<p><strong>ವರುಣಾ:</strong> ಗ್ರಾಮಾಂತರ ಪ್ರದೇಶದಲ್ಲಿ ಬಹಳಷ್ಟು ಕಡೆ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಎಟಿಎಂ ಕೇಂದ್ರ ಇಲ್ಲದಿರುವುದನ್ನು ಮನಗಂಡು ಗ್ರಾಮೀಣ ಜನರಿಗೆ ಅನುಕೂಲಕ್ಕಾಗಿ ಆಧಾರ್ ಎನೆಬಲ್ ಪೇಮೆಂಟ್ ಸರ್ವಿಸ್ (ಎಇಪಿಎಸ್) ಮೂಲಕ ಹಣ ಪಾವತಿಸುವ ಸೌಲಭ್ಯ ಸಾಕಷ್ಟು ಗ್ರಾಹಕರನ್ನು ಆಕರ್ಷಿಸಿದೆ.</p>.<p>ಭಾರತೀಯ ಅಂಚೆ ಇಲಾಖೆಯ ನಗರ ಅಥವಾ ಗ್ರಾಮೀಣ ಅಂಚೆ ಕಚೇರಿಯಲ್ಲಿ ಯಾವುದೇ ಖಾತೆ ಹೊಂದಿದ್ದವರು ಸರಳವಾಗಿ ಹಣ ಪಡೆಯಬಹುದಾಗಿದೆ.</p>.<p>ಕೇವಲ ಉಳಿತಾಯ ಖಾತೆ, ಆರ್ಡಿ, ಮನಿಯಾರ್ಡರ್, ನೋಂದಣಿ ಅಂಚೆ, ಫಿಕ್ಸೆಡ್ ಡೆಪಾಸಿಟ್, ಅಂಚೆ ಪತ್ರಗಳ ವಿಲೇವಾರಿಗೆ ಹೆಸರಾಗಿದ್ದ ಅಂಚೆ ಕಚೇರಿಗಳು ಈಗ ‘ಮೈಕ್ರೊ ಎಟಿಎಂ’ ಯಂತ್ರದ ಸೌಲಭ್ಯವನ್ನು ಪರಿಚಯಿಸಿದ್ದು ತಮ್ಮೂರಿನಲ್ಲೇ ಹಣ ಸೌಲಭ್ಯ ನೀಡುತ್ತಾ ಗ್ರಾಹಕರನ್ನು ತನ್ನಡೆಗೆ ಸೆಳೆಯುತ್ತಿದೆ.</p>.<p>ಪ್ರತಿ ಗ್ರಾಹಕರು ಹಣ ಪಡೆಯುವ ಮುನ್ನ ಬ್ಯಾಂಕ್ ಖಾತೆಯಲ್ಲಿ ಹಣವಿರಬೇಕು. ಆ ಖಾತೆಯು ಆಧಾರ್ ಲಿಂಕ್ ಹೊಂದಿರಬೇಕು, ಆಧಾರ್ ಕಾರ್ಡ್ ಸಂಖ್ಯೆ ತಿಳಿದಿರಬೇಕು, ಬೇಸಿಕ್ ಮೊಬೈಲ್ ಪೋನ್ ಇರಬೇಕು, ಖಾತೆದಾರರು ಬಯೋಮೆಟ್ರಿಕ್ ನೀಡುವುದರೊಂದಿಗೆ ಬ್ಯಾಂಕ್ನಲ್ಲಿರುವ ಹಣದ ಬಗ್ಗೆ ಮಾಹಿತಿ ಬರುತ್ತದೆ. ನಂತರ ಖಾತೆಯಲ್ಲಿ ಹಣವಿದ್ದರೆ ತಕ್ಷಣದಲ್ಲಿ ಹಣ ನೀಡಲಾಗುತ್ತದೆ.</p>.<p>ರಜಾ ದಿನ ಹೊರತುಪಡಿಸಿ ಅಂಚೆ ಕಚೇರಿ ವೇಳೆಯಲ್ಲಿ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ. ಹಿಂದೆ ಕೇವಲ ದಿನನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಸುತ್ತಿದ್ದ ಕೆಲವು ಅಂಚೆ ಕಚೇರಿಗಳು, ಪ್ರತಿನಿತ್ಯ ₹ 50 ಸಾವಿರ ವಹಿವಾಟು ನಡೆಸುವ ಮಟ್ಟಕ್ಕೆ ತಲುಪಿವೆ.</p>.<p>ನಗರ ಹಾಗೂ ಗ್ರಾಮೀಣ ಅಂಚೆ ಕಚೇರಿಯಲ್ಲಿ 2019 ಸೆಪ್ಟೆಂಬರ್ ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗಿದೆ.</p>.<p>ಮೈಸೂರು ಜಿಲ್ಲೆಯಲ್ಲಿ 269 ಅಂಚೆ ಕಚೇರಿಗಳಲ್ಲಿ 204 ಗ್ರಾಮೀಣ ಪ್ರದೇಶಕ್ಕೆ ಸೇರಿವೆ. ಪ್ರತಿನಿತ್ಯ ಸುಮಾರು 400 ಖಾತೆಗಳ ವಹಿವಾಟಿನಿಂದ ₹ 10 ರಿಂದ ₹ 12 ಲಕ್ಷ ಹಣ ಪಾವತಿಯಾಗುತ್ತದೆ ಎನ್ನುತ್ತಾರೆ ಹಿರಿಯ ಅಂಚೆ ವ್ಯವಸ್ಥಾಪಕ ಸುಧಾಕರ್.