ಅದಕ್ಕೂ ಮುನ್ನ ಅಂಬಾರಿ ಕಟ್ಟುವ ಅಟ್ಟಣಿಗೆಯ ಮಧ್ಯೆ ಆನೆ ನಿಲ್ಲಿಸಿ, ಅಂಬಾರಿ ಕಟ್ಟಿದಂತೆ, ಅತಿಥಿಗಳಿಗೆ ಆನೆಗಳು ಆಶೀರ್ವದಿಸಿದಂತೆ ಅಣಕು ಪ್ರದರ್ಶನವೂ ನಡೆಯಿತು. ಕರ್ನಾಟಕ ಪೊಲೀಸ್ ಬ್ಯಾಂಡಿನ ಸುಶ್ರಾವ್ಯ ಸಂಗೀತದೊಂದಿಗೆ ಅರಮನೆ ಮುಂಭಾಗಕ್ಕೆ ಗಜಪಡೆಗಳು ಬಂದವು. ಪುಷ್ಪಾರ್ಚನೆ ಮಾಡುವ ಅಟ್ಟಣಿಗೆಯ ಮುಂದೆ ಯಾವ ಜಾಗದಲ್ಲಿ ಆನೆಗಳನ್ನು ನಿಲ್ಲಿಸಬೇಕು ಎಂದು ಡಿಸಿಎಫ್ ವಿ.ಕರಿಕಾಳನ್ ಮಾವುತರಿಗೆ ಸ್ಪಷ್ಟ ಸೂಚನೆ ನೀಡಿದರು.