<p><strong>ಮೈಸೂರು: </strong>ವಾಹನ ಇಲ್ಲದೆಯೇ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಸಾಲ ಪಡೆದಿರುವ ಬೃಹತ್ ಜಾಲವನ್ನು ಬಯಲಿಗೆಳೆದಿರುವ ನಗರದ ದೇವರಾಜ ಠಾಣೆಯ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.</p>.<p>ಆರೋಪಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಬರೋಬರಿ ₹ 1.35 ಕೋಟಿ ಸಾಲ ಪಡೆದಿದ್ದಾರೆ. ಅದಕ್ಕಾಗಿ ಬಳಕೆ ಮಾಡಿದ 7 ಲಾರಿ, 2 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಬಹುತೇಕರು ತಮಿಳುನಾಡಿಗೆ ಸೇರಿದವರು.</p>.<p>’ಸಾಲದ ಕಂತು ಪಾವತಿಸದವರ ಲಾರಿಯನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿ ವಾಹನವೇ ಇರಲಿಲ್ಲ’ ಎಂದು ಚೋಳಮಂಡಲಂ ಫೈನಾನ್ಸ್ ಸ್ಥಳೀಯ ವ್ಯವಸ್ಥಾಪಕ ವಿಜಯ್ ದೂರು ನೀಡಿದ್ದರು.</p>.<p><strong>ಏನಿದು ಪ್ರಕರಣ?</strong><br />ಆಂಧ್ರಪ್ರದೇಶದ ವಿವಿಧ ಆರ್ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವಂತೆ ನಕಲಿ ಆರ್.ಸಿ ಶೀಟ್ನ್ನು ಸೃಷ್ಟಿಸಿರುವ ಆರೋಪಿಗಳು ಕರ್ನಾಟಕದ ಹಲವು ಆರ್ಟಿಒ ಕಚೇರಿಗಳಲ್ಲಿ ವರ್ಗಾವಣೆ, ಮರು ನೋಂದಣಿಗಾಗಿ ಅರ್ಜಿ ಸಲ್ಲಿಸಿ ಸ್ಥಳೀಯ ವಿಳಾಸದ ನಕಲಿ ದಾಖಲೆಗಳನ್ನು ನೀಡಿ, ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.</p>.<p>’2019ರಿಂದ ಇಲ್ಲಿಯವರೆಗೆ ಒಟ್ಟು 200 ನಕಲಿ ಆರ್.ಸಿ ಕಾರ್ಡ್ ಸೃಷ್ಟಿಸಿದ್ದಾರೆ. ಈ ದಾಖಲೆಗಳ ಆಧಾರದಲ್ಲೇ ಹಣಕಾಸು ಸಂಸ್ಥೆಗಳಿಂದ ವಾಹನ ಸಾಲ ಪಡೆದು ವಂಚಿಸುತ್ತಿದ್ದರು. ಆಂಧ್ರಪ್ರದೇಶದಲ್ಲಿ ಇನ್ನೂ ವಾಹನಗಳ ನೋಂದಣಿ ಪ್ರಕ್ರಿಯೆ ಡಿಜಿಟಲೀಕರಣಗೊಂಡಿಲ್ಲ. ಹಾಗಾಗಿ, ಆರೋಪಿಗಳು ಮೂಲ ನಕಲಿ ನೋಂದಣಿಯನ್ನು ಆಂಧ್ರದಲ್ಲೆ ಮಾಡಿಸುತ್ತಿದ್ದರು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದೇವರಾಜ ಎಸಿಪಿ ಎಂ.ಎನ್.ಶಶಿಧರ್ ತನಿಖೆಯ ನೇತೃತ್ವ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ವಾಹನ ಇಲ್ಲದೆಯೇ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಸಾಲ ಪಡೆದಿರುವ ಬೃಹತ್ ಜಾಲವನ್ನು ಬಯಲಿಗೆಳೆದಿರುವ ನಗರದ ದೇವರಾಜ ಠಾಣೆಯ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.</p>.<p>ಆರೋಪಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಬರೋಬರಿ ₹ 1.35 ಕೋಟಿ ಸಾಲ ಪಡೆದಿದ್ದಾರೆ. ಅದಕ್ಕಾಗಿ ಬಳಕೆ ಮಾಡಿದ 7 ಲಾರಿ, 2 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಬಹುತೇಕರು ತಮಿಳುನಾಡಿಗೆ ಸೇರಿದವರು.</p>.<p>’ಸಾಲದ ಕಂತು ಪಾವತಿಸದವರ ಲಾರಿಯನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿ ವಾಹನವೇ ಇರಲಿಲ್ಲ’ ಎಂದು ಚೋಳಮಂಡಲಂ ಫೈನಾನ್ಸ್ ಸ್ಥಳೀಯ ವ್ಯವಸ್ಥಾಪಕ ವಿಜಯ್ ದೂರು ನೀಡಿದ್ದರು.</p>.<p><strong>ಏನಿದು ಪ್ರಕರಣ?</strong><br />ಆಂಧ್ರಪ್ರದೇಶದ ವಿವಿಧ ಆರ್ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವಂತೆ ನಕಲಿ ಆರ್.ಸಿ ಶೀಟ್ನ್ನು ಸೃಷ್ಟಿಸಿರುವ ಆರೋಪಿಗಳು ಕರ್ನಾಟಕದ ಹಲವು ಆರ್ಟಿಒ ಕಚೇರಿಗಳಲ್ಲಿ ವರ್ಗಾವಣೆ, ಮರು ನೋಂದಣಿಗಾಗಿ ಅರ್ಜಿ ಸಲ್ಲಿಸಿ ಸ್ಥಳೀಯ ವಿಳಾಸದ ನಕಲಿ ದಾಖಲೆಗಳನ್ನು ನೀಡಿ, ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.</p>.<p>’2019ರಿಂದ ಇಲ್ಲಿಯವರೆಗೆ ಒಟ್ಟು 200 ನಕಲಿ ಆರ್.ಸಿ ಕಾರ್ಡ್ ಸೃಷ್ಟಿಸಿದ್ದಾರೆ. ಈ ದಾಖಲೆಗಳ ಆಧಾರದಲ್ಲೇ ಹಣಕಾಸು ಸಂಸ್ಥೆಗಳಿಂದ ವಾಹನ ಸಾಲ ಪಡೆದು ವಂಚಿಸುತ್ತಿದ್ದರು. ಆಂಧ್ರಪ್ರದೇಶದಲ್ಲಿ ಇನ್ನೂ ವಾಹನಗಳ ನೋಂದಣಿ ಪ್ರಕ್ರಿಯೆ ಡಿಜಿಟಲೀಕರಣಗೊಂಡಿಲ್ಲ. ಹಾಗಾಗಿ, ಆರೋಪಿಗಳು ಮೂಲ ನಕಲಿ ನೋಂದಣಿಯನ್ನು ಆಂಧ್ರದಲ್ಲೆ ಮಾಡಿಸುತ್ತಿದ್ದರು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದೇವರಾಜ ಎಸಿಪಿ ಎಂ.ಎನ್.ಶಶಿಧರ್ ತನಿಖೆಯ ನೇತೃತ್ವ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>