<p><strong>ಮೈಸೂರು:</strong> ‘ಜೆ.ಸಿ.ನಗರ ಬಡಾವಣೆಯಲ್ಲಿ ರಾಜಮನೆತನದವರು ತಮ್ಮ ಕುಟುಂಬಕ್ಕೆ ನೀಡಿದ ನಿವೇಶನದಲ್ಲಿ ಹಲವು ವರ್ಷಗಳ ಹಿಂದೆಯೇ ಮನೆ ಕಟ್ಟಿಕೊಂಡು ವಾಸವಿದ್ದರೂ; ಖಾತೆ ಮಾಡಿಸಿಕೊಳ್ಳಲು ಅಗತ್ಯವಿರುವ ಎನ್ಒಸಿ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಮೊಹಮ್ಮದ್ ಅಮೀರ್ ಸೋಮವಾರ ಇಲ್ಲಿ ಆರೋಪಿಸಿದರು.</p>.<p>‘ಅರಮನೆಯ ಅಶ್ವಾರೋಹಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಂದೆ ಮೊಹಮ್ಮದ್ ದಸ್ತಗೀರ್ಗೆ ನಿವೇಶನವೊಂದನ್ನು ಅರಮನೆ ನೀಡಿತ್ತು. ಅಲ್ಲಿ ಮನೆ ಕಟ್ಟಿಕೊಂಡು ನಮ್ಮ ಕುಟುಂಬ ವಾಸವಾಗಿದೆ. ಈಗ ಖಾತೆ ಮಾಡಿಸಿಕೊಳ್ಳಲಿಕ್ಕಾಗಿ ಪಾಲಿಕೆಗೆ ಹೋದರೆ; ಮುಡಾದಿಂದ ಎನ್ಒಸಿ ತನ್ನಿ ಎಂದಿದ್ದಾರೆ. ಮುಡಾಗೆ ಅರ್ಜಿ ಸಲ್ಲಿಸಿದರೂ ಎನ್ಒಸಿ ಕೊಟ್ಟಿಲ್ಲ. ಕೆಲವು ಮಧ್ಯವರ್ತಿಗಳು ಲಂಚ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.</p>.<p>ಸ್ಥಳೀಯ ನಿವಾಸಿ ಶ್ರೀಪಾದ್ ಮಾತನಾಡಿ ‘ರಾಜರು 375 ಕುಟುಂಬಗಳಿಗೆ ನಿವೇಶನ ನೀಡಿದ್ದರು. ಇದರಲ್ಲಿ 280ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರವಿದ್ದರೂ; ಖಾತೆಯಾಗಿಲ್ಲ. ಈ ಬಗ್ಗೆ ಮುಡಾದವರನ್ನು ಕೇಳಿದರೆ ಕೆಎಆರ್ಪಿ ಮೌಂಟೆಂಡ್ ಎಂಪ್ಲಾಯಿಸ್ ಕೋ ಆಪರೇಟಿವ್ ಸೊಸೈಟಿ ವ್ಯಾಪ್ತಿಗೆ ನಿವೇಶನ ಒಳಪಟ್ಟಿದೆ ಅನ್ನುತ್ತಾರೆ. ಆದರೆ, ಈ ಸೊಸೈಟಿ ಸೂಪರ್ ಸೀಡ್ ಆಗಿ ಎಷ್ಟೋ ವರ್ಷ ಕಳೆದಿದೆ. ಪ್ರಾಧಿಕಾರದ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಖಾತೆ ಮಾಡಿಸಿಕೊಳ್ಳಲು ಅಗತ್ಯವಾದ ದಾಖಲಾತಿ ಪತ್ರ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.</p>.<p>ಹೋರಾಟಗಾರ ಬೋ.ಗಾ.ನಂದೀಶ್, ಶಾರದಾ, ಸಯ್ಯಾದ್ ನಾಸೀಮ್ ಪತ್ರಿಕಾಗೋಷ್ಠಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಜೆ.ಸಿ.