<p><strong>ಹಂಪಾಪುರ: </strong>ಮನೆಗೆ ಆಧಾರವಾಗಿದ್ದ ಮಗ ವರ್ಷದಿಂದ ಹಾಸಿಗೆ ಹಿಡಿದಿದ್ದಾನೆ. ಆತನ ಆರೋಗ್ಯ ಚೇತರಿಕೆಗಾಗಿ ತನ್ನ ಕಿಡ್ನಿಯನ್ನೇ ತಾಯಿ ಕೊಡಲು ಮುಂದಾದರೂ; ಶಸ್ತ್ರಚಿಕಿತ್ಸೆಗೆ ಅವಶ್ಯವಿರುವ ಹಣ ಹೊಂದಿಸುವುದು ಕಷ್ಟಕರವಾಗಿದೆ.</p>.<p>ಸಂಕಷ್ಟದಿಂದ ಪಾರಾಗಲು ತಾಯಿ–ಮಗ ಪರದಾಡುತ್ತಿದ್ದರೂ; ಸಮಸ್ಯೆ ಬಗೆಹರಿದಿಲ್ಲ. ಸಹೃದಯಿಗಳ ನೆರವಿನತ್ತ ಇದೀಗ ಚಿತ್ತ ಹರಿಸಿದ್ದಾರೆ ಎಚ್.ಡಿ.ಕೋಟೆ ತಾಲ್ಲೂಕಿನ ಚಿಕ್ಕೆರೆಯೂರು ಗ್ರಾಮದ ಪುಟ್ಟತಾಯಮ್ಮ–ನಾಗೇಶ್.</p>.<p>ಪುಟ್ಟತಾಯಮ್ಮ ಪುತ್ರ ನಾಗೇಶ್ (28) ವರ್ಷದಿಂದಲೂ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆಯಾಗಿದ್ದರಿಂದ ಮಧ್ಯದಲ್ಲೇ ಮನೆಗೆ ಮರಳಿದ್ದಾರೆ.</p>.<p>ಮಗನ ಕಿಡ್ನಿ ಕಸಿಗೆ, ತಾಯಿ ಪುಟ್ಟತಾಯಮ್ಮನೇ ತಮ್ಮ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಆದರೆ ಈ ಶಸ್ತ್ರಚಿಕಿತ್ಸೆಗೆ ಬೇಕಿರುವ ₹ 5 ಲಕ್ಷ ಹೊಂದಿಸಲು ನಿತ್ಯವೂ ಹೆಣಗಾಡುತ್ತಿದ್ದಾರೆ ಕೂಲಿ ಮಾಡುವ ನಾಗೇಶನ ಅಮ್ಮ.</p>.<p>ಎರಡು ವರ್ಷದ ಹಿಂದಷ್ಟೇ ಪುಟ್ಟತಾಯಮ್ಮ ಪತಿ ನಾಗೇಗೌಡ ಸಹ ಕಿಡ್ನಿ ವೈಫಲ್ಯದಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ಮಗನಿಗೂ ಅದೇ ಪರಿಸ್ಥಿತಿ ಬರಬಾರದು ಎಂದು ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದಾರೆ. ಆದರೆ ಯಶಸ್ಸು ದೊರಕದಾಗಿದೆ.</p>.<p>ಅಂತಿಮವಾಗಿ ಸಹೃದಯಿಗಳ ಮೊರೆಯೊಕ್ಕಿದ್ದಾರೆ. ‘ನನ್ನ ಮಗ ನಾಗೇಶ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ನಾನೇ ಕಿಡ್ನಿ ಕೊಡುವೆ. ಆದರೆ ಶಸ್ತ್ರಚಿಕಿತ್ಸೆಗೆ ಬೇಕಿರುವ ಹಣ ನನ್ನಲ್ಲಿಲ್ಲ. ಹೃದಯವಂತರು ನೆರವು ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.</p>.<p>‘ತಾಯಿಯ ತ್ಯಾಗ ದೊಡ್ಡದು. ವೈಯಕ್ತಿಕವಾಗಿ ₹ 10 ಸಾವಿರ ನೆರವು ನೀಡಿರುವೆ. ದಾನಿಗಳು ಕೈ ಜೋಡಿಸಿದರೆ ತಾಯಿ–ಮಗನಿಗೆ ಅನುಕೂಲವಾಗಲಿದೆ’ ಎಂದು ಗ್ರಾಮದ ಮುಖಂಡ ಕೆಂಡಗಣ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬ್ಯಾಂಕ್ ಖಾತೆಯ ವಿವರ: ಇಸಾಫ್ (ESAF) ಸಣ್ಣ ಫೈನಾನ್ಸ್ ಬ್ಯಾಂಕ್, ಎಚ್.ಡಿ.ಕೋಟೆ, ಖಾತೆ ಸಂಖ್ಯೆ 53210000332491, ಐಎಫ್ಎಸ್ಸಿ ಕೋಡ್–ಇಎಸ್ಎಂಎಫ್0001296, ಫೋನ್ ಪೇ ನಂಬರ್–9108089989.