<p><strong>ಮೈಸೂರು: </strong>ಲಯವಾದ್ಯಗಳ ನಾದವಿನ್ಯಾಸದ ಲಾಲಿತ್ಯದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರಿನ 'ಲಯತರಂಗ' ಸಂಗೀತ ತಂಡದವರ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿತು.</p>.<p>ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಕಡೆಯ ದಿನವಾದ ಶನಿವಾರ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡದವರು ಹಲವು ಪ್ರಸಿದ್ಧ ಸಂಗೀತ ರಚನೆಗಳನ್ನು ಪ್ರಸ್ತುತಪಡಿಸಿದರು.</p>.<p>ಕರ್ನಾಟಕ ಶಾಸ್ತ್ರೀಯದಲ್ಲಿ ಲಯಬದ್ಧ, ಕುತೂಹಲ ಕೆರಳಿಸುವ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರದರ್ಶನ ನೀಡುವ ಮೂಲಕ ದಸರಾ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಅರ್ಥಪೂರ್ಣವಾಗಿ ತೆರೆ ಎಳೆದರು.</p>.<p>ಪ್ರಮುಖವಾಗಿ ಹೇಮಾವತಿ ರಾಗದಲ್ಲಿ ರಾಗ-ತಾನ-ಪಲ್ಲವಿ ಎಂಬ ವಿಶಿಷ್ಟ ಪ್ರಕಾರವನ್ನು ಮನೋಜ್ಞವಾಗಿ ಸಂಗೀತದ ಸುಂದರ ಸಮ್ಮಿಶ್ರಣ ಮಾಡುವ ಮೂಲಕ ಶ್ರೋತೃಗಳಿಗೆ ಉಣಬಡಿಸಿದರು.</p>.<p>ಪುರಂದರದಾಸರ ರಚನೆಯ ಕೃಷ್ಣಾ ನೀ ಬೇಗನೆ ಬಾರೋ, ಜೈ ಜಗದೀಶ್ವರಿ ಮಾತಾ ಸರಸ್ವತಿ, ಹರಿಕುಣಿದಾ ನಮ್ಮ ಹರಿಕುಣಿದಾ, ಜಗದೋದ್ದಾರನ ಹಾಡಿಸಿದಳೆ ಯಶೋಧೆ, ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಗಳನ್ನು ಸುಮಧುರವಾಗಿ ಹಾಡಿದರು.</p>.<p>ದೇಶದ ಕೆಲವೇ ಕೆಲವು ಪ್ರಸಿದ್ಧ ಫ್ಯೂಷನ್ ಬ್ಯಾಂಡ್ಗಳಲ್ಲಿ ವಿಶೇಷವಾದ ಮಾನ್ಯತೆ ಪಡೆದಿರುವ ಲಯತರಂಗ ತಂಡವು ಶಾಸ್ತ್ರೀಯತೆಯ ಜೊತೆಗೆ ನವೀನತೆಯ ನೆರಳನ್ನು ತೋರಿಸುತ್ತಾ ಪ್ರೇಕ್ಷಕರ ಮನಸೂರೆಗೊಂಡಿತು.</p>.<p>ಘಟಂನಲ್ಲಿ ವಿದ್ವಾನ್ ಗಿರಿಧರ ಉಡುಪ, ವೇಣು ವಾದನದಲ್ಲಿ ಕೂಳೂರು ರವಿಚಂದ್ರ, ಮೃದಂಗದಲ್ಲಿ ಕೂಳೂರು ಜಯಚಂದ್ರರಾವ್, ಡ್ರಮ್ಸ್ನಲ್ಲಿ ಅರುಣ್ ಕುಮಾರ್, ತಬಲಾ ಮತ್ತು ಲಾಟಿನ್ ಪರ್ಕಷನ್ನಲ್ಲಿ ಪ್ರಮತ್ ಕಿರಣ್, ಸಿದ್ದಾರ್ಥ್ ಬೆಳಮಣ್ಣು ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಈ ಬಾರಿಯ ದಸರಾ ಉತ್ಸವ ಸರಳ ವಾಗಿ ಆಯೋಜಿಸಿದ ಕಾರಣ ಅರಮನೆ ಆವರಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ.17 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ವೇದಿಕೆ ಮೂಲಕ ಚಾಲನೆ ಕೊಟ್ಟಿದ್ದರು. ಎಂಟು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.</p>.