‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮಾಂತರ ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ‘ಭಾನುವಾರ ಶೇ 70ಕ್ಕೂ ಅಧಿಕ ಅಂದರೆ 1,600 ಮಂದಿ ನೌಕರರು ಕರ್ತವ್ಯಕ್ಕೆ ಬಂದಿದ್ದಾರೆ. ಅವರಿಗೆ ಕೆಲಸ ನೀಡಬೇಕಿರುವುದು ನಮ್ಮ ಜವಾಬ್ದಾರಿ. ಸಾರ್ವಜನಿಕರು ಖಾಸಗಿ ಬಸ್ಗಳತ್ತ ಮುಖ ಮಾಡದೇ ಕೆಎಸ್ಆರ್ಟಿಸಿ ಬಸ್ಗೆ ಹತ್ತುತ್ತಿದ್ದಾರೆ. ನಾವು ಖಾಸಗಿ ಬಸ್ಗಳನ್ನು ಹೊರಕ್ಕೆ ಕಳುಹಿಸಿಲ್ಲ. ಬಯಸಿದ ಬಸ್ಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರು ಸ್ವತಂತ್ರರು’ ಎಂದರು.