<p><strong>ಮೈಸೂರು:</strong> ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಗುರುವಾರ ಒಡನಾಡಿ ಸಂಸ್ಥೆಯ ಮಕ್ಕಳೊಂದಿಗೆ ತಮ್ಮ 73ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.</p>.<p>‘ಕೋವಿಡ್ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಕೆಟ್ಟ ಸಾಂಕ್ರಾಮಿಕ ರೋಗವಿದು. ಹೇಳಲಾಗದ ಕಾಯಿಲೆ. ಆದ್ದರಿಂದ ಜನ್ಮದಿನ ನಿಮಿತ್ತದ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿರುವೆ. ಯಾರೊಬ್ಬರೂ ಶುಭಾಶಯ ಕೋರಲು ಬರಬೇಡಿ’ ಎಂದು ಮನವಿ ಮಾಡಿದ್ದೇನೆ ಎಂದು ಪ್ರಸಾದ್ ತಿಳಿಸಿದರು.</p>.<p>‘ಹಲವು ವರ್ಷಗಳಿಂದಲೂ ಒಡನಾಡಿ ಸಂಸ್ಥೆಯ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವೆ. ಕೋವಿಡ್ನ ಆತಂಕದಲ್ಲೂ ಇಲ್ಲಿನ ಮಕ್ಕಳ ಜೊತೆ ಕೆಲ ಸಮಯ ಕಳೆಯಲು ಬಂದಿರುವೆ. ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ. ಜನ್ಮ ದಿನಾಚರಣೆಯೂ ಸಾರ್ಥಕ’ ಎಂದು ಹೇಳಿದರು.</p>.<p>‘ಒಡನಾಡಿ ಸಂಸ್ಥೆ ಎಲ್ಲೆಡೆ ಉತ್ತಮ ಹೆಸರು ಗಳಿಸಿದೆ. ಸಂಸ್ಥೆ ಹಾಗೂ ಇಲ್ಲಿನ ಮಕ್ಕಳಿಗೆ ನೆರವು ಒದಗಿಸಲು, ಸಹಕಾರ ನೀಡಲು ನಾನು ಬದ್ಧ’ ಎಂದರು.</p>.<p>‘ಛಾಯಾದೇವಿ ಅನಾಥ ಆಶ್ರಮವೂ ಸಹ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಅಲ್ಲಿಯೂ ಸಹ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಪ್ರಸಾದ್ ತಿಳಿಸಿದರು.</p>.<p>ಮಕ್ಕಳೊಟ್ಟಿಗೆ ಕೇಕ್ ಕತ್ತರಿಸಿದ ಪ್ರಸಾದ್, ಎಲ್ಲರಿಗೂ ಹಣ್ಣು, ಸ್ಯಾನಿಟೈಸರ್ ವಿತರಿಸಿ ಸಂಭ್ರಮಿಸಿದರು.</p>.<p>ಒಡನಾಡಿ ಸ್ವಯಂ ಸೇವಾ ಸಂಸ್ಥೆಯ ಸ್ಟ್ಯಾನ್ಲಿ-ಪರಶು, ಬಸವೇಗೌಡ, ನಂದಕುಮಾರ್, ಪ್ರಸನ್ನ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಗುರುವಾರ ಒಡನಾಡಿ ಸಂಸ್ಥೆಯ ಮಕ್ಕಳೊಂದಿಗೆ ತಮ್ಮ 73ನೇ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು.</p>.<p>‘ಕೋವಿಡ್ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಕೆಟ್ಟ ಸಾಂಕ್ರಾಮಿಕ ರೋಗವಿದು. ಹೇಳಲಾಗದ ಕಾಯಿಲೆ. ಆದ್ದರಿಂದ ಜನ್ಮದಿನ ನಿಮಿತ್ತದ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿರುವೆ. ಯಾರೊಬ್ಬರೂ ಶುಭಾಶಯ ಕೋರಲು ಬರಬೇಡಿ’ ಎಂದು ಮನವಿ ಮಾಡಿದ್ದೇನೆ ಎಂದು ಪ್ರಸಾದ್ ತಿಳಿಸಿದರು.</p>.<p>‘ಹಲವು ವರ್ಷಗಳಿಂದಲೂ ಒಡನಾಡಿ ಸಂಸ್ಥೆಯ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವೆ. ಕೋವಿಡ್ನ ಆತಂಕದಲ್ಲೂ ಇಲ್ಲಿನ ಮಕ್ಕಳ ಜೊತೆ ಕೆಲ ಸಮಯ ಕಳೆಯಲು ಬಂದಿರುವೆ. ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ. ಜನ್ಮ ದಿನಾಚರಣೆಯೂ ಸಾರ್ಥಕ’ ಎಂದು ಹೇಳಿದರು.</p>.<p>‘ಒಡನಾಡಿ ಸಂಸ್ಥೆ ಎಲ್ಲೆಡೆ ಉತ್ತಮ ಹೆಸರು ಗಳಿಸಿದೆ. ಸಂಸ್ಥೆ ಹಾಗೂ ಇಲ್ಲಿನ ಮಕ್ಕಳಿಗೆ ನೆರವು ಒದಗಿಸಲು, ಸಹಕಾರ ನೀಡಲು ನಾನು ಬದ್ಧ’ ಎಂದರು.</p>.<p>‘ಛಾಯಾದೇವಿ ಅನಾಥ ಆಶ್ರಮವೂ ಸಹ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿದೆ. ಅಲ್ಲಿಯೂ ಸಹ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಪ್ರಸಾದ್ ತಿಳಿಸಿದರು.</p>.<p>ಮಕ್ಕಳೊಟ್ಟಿಗೆ ಕೇಕ್ ಕತ್ತರಿಸಿದ ಪ್ರಸಾದ್, ಎಲ್ಲರಿಗೂ ಹಣ್ಣು, ಸ್ಯಾನಿಟೈಸರ್ ವಿತರಿಸಿ ಸಂಭ್ರಮಿಸಿದರು.</p>.<p>ಒಡನಾಡಿ ಸ್ವಯಂ ಸೇವಾ ಸಂಸ್ಥೆಯ ಸ್ಟ್ಯಾನ್ಲಿ-ಪರಶು, ಬಸವೇಗೌಡ, ನಂದಕುಮಾರ್, ಪ್ರಸನ್ನ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>