<p>ಕೋವಿಡ್ ಕಾರಣ ಪ್ರತಿದಿನದ ಕಾರ್ಯಕ್ರಮಕ್ಕೆ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರವಿದ್ದ ಕಾರಣ ಕಾರ್ಯಕ್ರಮ ಕಲಾರಸಿಕರನ್ನು ತಲುಪಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಲಯವಾದ್ಯಗಳ ನಾದವಿನ್ಯಾಸದ ಲಾಲಿತ್ಯದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರಿನ 'ಲಯತರಂಗ' ಸಂಗೀತ ತಂಡದವರ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿತು.</p>.<p>ನಾಡಹಬ್ಬ ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಕಡೆಯ ದಿನವಾದ ಶನಿವಾರ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡದವರು ಹಲವು ಪ್ರಸಿದ್ಧ ಸಂಗೀತ ರಚನೆಗಳನ್ನು ಪ್ರಸ್ತುತಪಡಿಸಿದರು.</p>.<p>ಕರ್ನಾಟಕ ಶಾಸ್ತ್ರೀಯದಲ್ಲಿ ಲಯಬದ್ಧ, ಕುತೂಹಲ ಕೆರಳಿಸುವ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರದರ್ಶನ ನೀಡುವ ಮೂಲಕ ದಸರಾ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಅರ್ಥಪೂರ್ಣವಾಗಿ ತೆರೆ ಎಳೆದರು.</p>.<p>ಪ್ರಮುಖವಾಗಿ ಹೇಮಾವತಿ ರಾಗದಲ್ಲಿ ರಾಗ-ತಾನ-ಪಲ್ಲವಿ ಎಂಬ ವಿಶಿಷ್ಟ ಪ್ರಕಾರವನ್ನು ಮನೋಜ್ಞವಾಗಿ ಸಂಗೀತದ ಸುಂದರ ಸಮ್ಮಿಶ್ರಣ ಮಾಡುವ ಮೂಲಕ ಶ್ರೋತೃಗಳಿಗೆ ಉಣಬಡಿಸಿದರು.</p>.<p>ಪುರಂದರದಾಸರ ರಚನೆಯ ಕೃಷ್ಣಾ ನೀ ಬೇಗನೆ ಬಾರೋ, ಜೈ ಜಗದೀಶ್ವರಿ ಮಾತಾ ಸರಸ್ವತಿ, ಹರಿಕುಣಿದಾ ನಮ್ಮ ಹರಿಕುಣಿದಾ, ಜಗದೋದ್ದಾರನ ಹಾಡಿಸಿದಳೆ ಯಶೋಧೆ, ಭಾಗ್ಯದ ಲಕ್ಷ್ಮಿ ಬಾರಮ್ಮ ಗೀತೆಗಳನ್ನು ಸುಮಧುರವಾಗಿ ಹಾಡಿದರು.</p>.<p>ದೇಶದ ಕೆಲವೇ ಕೆಲವು ಪ್ರಸಿದ್ಧ ಫ್ಯೂಷನ್ ಬ್ಯಾಂಡ್ಗಳಲ್ಲಿ ವಿಶೇಷವಾದ ಮಾನ್ಯತೆ ಪಡೆದಿರುವ ಲಯತರಂಗ ತಂಡವು ಶಾಸ್ತ್ರೀಯತೆಯ ಜೊತೆಗೆ ನವೀನತೆಯ ನೆರಳನ್ನು ತೋರಿಸುತ್ತಾ ಪ್ರೇಕ್ಷಕರ ಮನಸೂರೆಗೊಂಡಿತು.</p>.<p>ಘಟಂನಲ್ಲಿ ವಿದ್ವಾನ್ ಗಿರಿಧರ ಉಡುಪ, ವೇಣು ವಾದನದಲ್ಲಿ ಕೂಳೂರು ರವಿಚಂದ್ರ, ಮೃದಂಗದಲ್ಲಿ ಕೂಳೂರು ಜಯಚಂದ್ರರಾವ್, ಡ್ರಮ್ಸ್ನಲ್ಲಿ ಅರುಣ್ ಕುಮಾರ್, ತಬಲಾ ಮತ್ತು ಲಾಟಿನ್ ಪರ್ಕಷನ್ನಲ್ಲಿ ಪ್ರಮತ್ ಕಿರಣ್, ಸಿದ್ದಾರ್ಥ್ ಬೆಳಮಣ್ಣು ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ಈ ಬಾರಿಯ ದಸರಾ ಉತ್ಸವ ಸರಳ ವಾಗಿ ಆಯೋಜಿಸಿದ ಕಾರಣ ಅರಮನೆ ಆವರಣದಲ್ಲಿ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅ.17 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ವೇದಿಕೆ ಮೂಲಕ ಚಾಲನೆ ಕೊಟ್ಟಿದ್ದರು. ಎಂಟು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.</p>.<p>ಕೋವಿಡ್ ಕಾರಣ ಪ್ರತಿದಿನದ ಕಾರ್ಯಕ್ರಮಕ್ಕೆ ಕೆಲವು ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರವಿದ್ದ ಕಾರಣ ಕಾರ್ಯಕ್ರಮ ಕಲಾರಸಿಕರನ್ನು ತಲುಪಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>