ರಾಜ್ಯದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಥೋತ್ಸವ ರದ್ದುಪಡಿಸಲಾಗಿದೆ. ಪೂರ್ವ ನಿಗದಿಯಂತೆ ಮಾರ್ಚ್ 19ರಿಂದ 30ರವರೆಗೆ ದೇವಾಲಯದಲ್ಲಿ ನಡೆಯುವ ಸಂಪ್ರದಾಯ ಬದ್ಧ ಧಾರ್ಮಿಕ ವಿಧಿ ವಿಧಾನಗಳನ್ನು ಸ್ಥಳೀಯರ ಸಹಯೋಗದೊಂದಿಗೆ ದೇವಾಲಯದ ಒಳಗೇ ನಡೆಸಬಹುದು. ಮಾರ್ಚ್ 26ರಂದು ಸಾಂಕೇತಿಕವಾಗಿ ಚಿಕ್ಕ ತೇರಿನಲ್ಲಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.