ಕ್ಷೇತ್ರದಲ್ಲಿ 85 ಸಾವಿರ ಹೆಕ್ಟೇರ್ ಪ್ರದೇಶ ಕೃಷಿಗೆ ಯೋಗ್ಯವಾಗಿದ್ದು, ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಕೇವಲ 49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದೆ. ರಾಗಿ, ಭತ್ತ, ಹುರುಳಿ ಮತ್ತು ಅವರೆಕಾಯಿ ಬಿತ್ತನೆ ಕಾರ್ಯ ತಂಬಾಕು ಬೇಸಾಯ ಮುಗಿದ ಬಳಿಕ ಆರಂಭವಾಗಲಿದೆ. ಆಗಸ್ಟ್ ಅಂತ್ಯದೊಳಗೆ ವಾಡಿಕೆ ಮಳೆ ಬಂದರೆ ದ್ವಿದಳ ಧಾನ್ಯ ಬೇಸಾಯಕ್ಕೆ ರೈತರು ಮುಂದಾಗುವ ಸಾಧ್ಯತೆ ಇದೆ.