<p><strong>ಮೈಸೂರು: </strong>ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಗೆ ಎರಡು ದಿನವಷ್ಟೇ ಬಾಕಿಯಿದೆ.</p>.<p>ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ತನ್ನದೇ ಆದ ಖ್ಯಾತಿ, ಜನಾಕರ್ಷಣೆಯನ್ನು ಹೊಂದಿದೆ.</p>.<p>ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಅರಮನೆ ಆವರಣದೊಳಗೆ ನಡೆಯಲಿರುವ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿದೆ.</p>.<p>ಇದಕ್ಕೆ ಪೂರಕವಾದ ತಾಲೀಮು ಹಲವು ದಿನಗಳಿಂದ ನಡೆದಿದೆ. ಗುರುವಾರ ಜಂಬೂ ಸವಾರಿಗೆ ಪುಷ್ಪಾರ್ಚನೆಯ ತಾಲೀಮು ನಡೆದಿತ್ತು.</p>.<p>ಶುಕ್ರವಾರ ಬೆಳಿಗ್ಗೆ 8ರಿಂದ 9 ಗಂಟೆಯವರೆಗೂ ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವರೋಹಿ ಪಡೆ ತಾಲೀಮಿನಲ್ಲಿ ಪಾಲ್ಗೊಂಡಿತ್ತು. ಪುಷ್ಪಾರ್ಚನೆ, ಗೌರವ ವಂದನೆ ಸೇರಿದಂತೆ ವಿಜಯದಶಮಿಯಂದು ನಡೆಯಲಿರುವ ಜಂಬೂಸವಾರಿಯ ಬಹುತೇಕ ಸಂಪ್ರದಾಯಗಳು ಪಾಲನೆಯಾದವು.</p>.<p>ಪೊಲೀಸ್ ವಾದ್ಯ ವೃಂದ ಸಹ ತಾಲೀಮಿನಲ್ಲಿ ಭಾಗಿಯಾಗಿತ್ತು. ಫಿರಂಗಿಗಳಿಂದ ಕುಶಾಲ ತೋಪು ಹಾರಿಸುವಿಕೆಯೂ ನಡೆಯಿತು. ಸಿಡಿಮದ್ದಿನ ಸದ್ದಿಗೆ ಯಾವೊಂದು ಗಜ, ಅಶ್ವ ಕೊಂಚವೂ ಬೆದರಿಲಿಲ್ಲ. ನಿಂತಲ್ಲಿಂದ ಕದಲಲಿಲ್ಲ.</p>.<p class="Briefhead"><strong>ಅಂತಿಮ ತಾಲೀಮು ಶನಿವಾರ</strong></p>.<p>ಶನಿವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಜಂಬೂ ಸವಾರಿಯ ಅಂತಿಮ ತಾಲೀಮು ನಡೆಯಲಿದೆ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.</p>.<p>ಈ ಅಂತಿಮ ತಾಲೀಮು ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಯ ಪ್ರತಿರೂಪದಂತೆ ಇರಲಿದೆ ಎನ್ನಲಾಗಿದೆ.</p>.<p>ಕಲಾ ತಂಡಗಳು, ಸ್ತಬ್ಧಚಿತ್ರಗಳು, ಪೊಲೀಸ್ ವಾದ್ಯವೃಂದ, ಫಿರಂಗಿಗಳಿಂದ 21 ಕುಶಾಲ ತೋಪು ಸಿಡಿಸುವಿಕೆ ಸೇರಿದಂತೆ ಜಂಬೂ ಸವಾರಿಯ ಸಕಲ ಸಂಪ್ರದಾಯ ಪಾಲನೆಯಾಗಲಿದೆ ಎಂಬುದು ಗೊತ್ತಾಗಿದೆ.</p>.<p>ಜಿಲ್ಲಾಡಳಿತದ ಉನ್ನತ ಅಧಿಕಾರಿ ವರ್ಗ, ಪೊಲೀಸ್ ಇಲಾಖೆಯ ಮುಖ್ಯಸ್ಥರು, ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಈ ಸಂದರ್ಭ ಉಪಸ್ಥಿತರಿರಲಿದೆ ಎಂಬುದು ತಿಳಿದು ಬಂದಿದೆ.</p>.