ನಾಟಕ ವೀಕ್ಷಿಸುತ್ತಾ ಚಹಾ ವಿರಾಮದ ವೇಳೆ ಪ್ರತಿಕ್ರಿಯಿಸಿದ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ‘ಪರ್ವ ನಾಟಕವನ್ನು ಪ್ರಸ್ತುತ ಭಾರತದ ಎಲ್ಲರೂ ನೋಡಬೇಕು. ಈ ತರಹದ ಮಹಾಭಾರತವೂ ಇದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಇದು ಅಲೌಕಿಕವಾದದ್ದಲ್ಲ, ಲೌಕಿಕ ಮಹಾಭಾರತ. ಜಿಲ್ಲೆ ಜಿಲ್ಲೆಗಳಲ್ಲೂ ಈ ನಾಟಕ ಪ್ರದರ್ಶನ ಕಾಣಬೇಕು’ ಎಂದು ತಿಳಿಸಿದರು.