<p><strong>ಮೈಸೂರು: </strong>‘ರೋಗಿಗಳಿಗೆ ದುಬಾರಿ ಬೆಲೆಯ ಬ್ರ್ಯಾಂಡೆಡ್ ಕಂಪನಿಗಳ ಔಷಧಿ ಬರೆದುಕೊಡಬೇಡಿ. ರಾಸಾಯನಿಕ ಸಂಯೋಜನೆಯಷ್ಟನ್ನೇ ಬರೆಯಿರಿ. ಖರೀದಿಸುವ ಶಕ್ತಿಯಿಲ್ಲದ ಬಡವರು ಜನೌಷಧಿ ಕೇಂದ್ರಗಳಲ್ಲಿ ಈ ಔಷಧಿ ತೆಗೆದುಕೊಳ್ಳಲು ಅನುಕೂಲವಾಗಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸರ್ಕಾರಿ ಹಾಗೂ ಖಾಸಗಿ ವೈದ್ಯರಿಗೆ ಸೋಮವಾರ ಇಲ್ಲಿ ಮನವಿ ಮಾಡಿದರು.</p>.<p>ನಗರದ ಸದರ್ನ್ ಹೋಟೆಲ್ನಲ್ಲಿ ನಡೆದ ಜನೌಷಧಿ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಸಂವಾದಕ್ಕೆ ಮೊದಲು ಫಲಾನುಭವಿಗಳು ಹಾಗೂ ಕೇಂದ್ರಗಳ ಮಾಲೀಕರನ್ನುದ್ದೇಶಿಸಿ ಮಾತನಾಡಿದ ಸಚಿವರು ‘ಮಾನವೀಯತೆ ಮೆರೆಯಿರಿ’ ಎಂದು ವೈದ್ಯ ಸಮೂಹಕ್ಕೆ ಕಿವಿಮಾತು ಹೇಳಿದರು.</p>.<p>‘ನಮ್ಮ ಸಮಾಜ ವೈದ್ಯರನ್ನು ದೈವೀ ಸ್ವರೂಪವಾಗಿ ಕಾಣುತ್ತಿದೆ. ಜನರು ನೀಡುವ ಗೌರವ ಉಳಿಸಿಕೊಳ್ಳಲಿಕ್ಕಾಗಿಯಾದರೂ ಔಷಧಿಯ ಬ್ರ್ಯಾಂಡ್ ಹೆಸರು ಬರೆಯದೆ; ರಾಸಾಯನಿಕ ಸಂಯೋಜನೆ ಬರೆದುಕೊಡಿ’ ಎಂದು ಪುನರುಚ್ಚರಿಸಿದರು.</p>.<p>‘ಬ್ರ್ಯಾಂಡೆಡ್ ಕಂಪನಿಗಳ ಔಷಧಿ ದರಕ್ಕಿಂತ ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳ ಬೆಲೆ ಶೇ 40ರಿಂದ ಶೇ 80 ಕಡಿಮೆಯಿರಲಿದೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ಪ್ರತಿ ಔಷಧಿಯೂ ಪರೀಕ್ಷೆಗೊಳಪಟ್ಟ ಬಳಿಕವೇ ಮಾರಾಟಕ್ಕೆ ಲಭ್ಯವಾಗೋದು. ನಿಗದಿತ ಮಾನದಂಡದಲ್ಲೇ ತಯಾರಾಗಿರುತ್ತೆ’ ಎಂದು ಹೇಳಿದರು.</p>.<p>‘ಈ ಹಿಂದಿನ 68 ವರ್ಷಗಳಲ್ಲಿ ಯಾರಿಗೂ ಔಷಧಿಗಳ ಬೆಲೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಬಂದಿರಲಿಲ್ಲ ಎಂಬುದೇ ಸೋಜಿಗದ ಸಂಗತಿ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಸೂಕ್ಷ್ಮ ವಿಚಾರದ ಬಗ್ಗೆ ಚಿಂತಿಸಿ, ಬದ್ಧತೆಯಿಂದ ಜನೌಷಧಿ ಯೋಜನೆ ಬಲಗೊಳಿಸಿದರು’ ಎಂದರು.</p>.<p>‘ಪ್ರಸ್ತುತ ದೇಶದಲ್ಲಿ 8 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ರಾಜ್ಯದಲ್ಲಿ 952 ಕೇಂದ್ರಗಳಿದ್ದು, ಉಪ ಆರೋಗ್ಯ ಕೇಂದ್ರದಲ್ಲೂ ಜನೌಷಧಿ ಕೇಂದ್ರ ಆರಂಭಿಸುವ ಆಲೋಚನೆಯಿದೆ’ ಎಂದು ಸುಧಾಕರ್ ಹೇಳಿದರು.</p>.<p>ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಪಾಲಿಕೆ ಮೇಯರ್ ಸುನಂದಾ ಫಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಅಪ್ಪಣ್ಣ ಉಪಸ್ಥಿತರಿದ್ದರು.