ಬಿಟ್ ಕಾಯಿನ್ ಪ್ರಕರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದವರು ಯಾರೇ ಇದ್ದರೂ ಮೊದಲು ತನಿಖೆ ಆರಂಭಿಸಬೇಕು. ಅದನ್ನು ಬಿಟ್ಟು ಸರ್ಕಾರ ನನ್ನ ಬಳಿಯೇ ಸಾಕ್ಷ್ಯ ಕೇಳುತ್ತಿದೆ. ಸಾಕ್ಷ್ಯ ಹುಡುಕುವುದು ತನಿಖಾಧಿಕಾರಿಗಳ ಕೆಲಸ. ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯ ಬಿದ್ದರೆ ನ್ಯಾಯಾಲಯಕ್ಕೆ ನೀಡುವೆ. ಸಾಕ್ಷ್ಯ ಸಂಗ್ರಹದ ನಂತರ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.