‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಜೈಲಿಗೆ ಹೋಗಿ ಬಂದವರಿಂದ ನಮಗೆ ಪಾಠ ಬೇಡ ಎಂದಿದ್ದಾರೆ. ಹಾಗಾದಲ್ಲಿ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಎಲ್ಲಿಗೆ ಹೋಗಿದ್ದವರು? ಅವರೂ ಜೈಲಿಗೆ ಹೋಗಿ ಬಂದವರಲ್ಲವೇ? ಅಮಿತ್ ಶಾ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು. ಡಿಕೆಶಿ ಅಂತಹ ಯಾವುದೇ ಅಪರಾಧ ಮಾಡಿಲ್ಲ. ಬಿಜೆಪಿಯವರು ಅದನ್ನು ಮರೆಯಬಾರದು’ ಎಂದು ಪ್ರತ್ಯುತ್ತರ ಕೊಟ್ಟರು.