</p>.<p class="Briefhead"><strong>ಹಣದ ಕೊರತೆ ಕಾಡದಿರಲಿ; ಖೂಬಾ</strong></p>.<p>‘ಆರೋಗ್ಯ ಕಾಪಾಡಿಕೊಳ್ಳಲು ಔಷಧಿ ಖರೀದಿಗಾಗಿ ಯಾರೊಬ್ಬರಿಗೂ ಹಣದ ಕೊರತೆ ಕಾಡಬಾರದು ಎಂಬ ಚಿಂತನೆಯಿಂದ ಕೇಂದ್ರ ಸರ್ಕಾರ ಆರು ವರ್ಷದಲ್ಲಿ ಜನೌಷಧಿ ಕೇಂದ್ರಗಳನ್ನು ಬಲವರ್ಧನೆಗೊಳಿಸಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ತಿಳಿಸಿದರು.</p>.<p>‘ಬಡವರ ಸುಲಿಗೆ ಆಗಬಾರದು. ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸಲಿಕ್ಕಾಗಿ ಮಾರ್ಚ್ 1ರಿಂದ 7ರವರೆಗೆ ದೇಶದಾದ್ಯಂತ ಜನೌಷಧಿ ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರಚಾರ ನಡೆಸಲಾಗಿದೆ’ ಎಂದು ಹೇಳಿದರು.</p>.<p>‘ಜನೌಷಧಿ ಕೇಂದ್ರಗಳಲ್ಲಿ ಹಲವು ರೋಗಕ್ಕೆ 1451 ಔಷಧಿ ಸಿಗುತ್ತವೆ. 240 ಶಸ್ತ್ರಚಿಕಿತ್ಸೆ ಉಪಕರಣಗಳು ಲಭ್ಯವಿವೆ. ಬಡವರು, ಮಧ್ಯಮ ವರ್ಗದವರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಖೂಬಾ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ರೋಗಿಗಳಿಗೆ ದುಬಾರಿ ಬೆಲೆಯ ಬ್ರ್ಯಾಂಡೆಡ್ ಕಂಪನಿಗಳ ಔಷಧಿ ಬರೆದುಕೊಡಬೇಡಿ. ರಾಸಾಯನಿಕ ಸಂಯೋಜನೆಯಷ್ಟನ್ನೇ ಬರೆಯಿರಿ. ಖರೀದಿಸುವ ಶಕ್ತಿಯಿಲ್ಲದ ಬಡವರು ಜನೌಷಧಿ ಕೇಂದ್ರಗಳಲ್ಲಿ ಈ ಔಷಧಿ ತೆಗೆದುಕೊಳ್ಳಲು ಅನುಕೂಲವಾಗಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸರ್ಕಾರಿ ಹಾಗೂ ಖಾಸಗಿ ವೈದ್ಯರಿಗೆ ಸೋಮವಾರ ಇಲ್ಲಿ ಮನವಿ ಮಾಡಿದರು.</p>.<p>ನಗರದ ಸದರ್ನ್ ಹೋಟೆಲ್ನಲ್ಲಿ ನಡೆದ ಜನೌಷಧಿ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಸಂವಾದಕ್ಕೆ ಮೊದಲು ಫಲಾನುಭವಿಗಳು ಹಾಗೂ ಕೇಂದ್ರಗಳ ಮಾಲೀಕರನ್ನುದ್ದೇಶಿಸಿ ಮಾತನಾಡಿದ ಸಚಿವರು ‘ಮಾನವೀಯತೆ ಮೆರೆಯಿರಿ’ ಎಂದು ವೈದ್ಯ ಸಮೂಹಕ್ಕೆ ಕಿವಿಮಾತು ಹೇಳಿದರು.</p>.<p>‘ನಮ್ಮ ಸಮಾಜ ವೈದ್ಯರನ್ನು ದೈವೀ ಸ್ವರೂಪವಾಗಿ ಕಾಣುತ್ತಿದೆ. ಜನರು ನೀಡುವ ಗೌರವ ಉಳಿಸಿಕೊಳ್ಳಲಿಕ್ಕಾಗಿಯಾದರೂ ಔಷಧಿಯ ಬ್ರ್ಯಾಂಡ್ ಹೆಸರು ಬರೆಯದೆ; ರಾಸಾಯನಿಕ ಸಂಯೋಜನೆ ಬರೆದುಕೊಡಿ’ ಎಂದು ಪುನರುಚ್ಚರಿಸಿದರು.</p>.