ಮೈಸೂರು: ಇಲ್ಲಿನ ಲಕ್ಷ್ಮೀಪುರಂ ಸಬ್ಇನ್ಸ್ಪೆಕ್ಟರ್ ಎಂ.ಎಸ್.ಭಂಡಿ ಅವರ ಸ್ಕೂಟರ್ನ್ನು ಅವರ ನಿವಾಸದ ಎದುರಿನಿಂದಲೇ ಕಳ್ಳರು ಕಳವು ಮಾಡಿದ್ದಾರೆ. ಈ ಕುರಿತು ಕೆ.ಆರ್.ಠಾಣೆಗೆ ದೂರು ನೀಡಿದ್ದಾರೆ.
ಚಾಕುವಿನಿಂದ ಹಲ್ಲೆ: ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಬೈಕ್ನ್ನು ಪಕ್ಕಕ್ಕೆ ನಿಲ್ಲಿಸಲು ಹೇಳಿದ ಜಯನಗರದ ನಿವಾಸಿ ಸ್ವಾಮಿ (36) ಎಂಬುವವರ ಮೇಲೆ ಮನು (27) ಎಂಬಾತ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕುವೆಂಪುನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಂಚಮಂತ್ರ ರಸ್ತೆಯಲ್ಲಿ ಮನು ಮದ್ಯ ಸೇವಿಸಿ ಬೈಕ್ನ್ನು ರಸ್ತೆ ಮಧ್ಯೆ ನಿಲ್ಲಿಸಿದಾಗ ಗಲಾಟೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.