ನಗರ ಬಡಾವಣೆಯಲ್ಲಿ ರಾಜಮನೆತನದವರು ತಮ್ಮ ಕುಟುಂಬಕ್ಕೆ ನೀಡಿದ ನಿವೇಶನದಲ್ಲಿ ಹಲವು ವರ್ಷಗಳ ಹಿಂದೆಯೇ ಮನೆ ಕಟ್ಟಿಕೊಂಡು ವಾಸವಿದ್ದರೂ; ಖಾತೆ ಮಾಡಿಸಿಕೊಳ್ಳಲು ಅಗತ್ಯವಿರುವ ಎನ್ಒಸಿ ನೀಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸತಾಯಿಸುತ್ತಿದ್ದಾರೆ’ ಎಂದು ಮೊಹಮ್ಮದ್ ಅಮೀರ್ ಸೋಮವಾರ ಇಲ್ಲಿ ಆರೋಪಿಸಿದರು.</p>.<p>‘ಅರಮನೆಯ ಅಶ್ವಾರೋಹಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಂದೆ ಮೊಹಮ್ಮದ್ ದಸ್ತಗೀರ್ಗೆ ನಿವೇಶನವೊಂದನ್ನು ಅರಮನೆ ನೀಡಿತ್ತು. ಅಲ್ಲಿ ಮನೆ ಕಟ್ಟಿಕೊಂಡು ನಮ್ಮ ಕುಟುಂಬ ವಾಸವಾಗಿದೆ. ಈಗ ಖಾತೆ ಮಾಡಿಸಿಕೊಳ್ಳಲಿಕ್ಕಾಗಿ ಪಾಲಿಕೆಗೆ ಹೋದರೆ; ಮುಡಾದಿಂದ ಎನ್ಒಸಿ ತನ್ನಿ ಎಂದಿದ್ದಾರೆ. ಮುಡಾಗೆ ಅರ್ಜಿ ಸಲ್ಲಿಸಿದರೂ ಎನ್ಒಸಿ ಕೊಟ್ಟಿಲ್ಲ. ಕೆಲವು ಮಧ್ಯವರ್ತಿಗಳು ಲಂಚ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.</p>.<p>ಸ್ಥಳೀಯ ನಿವಾಸಿ ಶ್ರೀಪಾದ್ ಮಾತನಾಡಿ ‘ರಾಜರು 375 ಕುಟುಂಬಗಳಿಗೆ ನಿವೇಶನ ನೀಡಿದ್ದರು. ಇದರಲ್ಲಿ 280ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರವಿದ್ದರೂ; ಖಾತೆಯಾಗಿಲ್ಲ. ಈ ಬಗ್ಗೆ ಮುಡಾದವರನ್ನು ಕೇಳಿದರೆ ಕೆಎಆರ್ಪಿ ಮೌಂಟೆಂಡ್ ಎಂಪ್ಲಾಯಿಸ್ ಕೋ ಆಪರೇಟಿವ್ ಸೊಸೈಟಿ ವ್ಯಾಪ್ತಿಗೆ ನಿವೇಶನ ಒಳಪಟ್ಟಿದೆ ಅನ್ನುತ್ತಾರೆ. ಆದರೆ, ಈ ಸೊಸೈಟಿ ಸೂಪರ್ ಸೀಡ್ ಆಗಿ ಎಷ್ಟೋ ವರ್ಷ ಕಳೆದಿದೆ. ಪ್ರಾಧಿಕಾರದ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಪಟ್ಟವರು ಕೂಡಲೇ ಖಾತೆ ಮಾಡಿಸಿಕೊಳ್ಳಲು ಅಗತ್ಯವಾದ ದಾಖಲಾತಿ ಪತ್ರ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು.</p>.<p>ಹೋರಾಟಗಾರ ಬೋ.ಗಾ.ನಂದೀಶ್, ಶಾರದಾ, ಸಯ್ಯಾದ್ ನಾಸೀಮ್ ಪತ್ರಿಕಾಗೋಷ್ಠಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>