<p><strong>ಮೈಸೂರು:</strong> ರಾಜ್ಯ ಸರ್ಕಾರ ಭಾನುವಾರದ ಲಾಕ್ಡೌನ್ ವಾಪಸ್ ಪಡೆದರೂ, ನಗರ ವ್ಯಾಪ್ತಿಯಲ್ಲಿ ಜನ ಸಂಚಾರ ವಿರಳವಾಗಿತ್ತು. ವಾಹನ ದಟ್ಟಣೆಯೂ ಹೆಚ್ಚಿನದಾಗಿ ಗೋಚರಿಸಲಿಲ್ಲ.</p>.<p>ನಗರ ಬಸ್ ನಿಲ್ದಾಣದಲ್ಲಿ ಹಿಂದಿನ ಜನದಟ್ಟಣೆ ಕಂಡು ಬರಲಿಲ್ಲ. ದಿನವಿಡಿ ವಾಹನ ಚಾಲಕರು–ನಿರ್ವಾಹಕರು ಪ್ರಯಾಣಿಕರಿಗಾಗಿ ಕಾದು ಕೂತರು. ಹಲವರು ಗುಂಪಾಗಿ ಕೂತು ಚರ್ಚಿಸಿದರು. ಮಧ್ಯಾಹ್ನ ಗತಿಸಿದರೂ ಹಲವು ಬಸ್ಗಳು ಒಂದು ಸುತ್ತಿನ ಸಂಚಾರವನ್ನು ನಡೆಸಲಿಲ್ಲ.</p>.<p>ಪ್ರಯಾಣಿಕರ ಕೊರತೆಯಿಂದ ಸಕಾಲಕ್ಕೆ ಬಸ್ಗಳು ಸಂಚರಿಸಲಿಲ್ಲ. ಇದರಿಂದಾಗಿ ನಗರದ ವಿವಿಧೆಡೆ ಬಸ್ಗಾಗಿ ಕಾದ ಪ್ರಯಾಣಿಕರು ಬೇಸತ್ತು, ಪರ್ಯಾಯ ವ್ಯವಸ್ಥೆ ಮಾಡಿಕೊಂಡ ದೃಶ್ಯಗಳು ಗೋಚರಿಸಿದವು.</p>.<p>ಗ್ರಾಮಾಂತರ ವಿಭಾಗದ ಸಬರ್ಬನ್ ಬಸ್ ನಿಲ್ದಾಣದಲ್ಲಿ ಕೊಂಚ ಪ್ರಯಾಣಿಕರು ಗೋಚರಿಸಿದರು. ಗ್ರಾಮೀಣ ಪ್ರದೇಶಗಳಿಗೆ ತೆರಳುವವರು, ಅಲ್ಲಿಂದ ಬರುವವರು ಕಂಡು ಬಂದರು. ಎರಡೂ ಕಡೆ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆದಿತ್ತು.</p>.<p>ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿಗಳು ತೆರೆದು ವಹಿವಾಟು ನಡೆಸಲಿಲ್ಲ. ಬೆಳಿಗ್ಗೆ ತೆರೆದಿದ್ದವರು ಸಂಜೆಯ ವೇಳೆಗೆ ಬಾಗಿಲು ಮುಚ್ಚಿದ್ದ ಚಿತ್ರಣ ಎಲ್ಲೆಡೆ ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯ ಸರ್ಕಾರ ಭಾನುವಾರದ ಲಾಕ್ಡೌನ್ ವಾಪಸ್ ಪಡೆದರೂ, ನಗರ ವ್ಯಾಪ್ತಿಯಲ್ಲಿ ಜನ ಸಂಚಾರ ವಿರಳವಾಗಿತ್ತು. ವಾಹನ ದಟ್ಟಣೆಯೂ ಹೆಚ್ಚಿನದಾಗಿ ಗೋಚರಿಸಲಿಲ್ಲ.</p>.<p>ನಗರ ಬಸ್ ನಿಲ್ದಾಣದಲ್ಲಿ ಹಿಂದಿನ ಜನದಟ್ಟಣೆ ಕಂಡು ಬರಲಿಲ್ಲ. ದಿನವಿಡಿ ವಾಹನ ಚಾಲಕರು–ನಿರ್ವಾಹಕರು ಪ್ರಯಾಣಿಕರಿಗಾಗಿ ಕಾದು ಕೂತರು. ಹಲವರು ಗುಂಪಾಗಿ ಕೂತು ಚರ್ಚಿಸಿದರು. ಮಧ್ಯಾಹ್ನ ಗತಿಸಿದರೂ ಹಲವು ಬಸ್ಗಳು ಒಂದು ಸುತ್ತಿನ ಸಂಚಾರವನ್ನು ನಡೆಸಲಿಲ್ಲ.</p>.<p>ಪ್ರಯಾಣಿಕರ ಕೊರತೆಯಿಂದ ಸಕಾಲಕ್ಕೆ ಬಸ್ಗಳು ಸಂಚರಿಸಲಿಲ್ಲ. ಇದರಿಂದಾಗಿ ನಗರದ ವಿವಿಧೆಡೆ ಬಸ್ಗಾಗಿ ಕಾದ ಪ್ರಯಾಣಿಕರು ಬೇಸತ್ತು, ಪರ್ಯಾಯ ವ್ಯವಸ್ಥೆ ಮಾಡಿಕೊಂಡ ದೃಶ್ಯಗಳು ಗೋಚರಿಸಿದವು.</p>.<p>ಗ್ರಾಮಾಂತರ ವಿಭಾಗದ ಸಬರ್ಬನ್ ಬಸ್ ನಿಲ್ದಾಣದಲ್ಲಿ ಕೊಂಚ ಪ್ರಯಾಣಿಕರು ಗೋಚರಿಸಿದರು. ಗ್ರಾಮೀಣ ಪ್ರದೇಶಗಳಿಗೆ ತೆರಳುವವರು, ಅಲ್ಲಿಂದ ಬರುವವರು ಕಂಡು ಬಂದರು. ಎರಡೂ ಕಡೆ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ನಡೆದಿತ್ತು.</p>.<p>ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿನ ಅಂಗಡಿಗಳು ತೆರೆದು ವಹಿವಾಟು ನಡೆಸಲಿಲ್ಲ. ಬೆಳಿಗ್ಗೆ ತೆರೆದಿದ್ದವರು ಸಂಜೆಯ ವೇಳೆಗೆ ಬಾಗಿಲು ಮುಚ್ಚಿದ್ದ ಚಿತ್ರಣ ಎಲ್ಲೆಡೆ ಕಂಡು ಬಂದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>