ಇದಕ್ಕೂ ಮುನ್ನ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ‘ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ವಾಚಿಕಾಭಿನಯದ ನಂತರ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯನ್ನು ವಾಚಿಕಾಭಿನಯಕ್ಕೆ ತರಲಾಗಿದೆ. ಇದರ ರಂಗರೂಪ ಬಿ.ವಿ.ಕಾರಂತ ಅವರದ್ದು. ಜತೆಗೆ, ಇವರು ವಿವಿಧ ನಾಟಕಗಳಿಗೆ ಸಂಯೋಜಿಸಿದ ‘ರಂಗಗೀತೆಗಳು’ ಇದೀಗ ತಾಲೀಮಿನ ಹಂತದಲ್ಲಿದ್ದು, ಸೆ. 15ರ ಒಳಗೆ ಚಿತ್ರೀಕರಣಗೊಂಡು ಪ್ರಸಾರಕ್ಕೆ ಸಿದ್ಧಗೊಳ್ಳಲಿದೆ’ ಎಂದು ಹೇಳಿದರು.