೆ ಕನ್ನಡ ಭಾಷೆ. ಪಂಪ, ರನ್ನ, ಪೊನ್ನನಿಂದ ಹಿಡಿದು ಸಾಕಷ್ಟು ಸಾಹಿತಿಗಳು ಕನ್ನಡ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲೇ ಕಲಿತ ಶಿವರಾಂ, ಕೆಂಪಯ್ಯ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದರು. ಹೀಗಿರುವಾಗ ನಾವು ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ’ ಎಂದು ಅವರು ಹೇಳಿದರು.