ಮೈಸೂರು: ‘ಒಂದು ಕಡೆ ಸಾಲ ಕೊಟ್ಟವರ ಕಿರುಕುಳ, ಇನ್ನೊಂದೆಡೆ ಭೀಕರವಾದ ಬರ, ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ, ನ್ಯಾಯ ಕೇಳಿದರೆ ಪ್ರಕರಣಗಳನ್ನು ದಾಖಲಿಸುವುದು. ಇವುಗಳ ಮಧ್ಯೆ ಅನ್ನಕೊಡುವ ನಾವು ಬದುಕುವುದಾದರೂ ಹೇಗೆ? ಕೈ ಮುಗಿಯುತ್ತೇವೆ ನಮ್ಮನ್ನು ಬದುಕಲು ಬಿಡಿ’ ಎಂದು ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರದ ರೈತ ಮಹದೇವಸ್ವಾಮಿ ಕೈಮುಗಿದರು.