‘ಕೆಲ ಜನಾಂಗದವರಿಗೆ ಮಾತನಾಡುವ ಶಕ್ತಿ ಇಲ್ಲ. ಅವರಲ್ಲಿ ಯಾರೂ ಶಾಸಕರಿಲ್ಲ. ಮಂತ್ರಿಗಳಾಗಿದ್ದವರು ಅವರ ಜಾತಿ ಪರ ಬೀದಿಗಳಿದರೆ ಉಳಿದವರ ಪಾಡೇನು? ಸಿದ್ದಗಂಗಾ ಮಠ, ಸುತ್ತೂರು ಮಠದ ಸ್ವಾಮೀಜಿಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಮೀಸಲಾತಿಯಲ್ಲಿ ಮೊದಲನೇ ಆದ್ಯತೆ ನೀಡಲಿ ಎಂದಿದ್ದಾರೆ. ಇದರ ಪರವಾಗಿ ಇರುವಂಥವನು ನಾನು. ಹೀಗಾಗಿ ರಾಜ್ಯದ ವಿವಿಧ ಮಠಾಧೀಶರು ತಮ್ಮ ವರ್ಗವನ್ನು ವಹಿಸಿಕೊಂಡು ಮೀಸಲಾತಿಗಾಗಿ ಮುಖ್ಯಮಂತ್ರಿಗಳಿಗೆ ಒತ್ತಡ ತರಬಾರದು. ಮೀಸಲಾತಿ ಜಾರಿ ಅವರ ಕೈಲಿಲ್ಲ’ ಎಂದು ಹೇಳಿದರು.