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಪಾಪುರ: </strong>ಮನೆಗೆ ಆಧಾರವಾಗಿದ್ದ ಮಗ ವರ್ಷದಿಂದ ಹಾಸಿಗೆ ಹಿಡಿದಿದ್ದಾನೆ. ಆತನ ಆರೋಗ್ಯ ಚೇತರಿಕೆಗಾಗಿ ತನ್ನ ಕಿಡ್ನಿಯನ್ನೇ ತಾಯಿ ಕೊಡಲು ಮುಂದಾದರೂ; ಶಸ್ತ್ರಚಿಕಿತ್ಸೆಗೆ ಅವಶ್ಯವಿರುವ ಹಣ ಹೊಂದಿಸುವುದು ಕಷ್ಟಕರವಾಗಿದೆ.</p>.<p>ಸಂಕಷ್ಟದಿಂದ ಪಾರಾಗಲು ತಾಯಿ–ಮಗ ಪರದಾಡುತ್ತಿದ್ದರೂ; ಸಮಸ್ಯೆ ಬಗೆಹರಿದಿಲ್ಲ. ಸಹೃದಯಿಗಳ ನೆರವಿನತ್ತ ಇದೀಗ ಚಿತ್ತ ಹರಿಸಿದ್ದಾರೆ ಎಚ್.ಡಿ.ಕೋಟೆ ತಾಲ್ಲೂಕಿನ ಚಿಕ್ಕೆರೆಯೂರು ಗ್ರಾಮದ ಪುಟ್ಟತಾಯಮ್ಮ–ನಾಗೇಶ್.</p>.<p>ಪುಟ್ಟತಾಯಮ್ಮ ಪುತ್ರ ನಾಗೇಶ್ (28) ವರ್ಷದಿಂದಲೂ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆಯಾಗಿದ್ದರಿಂದ ಮಧ್ಯದಲ್ಲೇ ಮನೆಗೆ ಮರಳಿದ್ದಾರೆ.</p>.<p>ಮಗನ ಕಿಡ್ನಿ ಕಸಿಗೆ, ತಾಯಿ ಪುಟ್ಟತಾಯಮ್ಮನೇ ತಮ್ಮ ಕಿಡ್ನಿ ಕೊಡಲು ಮುಂದಾಗಿದ್ದಾರೆ. ಆದರೆ ಈ ಶಸ್ತ್ರಚಿಕಿತ್ಸೆಗೆ ಬೇಕಿರುವ ₹ 5 ಲಕ್ಷ ಹೊಂದಿಸಲು ನಿತ್ಯವೂ ಹೆಣಗಾಡುತ್ತಿದ್ದಾರೆ ಕೂಲಿ ಮಾಡುವ ನಾಗೇಶನ ಅಮ್ಮ.</p>.<p>ಎರಡು ವರ್ಷದ ಹಿಂದಷ್ಟೇ ಪುಟ್ಟತಾಯಮ್ಮ ಪತಿ ನಾಗೇಗೌಡ ಸಹ ಕಿಡ್ನಿ ವೈಫಲ್ಯದಿಂದ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ಮಗನಿಗೂ ಅದೇ ಪರಿಸ್ಥಿತಿ ಬರಬಾರದು ಎಂದು ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದಾರೆ. ಆದರೆ ಯಶಸ್ಸು ದೊರಕದಾಗಿದೆ.</p>.<p>ಅಂತಿಮವಾಗಿ ಸಹೃದಯಿಗಳ ಮೊರೆಯೊಕ್ಕಿದ್ದಾರೆ. ‘ನನ್ನ ಮಗ ನಾಗೇಶ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ನಾನೇ ಕಿಡ್ನಿ ಕೊಡುವೆ. ಆದರೆ ಶಸ್ತ್ರಚಿಕಿತ್ಸೆಗೆ ಬೇಕಿರುವ ಹಣ ನನ್ನಲ್ಲಿಲ್ಲ. ಹೃದಯವಂತರು ನೆರವು ನೀಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.</p>.<p>‘ತಾಯಿಯ ತ್ಯಾಗ ದೊಡ್ಡದು. ವೈಯಕ್ತಿಕವಾಗಿ ₹ 10 ಸಾವಿರ ನೆರವು ನೀಡಿರುವೆ. ದಾನಿಗಳು ಕೈ ಜೋಡಿಸಿದರೆ ತಾಯಿ–ಮಗನಿಗೆ ಅನುಕೂಲವಾಗಲಿದೆ’ ಎಂದು ಗ್ರಾಮದ ಮುಖಂಡ ಕೆಂಡಗಣ್ಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬ್ಯಾಂಕ್ ಖಾತೆಯ ವಿವರ: ಇಸಾಫ್ (ESAF) ಸಣ್ಣ ಫೈನಾನ್ಸ್ ಬ್ಯಾಂಕ್, ಎಚ್.ಡಿ.ಕೋಟೆ, ಖಾತೆ ಸಂಖ್ಯೆ 53210000332491, ಐಎಫ್ಎಸ್ಸಿ ಕೋಡ್–ಇಎಸ್ಎಂಎಫ್0001296, ಫೋನ್ ಪೇ ನಂಬರ್–9108089989.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>