ನಗರದ ಅಲ್ಲಲ್ಲಿ ದೀಪಾಲಂಕಾರದ ಪರೀಕ್ಷೆಗಳೂ ನಡೆಯುತ್ತಿದ್ದವು. ಉರಿಯದ ಬಲ್ಬ್ಗಳ ಬದಲಾವಣೆ, ಮರುಜೋಡಣೆ, ವಿನ್ಯಾಸ ಸರಿ ಹೋಗದಿದ್ದರೆ ಮತ್ತೆ ದೀಪಗಳ ಸರವನ್ನು ತೆಗೆದು ವಿನ್ಯಾಸವನ್ನು ಮರು ಜೋಡಿಸುವ ಕಾರ್ಯಗಳನ್ನು ಪ್ರವಾಸಿ ಗರು ಕುತೂಹಲದಿಂದ ವೀಕ್ಷಿಸಿದರು.ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿದ್ದವು. ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಬೆಂಗಳೂರು ನೀಲಗಿರಿ ರಸ್ತೆ ಸೇರಿದಂತೆ ನಗರದ ಕೇಂದ್ರ ಭಾಗದ ರಸ್ತೆಗಳಲ್ಲಿ ವಾಹನ ಸಂದಣಿ ಹೆಚ್ಚಿತ್ತು.