<p>ಸರಳ, ಸಾಂಪ್ರದಾಯಿಕ ದಸರಾ ಮಹೋತ್ಸವದ ಜಂಬೂಸವಾರಿಯನ್ನು ಅರಮನೆ ಆವರಣದೊಳಗಿನ 300 ಮೀಟರ್ ದೂರಕ್ಕಷ್ಟೇ ಸೀಮಿತಗೊಳಿಸಬೇಕು ಎಂಬ ಚರ್ಚೆ ಅಧಿಕಾರಿ ವಲಯದಲ್ಲಿ ನಡೆದಿದೆ. ಇನ್ನೂ ಅಂತಿಮಗೊಂಡಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p class="Briefhead"><strong>ಭಾನುವಾರ ತಾಲೀಮಿಲ್ಲ</strong></p>.<p>ಭಾನುವಾರ ಮಹಾನವಮಿ. ಆಯುಧಪೂಜೆ. ಗಜಪಡೆ, ಅಶ್ವಪಡೆ ಯಾವ ತಾಲೀಮಿನಲ್ಲೂ ಭಾಗಿಯಾಗಲ್ಲ. ಅರಮನೆಯ ಪೂಜೆಯಲ್ಲಷ್ಟೇ ಪಾಲ್ಗೊಳ್ಳಲಿವೆ ಎಂದು ಅರಣ್ಯ ಇಲಾಖೆಯ ಪಶು ವೈದ್ಯ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead"><strong>ರಾಜವಂಶಸ್ಥರಿಂದ ಕಾಳರಾತ್ರಿ ಪೂಜೆ</strong></p>.<p>ನವರಾತ್ರಿಯ ಏಳನೇ ದಿನವಾದ ಶುಕ್ರವಾರ ರಾತ್ರಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಕಾಳರಾತ್ರಿ ಪೂಜೆ ನೆರವೇರಿಸಿದರು.</p>.<p>ಯದು ವಂಶಸ್ಥರು ನವರಾತ್ರಿಯ ಸಪ್ತಮಿ ದಿನದಂದು ಶಕ್ತಿ ದೇವತೆಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಸಂಪ್ರದಾಯದಂತೆಯೇ ಯದುವೀರ್ ಕಾಳರಾತ್ರಿ ಪೂಜೆ ನಡೆಸಿದರು.</p>.<p>ರಾಜರ ಆಳ್ವಿಕೆಯ ಕಾಲಘಟ್ಟದಲ್ಲಿ ಕಾಳರಾತ್ರಿ ಪೂಜೆಯ ಸಂದರ್ಭ ಪ್ರಾಣಿಬಲಿ ಕೊಡಲಾಗುತ್ತಿತ್ತು. ಇದೀಗ ಪ್ರಾಣಿಯ ಬೊಂಬೆಯನ್ನು ಬಲಿಯನ್ನಾಗಿ ದೇವಿಗೆ ಅರ್ಪಿಸಲಾಗುತ್ತಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಗೆ ಎರಡು ದಿನವಷ್ಟೇ ಬಾಕಿಯಿದೆ.</p>.<p>ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ತನ್ನದೇ ಆದ ಖ್ಯಾತಿ, ಜನಾಕರ್ಷಣೆಯನ್ನು ಹೊಂದಿದೆ.</p>.<p>ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಅರಮನೆ ಆವರಣದೊಳಗೆ ನಡೆಯಲಿರುವ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿದೆ.</p>.<p>ಇದಕ್ಕೆ ಪೂರಕವಾದ ತಾಲೀಮು ಹಲವು ದಿನಗಳಿಂದ ನಡೆದಿದೆ. ಗುರುವಾರ ಜಂಬೂ ಸವಾರಿಗೆ ಪುಷ್ಪಾರ್ಚನೆಯ ತಾಲೀಮು ನಡೆದಿತ್ತು.</p>.<p>ಶುಕ್ರವಾರ ಬೆಳಿಗ್ಗೆ 8ರಿಂದ 9 ಗಂಟೆಯವರೆಗೂ ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವರೋಹಿ ಪಡೆ ತಾಲೀಮಿನಲ್ಲಿ ಪಾಲ್ಗೊಂಡಿತ್ತು. ಪುಷ್ಪಾರ್ಚನೆ, ಗೌರವ ವಂದನೆ ಸೇರಿದಂತೆ ವಿಜಯದಶಮಿಯಂದು ನಡೆಯಲಿರುವ ಜಂಬೂಸವಾರಿಯ ಬಹುತೇಕ ಸಂಪ್ರದಾಯಗಳು ಪಾಲನೆಯಾದವು.</p>.<p>ಪೊಲೀಸ್ ವಾದ್ಯ ವೃಂದ ಸಹ ತಾಲೀಮಿನಲ್ಲಿ ಭಾಗಿಯಾಗಿತ್ತು. ಫಿರಂಗಿಗಳಿಂದ ಕುಶಾಲ ತೋಪು ಹಾರಿಸುವಿಕೆಯೂ ನಡೆಯಿತು. ಸಿಡಿಮದ್ದಿನ ಸದ್ದಿಗೆ ಯಾವೊಂದು ಗಜ, ಅಶ್ವ ಕೊಂಚವೂ ಬೆದರಿಲಿಲ್ಲ. ನಿಂತಲ್ಲಿಂದ ಕದಲಲಿಲ್ಲ.