ಎಚ್ ಎಲ್.</p>.<p>ಕಳೆದ ಲಾಕ್ ಡೌನ್ ಸಮಯದಿಂದ ಸೆಪ್ಟೆಂಬರ್ ಅಂತ್ಯದ ವರಗೆ ವಿವಿದ ಅಂಚೆ ಕಚೇರಿಗಳಲ್ಲಿ ಸುಮಾರು ₹ 12.53 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ಶೇ 90 ಭಾಗ ಗ್ರಾಮೀಣ ಪ್ರದೇಶದ ಕೊಡುಗೆಯಾಗಿದೆ.</p>.<p>‘ಜನರು ಅಂಚೆ ಕಚೇರಿಗಳಲ್ಲಿ ಹಣ ಪಡೆಯಲು ಆಸಕ್ತಿ ಹೊಂದಿದ್ದಾರೆ ಎನ್ನುತ್ತಾರೆ’ ವರುಣಾ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅನಿತಾ.</p>.<p>ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟು ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಸರಿ ಸುಮಾರು ₹ 50 ಸಾವಿರ ಪಡೆಯುತ್ತಿದ್ದಾರೆ ಎನ್ನುತ್ತಾರೆ ದುದ್ದಗೆರೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ರಾಮು.</p>.<p>ಗ್ರಾಮೀಣ ಭಾಗದ ಈ ಸೌಲಭ್ಯದಿಂದ ಅಂಚೆ ಕಚೇರಿಗಳು ಕೂಡ ಹಣಕಾಸಿನ ವಹಿವಾಟಿನ ಕೂಡ ಸ್ವಲ್ಪ ಚೇತರಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರುಣಾ:</strong> ಗ್ರಾಮಾಂತರ ಪ್ರದೇಶದಲ್ಲಿ ಬಹಳಷ್ಟು ಕಡೆ ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಎಟಿಎಂ ಕೇಂದ್ರ ಇಲ್ಲದಿರುವುದನ್ನು ಮನಗಂಡು ಗ್ರಾಮೀಣ ಜನರಿಗೆ ಅನುಕೂಲಕ್ಕಾಗಿ ಆಧಾರ್ ಎನೆಬಲ್ ಪೇಮೆಂಟ್ ಸರ್ವಿಸ್ (ಎಇಪಿಎಸ್) ಮೂಲಕ ಹಣ ಪಾವತಿಸುವ ಸೌಲಭ್ಯ ಸಾಕಷ್ಟು ಗ್ರಾಹಕರನ್ನು ಆಕರ್ಷಿಸಿದೆ.</p>.<p>ಭಾರತೀಯ ಅಂಚೆ ಇಲಾಖೆಯ ನಗರ ಅಥವಾ ಗ್ರಾಮೀಣ ಅಂಚೆ ಕಚೇರಿಯಲ್ಲಿ ಯಾವುದೇ ಖಾತೆ ಹೊಂದಿದ್ದವರು ಸರಳವಾಗಿ ಹಣ ಪಡೆಯಬಹುದಾಗಿದೆ.</p>.<p>ಕೇವಲ ಉಳಿತಾಯ ಖಾತೆ, ಆರ್ಡಿ, ಮನಿಯಾರ್ಡರ್, ನೋಂದಣಿ ಅಂಚೆ, ಫಿಕ್ಸೆಡ್ ಡೆಪಾಸಿಟ್, ಅಂಚೆ ಪತ್ರಗಳ ವಿಲೇವಾರಿಗೆ ಹೆಸರಾಗಿದ್ದ ಅಂಚೆ ಕಚೇರಿಗಳು ಈಗ ‘ಮೈಕ್ರೊ ಎಟಿಎಂ’ ಯಂತ್ರದ ಸೌಲಭ್ಯವನ್ನು ಪರಿಚಯಿಸಿದ್ದು ತಮ್ಮೂರಿನಲ್ಲೇ ಹಣ ಸೌಲಭ್ಯ ನೀಡುತ್ತಾ ಗ್ರಾಹಕರನ್ನು ತನ್ನಡೆಗೆ ಸೆಳೆಯುತ್ತಿದೆ.</p>.