<p><strong>ಮೈಸೂರು: </strong>ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಗರ/ಪಟ್ಟಣಗಳಲ್ಲಿನ ಕಟ್ಟಡ ಕಾರ್ಮಿಕರು, ನಿರಾಶ್ರಿತರು, ಬಡ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಮೈಮುಲ್ ಶುಕ್ರವಾರ ಚಾಲನೆ ನೀಡಿತು.</p>.<p>ಮೈಸೂರಿನ ಡಾ.ರಾಜ್ಕುಮಾರ್ ರಸ್ತೆಯಲ್ಲಿನ ಹುಡ್ಕೋ ಕಾಲೊನಿಯಲ್ಲಿ ಸಾಂಕೇತಿಕವಾಗಿ ಹಾಲು ವಿತರಿಸಿತು. ಜಿಲ್ಲೆಯ ಎಲ್ಲೆಡೆ ಹಾಲು ವಿತರಣೆ ನಡೆಯಿತು.</p>.<p>ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ಡೌನ್ ಜಾರಿಯಲ್ಲಿದ್ದು, ಬಡವರು, ಕೂಲಿ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರ ನೆರವಿಗೆ ಬರಲು ಸರ್ಕಾರ ಮುಂದಾಗಿ ಈ ಯೋಜನೆ ರೂಪಿಸಿದೆ ಎಂದು ಮೈಮುಲ್ನ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್ ಮಾಹಿತಿ ನೀಡಿದರು.</p>.<p>‘ಮಹಾನಗರ ಪಾಲಿಕೆ, ಸ್ಲಂ ಬೋರ್ಡ್, ಲೇಬರ್ ಕಮಿಷನರ್, ಡಿಯುಡಿಸಿ ಸೆಲ್ ಮೈಸೂರಿನಲ್ಲಿ ಎಷ್ಟು ಹಾಲು ಬೇಕು ಎಂಬ ಬೇಡಿಕೆ ಪಟ್ಟಿ ನೀಡುತ್ತವೆ. ಇದರಂತೆ ಉಳಿದೆಡೆ ನಗರಸಭೆ/ಪುರಸಭೆ ಸಿಬ್ಬಂದಿ ಪಟ್ಟಿ ಕೊಡುತ್ತಾರೆ. ಪ್ರಸ್ತುತ 30 ಸಾವಿರ ಲೀಟರ್ ಹಾಲಿಗೆ ಬೇಡಿಕೆಯಿದೆ. ಇಷ್ಟನ್ನು ನಾವು ಕೊಡುತ್ತಿದ್ದೇವೆ. ಸರ್ಕಾರ ನಮಗೆ ಒಂದು ಲೀಟರ್ಗೆ ₹ 36 ಕೊಡಲಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಗರ/ಪಟ್ಟಣಗಳಲ್ಲಿನ ಕಟ್ಟಡ ಕಾರ್ಮಿಕರು, ನಿರಾಶ್ರಿತರು, ಬಡ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಮೈಮುಲ್ ಶುಕ್ರವಾರ ಚಾಲನೆ ನೀಡಿತು.</p>.<p>ಮೈಸೂರಿನ ಡಾ.ರಾಜ್ಕುಮಾರ್ ರಸ್ತೆಯಲ್ಲಿನ ಹುಡ್ಕೋ ಕಾಲೊನಿಯಲ್ಲಿ ಸಾಂಕೇತಿಕವಾಗಿ ಹಾಲು ವಿತರಿಸಿತು. ಜಿಲ್ಲೆಯ ಎಲ್ಲೆಡೆ ಹಾಲು ವಿತರಣೆ ನಡೆಯಿತು.</p>.<p>ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ಡೌನ್ ಜಾರಿಯಲ್ಲಿದ್ದು, ಬಡವರು, ಕೂಲಿ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರ ನೆರವಿಗೆ ಬರಲು ಸರ್ಕಾರ ಮುಂದಾಗಿ ಈ ಯೋಜನೆ ರೂಪಿಸಿದೆ ಎಂದು ಮೈಮುಲ್ನ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್ ಮಾಹಿತಿ ನೀಡಿದರು.</p>.<p>‘ಮಹಾನಗರ ಪಾಲಿಕೆ, ಸ್ಲಂ ಬೋರ್ಡ್, ಲೇಬರ್ ಕಮಿಷನರ್, ಡಿಯುಡಿಸಿ ಸೆಲ್ ಮೈಸೂರಿನಲ್ಲಿ ಎಷ್ಟು ಹಾಲು ಬೇಕು ಎಂಬ ಬೇಡಿಕೆ ಪಟ್ಟಿ ನೀಡುತ್ತವೆ. ಇದರಂತೆ ಉಳಿದೆಡೆ ನಗರಸಭೆ/ಪುರಸಭೆ ಸಿಬ್ಬಂದಿ ಪಟ್ಟಿ ಕೊಡುತ್ತಾರೆ. ಪ್ರಸ್ತುತ 30 ಸಾವಿರ ಲೀಟರ್ ಹಾಲಿಗೆ ಬೇಡಿಕೆಯಿದೆ. ಇಷ್ಟನ್ನು ನಾವು ಕೊಡುತ್ತಿದ್ದೇವೆ. ಸರ್ಕಾರ ನಮಗೆ ಒಂದು ಲೀಟರ್ಗೆ ₹ 36 ಕೊಡಲಿದೆ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>