<p>‘ಬ್ರ್ಯಾಂಡೆಡ್ ಕಂಪನಿಗಳ ಔಷಧಿ ದರಕ್ಕಿಂತ ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳ ಬೆಲೆ ಶೇ 40ರಿಂದ ಶೇ 80 ಕಡಿಮೆಯಿರಲಿದೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ಪ್ರತಿ ಔಷಧಿಯೂ ಪರೀಕ್ಷೆಗೊಳಪಟ್ಟ ಬಳಿಕವೇ ಮಾರಾಟಕ್ಕೆ ಲಭ್ಯವಾಗೋದು. ನಿಗದಿತ ಮಾನದಂಡದಲ್ಲೇ ತಯಾರಾಗಿರುತ್ತೆ’ ಎಂದು ಹೇಳಿದರು.</p>.<p>‘ಈ ಹಿಂದಿನ 68 ವರ್ಷಗಳಲ್ಲಿ ಯಾರಿಗೂ ಔಷಧಿಗಳ ಬೆಲೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಬಂದಿರಲಿಲ್ಲ ಎಂಬುದೇ ಸೋಜಿಗದ ಸಂಗತಿ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಸೂಕ್ಷ್ಮ ವಿಚಾರದ ಬಗ್ಗೆ ಚಿಂತಿಸಿ, ಬದ್ಧತೆಯಿಂದ ಜನೌಷಧಿ ಯೋಜನೆ ಬಲಗೊಳಿಸಿದರು’ ಎಂದರು.</p>.<p>‘ಪ್ರಸ್ತುತ ದೇಶದಲ್ಲಿ 8 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ರಾಜ್ಯದಲ್ಲಿ 952 ಕೇಂದ್ರಗಳಿದ್ದು, ಉಪ ಆರೋಗ್ಯ ಕೇಂದ್ರದಲ್ಲೂ ಜನೌಷಧಿ ಕೇಂದ್ರ ಆರಂಭಿಸುವ ಆಲೋಚನೆಯಿದೆ’ ಎಂದು ಸುಧಾಕರ್ ಹೇಳಿದರು.</p>.<p>ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಪಾಲಿಕೆ ಮೇಯರ್ ಸುನಂದಾ ಫಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಅಪ್ಪಣ್ಣ ಉಪಸ್ಥಿತರಿದ್ದರು.</p>.<p class="Briefhead"><strong>ಹಣದ ಕೊರತೆ ಕಾಡದಿರಲಿ; ಖೂಬಾ</strong></p>.<p>‘ಆರೋಗ್ಯ ಕಾಪಾಡಿಕೊಳ್ಳಲು ಔಷಧಿ ಖರೀದಿಗಾಗಿ ಯಾರೊಬ್ಬರಿಗೂ ಹಣದ ಕೊರತೆ ಕಾಡಬಾರದು ಎಂಬ ಚಿಂತನೆಯಿಂದ ಕೇಂದ್ರ ಸರ್ಕಾರ ಆರು ವರ್ಷದಲ್ಲಿ ಜನೌಷಧಿ ಕೇಂದ್ರಗಳನ್ನು ಬಲವರ್ಧನೆಗೊಳಿಸಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ತಿಳಿಸಿದರು.</p>.<p>‘ಬಡವರ ಸುಲಿಗೆ ಆಗಬಾರದು. ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸಲಿಕ್ಕಾಗಿ ಮಾರ್ಚ್ 1ರಿಂದ 7ರವರೆಗೆ ದೇಶದಾದ್ಯಂತ ಜನೌಷಧಿ ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರಚಾರ ನಡೆಸಲಾಗಿದೆ’ ಎಂದು ಹೇಳಿದರು.</p>.<p>‘ಜನೌಷಧಿ ಕೇಂದ್ರಗಳಲ್ಲಿ ಹಲವು ರೋಗಕ್ಕೆ 1451 ಔಷಧಿ ಸಿಗುತ್ತವೆ. 240 ಶಸ್ತ್ರಚಿಕಿತ್ಸೆ ಉಪಕರಣಗಳು ಲಭ್ಯವಿವೆ. ಬಡವರು, ಮಧ್ಯಮ ವರ್ಗದವರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಖೂಬಾ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>