</p>.<p class="Briefhead"><strong>ಅಂತಿಮ ತಾಲೀಮು ಶನಿವಾರ</strong></p>.<p>ಶನಿವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಜಂಬೂ ಸವಾರಿಯ ಅಂತಿಮ ತಾಲೀಮು ನಡೆಯಲಿದೆ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.</p>.<p>ಈ ಅಂತಿಮ ತಾಲೀಮು ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಯ ಪ್ರತಿರೂಪದಂತೆ ಇರಲಿದೆ ಎನ್ನಲಾಗಿದೆ.</p>.<p>ಕಲಾ ತಂಡಗಳು, ಸ್ತಬ್ಧಚಿತ್ರಗಳು, ಪೊಲೀಸ್ ವಾದ್ಯವೃಂದ, ಫಿರಂಗಿಗಳಿಂದ 21 ಕುಶಾಲ ತೋಪು ಸಿಡಿಸುವಿಕೆ ಸೇರಿದಂತೆ ಜಂಬೂ ಸವಾರಿಯ ಸಕಲ ಸಂಪ್ರದಾಯ ಪಾಲನೆಯಾಗಲಿದೆ ಎಂಬುದು ಗೊತ್ತಾಗಿದೆ.</p>.<p>ಜಿಲ್ಲಾಡಳಿತದ ಉನ್ನತ ಅಧಿಕಾರಿ ವರ್ಗ, ಪೊಲೀಸ್ ಇಲಾಖೆಯ ಮುಖ್ಯಸ್ಥರು, ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಈ ಸಂದರ್ಭ ಉಪಸ್ಥಿತರಿರಲಿದೆ ಎಂಬುದು ತಿಳಿದು ಬಂದಿದೆ.</p>.<p>ಸರಳ, ಸಾಂಪ್ರದಾಯಿಕ ದಸರಾ ಮಹೋತ್ಸವದ ಜಂಬೂಸವಾರಿಯನ್ನು ಅರಮನೆ ಆವರಣದೊಳಗಿನ 300 ಮೀಟರ್ ದೂರಕ್ಕಷ್ಟೇ ಸೀಮಿತಗೊಳಿಸಬೇಕು ಎಂಬ ಚರ್ಚೆ ಅಧಿಕಾರಿ ವಲಯದಲ್ಲಿ ನಡೆದಿದೆ. ಇನ್ನೂ ಅಂತಿಮಗೊಂಡಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p>.<p class="Briefhead"><strong>ಭಾನುವಾರ ತಾಲೀಮಿಲ್ಲ</strong></p>.<p>ಭಾನುವಾರ ಮಹಾನವಮಿ. ಆಯುಧಪೂಜೆ. ಗಜಪಡೆ, ಅಶ್ವಪಡೆ ಯಾವ ತಾಲೀಮಿನಲ್ಲೂ ಭಾಗಿಯಾಗಲ್ಲ. ಅರಮನೆಯ ಪೂಜೆಯಲ್ಲಷ್ಟೇ ಪಾಲ್ಗೊಳ್ಳಲಿವೆ ಎಂದು ಅರಣ್ಯ ಇಲಾಖೆಯ ಪಶು ವೈದ್ಯ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead"><strong>ರಾಜವಂಶಸ್ಥರಿಂದ ಕಾಳರಾತ್ರಿ ಪೂಜೆ</strong></p>.<p>ನವರಾತ್ರಿಯ ಏಳನೇ ದಿನವಾದ ಶುಕ್ರವಾರ ರಾತ್ರಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯಲ್ಲಿ ಕಾಳರಾತ್ರಿ ಪೂಜೆ ನೆರವೇರಿಸಿದರು.</p>.<p>ಯದು ವಂಶಸ್ಥರು ನವರಾತ್ರಿಯ ಸಪ್ತಮಿ ದಿನದಂದು ಶಕ್ತಿ ದೇವತೆಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಸಂಪ್ರದಾಯದಂತೆಯೇ ಯದುವೀರ್ ಕಾಳರಾತ್ರಿ ಪೂಜೆ ನಡೆಸಿದರು.</p>.<p>ರಾಜರ ಆಳ್ವಿಕೆಯ ಕಾಲಘಟ್ಟದಲ್ಲಿ ಕಾಳರಾತ್ರಿ ಪೂಜೆಯ ಸಂದರ್ಭ ಪ್ರಾಣಿಬಲಿ ಕೊಡಲಾಗುತ್ತಿತ್ತು. ಇದೀಗ ಪ್ರಾಣಿಯ ಬೊಂಬೆಯನ್ನು ಬಲಿಯನ್ನಾಗಿ ದೇವಿಗೆ ಅರ್ಪಿಸಲಾಗುತ್ತಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>