ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಹೊರವರ್ತುಲ ರಸ್ತೆ ಬಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಸಾತಗಳ್ಳಿ ಬಡಾವಣೆ, ಮಹಾದೇವಪುರ, ಡಾ.ರಾಜಕುಮಾರ್ ರಸ್ತೆ, ತ್ರಿವೇಣಿ ವೃತ್ತ, ಕೈಲಾಸಪುರಂ, ರಾಜೀವನಗರದಲ್ಲಿ ಹಂದಿಗಳನ್ನು ಸೆರೆಹಿಡಿಯಲಾಗಿದೆ. ಹಿಡಿದ ಹಂದಿಗಳನ್ನು ಅರಣ್ಯ ಪ್ರದೇಶಗಳಿಗೆ ಬಿಡಲಾಗುವುದು ಎಂದು ನಗರಪಾಲಿಕೆ ಪಶುವೈದ್ಯ ಡಾ.ಸುರೇಶ್ ತಿಳಿಸಿದರು.