ಮೈಸೂರು: ‘ಮಹಾರಾಜರು ಯೋಜನಾಬದ್ಧವಾಗಿ ಮೈಸೂರನ್ನು ನಿರ್ಮಿಸಿದ್ದಾರೆ. ತುಮಕೂರು, ಹುಬ್ಬಳ್ಳಿಯಂತಹ ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದವು. ನಮ್ಮೂರು ಈ ನಗರಗಳಿಗಿಂತ ಕಡೆನಾ?’ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ, ಸ್ವಪಕ್ಷೀಯ ಸಂಸದ ಪ್ರತಾಪಸಿಂಹ ವಿರುದ್ಧ ಭಾನುವಾರ ಇಲ್ಲಿ ಕಿಡಿಕಾರಿದರು.