<p><strong>ಮೈಸೂರು: </strong>‘ಸಮೃದ್ಧಿ, ಶಾಂತಿ, ಸೌಹಾರ್ದತೆ, ಸಮಾನತೆಯ ಸಮಾಜ ಕಟ್ಟುವ ಆಯುಧವೇ (ಜಾನಪದ) ಇದೀಗ ಮೊಂಡಾಗುತ್ತಿದೆ’ ಎಂದು ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ಭಾನುವಾರ ಇಲ್ಲಿ ತಿಳಿಸಿದರು.</p>.<p>ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ–2021ರಲ್ಲಿ, ಜನಪದ ಗಾಯನ ಮತ್ತು ಜನಪದ ನೃತ್ಯಗಳು ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.</p>.<p>‘ಜನರ ಜಾನಪದವನ್ನು ಜನಪ್ರಿಯಗೊಳಿಸಲು ಮುಂದಾಗಿ ತಾಯಿಬೇರಿಗೆ ಹೊಡೆತ ಕೊಡುವ ಕೆಲಸ ಎಲ್ಲೆಡೆಯಿಂದಲೂ ನಡೆದಿದೆ’ ಎಂದು ಜನಾರ್ಧನ್ ಬೇಸರ ವ್ಯಕ್ತಪಡಿಸಿದರು.</p>.<p>‘ಕಲೆಯ ಹೆಸರಿನಲ್ಲಿ ಮೈಮರೆಯುತ್ತಿರೋದು–ಮೆರೆಯುತ್ತಿರೋದು ಹೆಚ್ಚಿದೆ. ಕಲೆ ಸಮಾಜದ ಒಳಿತಿಗೆ, ಮನುಷ್ಯನ ಬೆಳವಣಿಗೆಗೆ ಸದಾ ಪೂರಕವಾಗಿದ್ದಾಗ ಮಾತ್ರ ಸಾರ್ಥಕ’ ಎಂದು ಅವರು ಹೇಳಿದರು.</p>.<p>‘ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಪರಂಪರೆ ಜಾನಪದದ ಕೊಡುಗೆ. ಜನಪದ ಎಂದರೇ ಕುಟುಂಬ, ಸಮಾಜ, ಸಮೂಹ, ಪ್ರತಿಯೊಬ್ಬರ ಹೃದಯ, ಅಂತರಾಳ...’ ಎಂದು ವ್ಯಾಖ್ಯಾನಿಸಿದ ಜನ್ನಿ, ‘ಅಸಂಖ್ಯಾತ ಜನರ ಸೆಲೆ–ನೆಲೆ’ ಎಂದರು.</p>.<p>‘ಶ್ರಮಸಂಸ್ಕೃತಿಯಲ್ಲಿ ಹುಟ್ಟೋದೇ ಜನಪದ. ಶಾಂತಿ, ಸೌಹಾರ್ದತೆ, ಸಾಮರಸ್ಯ, ಮಾನವೀಯತೆ ಇಲ್ಲದ ಕಡೆಗೆ ಇಂದಿನ ಸಮಾಜ ಸಾಗುತ್ತಿದೆ. ಇದನ್ನು ಸರಿದಾರಿಗೆ ತರೋ ತಾಕತ್ತು ಜನಪದಕ್ಕಿದೆ. ಜನರ ಬಾಯಿಂದ ಬಾಯಿಗೆ ಹರಡುವ ಜನಪದವನ್ನು ಜತನದಿಂದ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ’ ಎಂದು ಅವರು ಹೇಳಿದರು.</p>.<p>ಲಕ್ಷ್ಮಿರಾಮ್, ದೇವಾನಂದವರಪ್ರಸಾದ, ಮೈಸೂರು ಮಹಾಲಿಂಗು, ಪಿ.ಸೋಮಶೇಖರ್, ಎಸ್.ಲಾಸ್ಯ, ಐ.ಡಿ.ಲೋಕೇಶ್, ವಿಶ್ವನಾಥ್ ಎಲ್.ಚಂಗಚಹಳ್ಳಿ ಜನಪದ ಹಾಡುಗಳ ಹೊಳೆಯನ್ನೇ ಹರಿಸಿದರು.</p>.<p>ಕೋಲಾಟ, ಮಾರಿಕುಣಿತ, ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ, ಬಾಲೆಯರ ಕಂಸಾಳೆ ನೃತ್ಯ ಗಮನ ಸೆಳೆದವು.</p>.