<p>ಪ್ರತಿ ಗ್ರಾಹಕರು ಹಣ ಪಡೆಯುವ ಮುನ್ನ ಬ್ಯಾಂಕ್ ಖಾತೆಯಲ್ಲಿ ಹಣವಿರಬೇಕು. ಆ ಖಾತೆಯು ಆಧಾರ್ ಲಿಂಕ್ ಹೊಂದಿರಬೇಕು, ಆಧಾರ್ ಕಾರ್ಡ್ ಸಂಖ್ಯೆ ತಿಳಿದಿರಬೇಕು, ಬೇಸಿಕ್ ಮೊಬೈಲ್ ಪೋನ್ ಇರಬೇಕು, ಖಾತೆದಾರರು ಬಯೋಮೆಟ್ರಿಕ್ ನೀಡುವುದರೊಂದಿಗೆ ಬ್ಯಾಂಕ್ನಲ್ಲಿರುವ ಹಣದ ಬಗ್ಗೆ ಮಾಹಿತಿ ಬರುತ್ತದೆ. ನಂತರ ಖಾತೆಯಲ್ಲಿ ಹಣವಿದ್ದರೆ ತಕ್ಷಣದಲ್ಲಿ ಹಣ ನೀಡಲಾಗುತ್ತದೆ.</p>.<p>ರಜಾ ದಿನ ಹೊರತುಪಡಿಸಿ ಅಂಚೆ ಕಚೇರಿ ವೇಳೆಯಲ್ಲಿ ಹಣಕಾಸಿನ ವಹಿವಾಟು ನಡೆಸಬಹುದಾಗಿದೆ. ಹಿಂದೆ ಕೇವಲ ದಿನನಿತ್ಯ ಸಾವಿರಾರು ರೂಪಾಯಿ ವಹಿವಾಟು ನಡೆಸುತ್ತಿದ್ದ ಕೆಲವು ಅಂಚೆ ಕಚೇರಿಗಳು, ಪ್ರತಿನಿತ್ಯ ₹ 50 ಸಾವಿರ ವಹಿವಾಟು ನಡೆಸುವ ಮಟ್ಟಕ್ಕೆ ತಲುಪಿವೆ.</p>.<p>ನಗರ ಹಾಗೂ ಗ್ರಾಮೀಣ ಅಂಚೆ ಕಚೇರಿಯಲ್ಲಿ 2019 ಸೆಪ್ಟೆಂಬರ್ ತಿಂಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗಿದೆ.</p>.<p>ಮೈಸೂರು ಜಿಲ್ಲೆಯಲ್ಲಿ 269 ಅಂಚೆ ಕಚೇರಿಗಳಲ್ಲಿ 204 ಗ್ರಾಮೀಣ ಪ್ರದೇಶಕ್ಕೆ ಸೇರಿವೆ. ಪ್ರತಿನಿತ್ಯ ಸುಮಾರು 400 ಖಾತೆಗಳ ವಹಿವಾಟಿನಿಂದ ₹ 10 ರಿಂದ ₹ 12 ಲಕ್ಷ ಹಣ ಪಾವತಿಯಾಗುತ್ತದೆ ಎನ್ನುತ್ತಾರೆ ಹಿರಿಯ ಅಂಚೆ ವ್ಯವಸ್ಥಾಪಕ ಸುಧಾಕರ್.ಎಚ್ ಎಲ್.</p>.<p>ಕಳೆದ ಲಾಕ್ ಡೌನ್ ಸಮಯದಿಂದ ಸೆಪ್ಟೆಂಬರ್ ಅಂತ್ಯದ ವರಗೆ ವಿವಿದ ಅಂಚೆ ಕಚೇರಿಗಳಲ್ಲಿ ಸುಮಾರು ₹ 12.53 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ಶೇ 90 ಭಾಗ ಗ್ರಾಮೀಣ ಪ್ರದೇಶದ ಕೊಡುಗೆಯಾಗಿದೆ.</p>.<p>‘ಜನರು ಅಂಚೆ ಕಚೇರಿಗಳಲ್ಲಿ ಹಣ ಪಡೆಯಲು ಆಸಕ್ತಿ ಹೊಂದಿದ್ದಾರೆ ಎನ್ನುತ್ತಾರೆ’ ವರುಣಾ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅನಿತಾ.</p>.<p>ಗ್ರಾಹಕರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ಬಿಟ್ಟು ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ಸರಿ ಸುಮಾರು ₹ 50 ಸಾವಿರ ಪಡೆಯುತ್ತಿದ್ದಾರೆ ಎನ್ನುತ್ತಾರೆ ದುದ್ದಗೆರೆ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ರಾಮು.</p>.<p>ಗ್ರಾಮೀಣ ಭಾಗದ ಈ ಸೌಲಭ್ಯದಿಂದ ಅಂಚೆ ಕಚೇರಿಗಳು ಕೂಡ ಹಣಕಾಸಿನ ವಹಿವಾಟಿನ ಕೂಡ ಸ್ವಲ್ಪ ಚೇತರಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>