<p>ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರು, ಗೌತಮ ಟ್ರಸ್ಟ್ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಸಮೃದ್ಧಿ, ಶಾಂತಿ, ಸೌಹಾರ್ದತೆ, ಸಮಾನತೆಯ ಸಮಾಜ ಕಟ್ಟುವ ಆಯುಧವೇ (ಜಾನಪದ) ಇದೀಗ ಮೊಂಡಾಗುತ್ತಿದೆ’ ಎಂದು ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ಭಾನುವಾರ ಇಲ್ಲಿ ತಿಳಿಸಿದರು.</p>.<p>ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ–2021ರಲ್ಲಿ, ಜನಪದ ಗಾಯನ ಮತ್ತು ಜನಪದ ನೃತ್ಯಗಳು ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.</p>.<p>‘ಜನರ ಜಾನಪದವನ್ನು ಜನಪ್ರಿಯಗೊಳಿಸಲು ಮುಂದಾಗಿ ತಾಯಿಬೇರಿಗೆ ಹೊಡೆತ ಕೊಡುವ ಕೆಲಸ ಎಲ್ಲೆಡೆಯಿಂದಲೂ ನಡೆದಿದೆ’ ಎಂದು ಜನಾರ್ಧನ್ ಬೇಸರ ವ್ಯಕ್ತಪಡಿಸಿದರು.</p>.<p>‘ಕಲೆಯ ಹೆಸರಿನಲ್ಲಿ ಮೈಮರೆಯುತ್ತಿರೋದು–ಮೆರೆಯುತ್ತಿರೋದು ಹೆಚ್ಚಿದೆ. ಕಲೆ ಸಮಾಜದ ಒಳಿತಿಗೆ, ಮನುಷ್ಯನ ಬೆಳವಣಿಗೆಗೆ ಸದಾ ಪೂರಕವಾಗಿದ್ದಾಗ ಮಾತ್ರ ಸಾರ್ಥಕ’ ಎಂದು ಅವರು ಹೇಳಿದರು.</p>.<p>‘ವಚನ ಚಳವಳಿ, ದಾಸ ಸಾಹಿತ್ಯ, ಸೂಫಿ ಪರಂಪರೆ ಜಾನಪದದ ಕೊಡುಗೆ. ಜನಪದ ಎಂದರೇ ಕುಟುಂಬ, ಸಮಾಜ, ಸಮೂಹ, ಪ್ರತಿಯೊಬ್ಬರ ಹೃದಯ, ಅಂತರಾಳ...’ ಎಂದು ವ್ಯಾಖ್ಯಾನಿಸಿದ ಜನ್ನಿ, ‘ಅಸಂಖ್ಯಾತ ಜನರ ಸೆಲೆ–ನೆಲೆ’ ಎಂದರು.</p>.<p>‘ಶ್ರಮಸಂಸ್ಕೃತಿಯಲ್ಲಿ ಹುಟ್ಟೋದೇ ಜನಪದ. ಶಾಂತಿ, ಸೌಹಾರ್ದತೆ, ಸಾಮರಸ್ಯ, ಮಾನವೀಯತೆ ಇಲ್ಲದ ಕಡೆಗೆ ಇಂದಿನ ಸಮಾಜ ಸಾಗುತ್ತಿದೆ. ಇದನ್ನು ಸರಿದಾರಿಗೆ ತರೋ ತಾಕತ್ತು ಜನಪದಕ್ಕಿದೆ. ಜನರ ಬಾಯಿಂದ ಬಾಯಿಗೆ ಹರಡುವ ಜನಪದವನ್ನು ಜತನದಿಂದ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ’ ಎಂದು ಅವರು ಹೇಳಿದರು.</p>.<p>ಲಕ್ಷ್ಮಿರಾಮ್, ದೇವಾನಂದವರಪ್ರಸಾದ, ಮೈಸೂರು ಮಹಾಲಿಂಗು, ಪಿ.ಸೋಮಶೇಖರ್, ಎಸ್.ಲಾಸ್ಯ, ಐ.ಡಿ.ಲೋಕೇಶ್, ವಿಶ್ವನಾಥ್ ಎಲ್.ಚಂಗಚಹಳ್ಳಿ ಜನಪದ ಹಾಡುಗಳ ಹೊಳೆಯನ್ನೇ ಹರಿಸಿದರು.</p>.<p>ಕೋಲಾಟ, ಮಾರಿಕುಣಿತ, ವೀರಗಾಸೆ, ಡೊಳ್ಳುಕುಣಿತ, ಪೂಜಾ ಕುಣಿತ, ಬಾಲೆಯರ ಕಂಸಾಳೆ ನೃತ್ಯ ಗಮನ ಸೆಳೆದವು.</p>.<p>ರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರು, ಗೌತಮ ಟ್ರಸ್ಟ್ನ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>