<p><strong>ಮೈಸೂರು</strong>: ರಂಗಾಯಣದ ಬಹು ನಿರೀಕ್ಷಿತ ನಾಟಕ ‘ಪರ್ವ’ ಪ್ರದರ್ಶನಕ್ಕೆ 2ನೇ ದಿನವಾದ ಶನಿವಾರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಶೇ 90ರಷ್ಟು ಆಸನಗಳು ಭರ್ತಿಯಾಗಿದ್ದು, ರಾತ್ರಿಯವರೆಗೂ ದಣಿಯದೇ ಪ್ರೇಕ್ಷಕರು ನಾಟಕ ವೀಕ್ಷಿಸಿದರು. ಬೆಂಗಳೂರಿನಿಂದಲೇ ಹೆಚ್ಚಿನ ಮಂದಿ ನಾಟಕ ನೋಡಿದ್ದು ವಿಶೇಷ ಎನಿಸಿತ್ತು.</p>.<p>ನಾಟಕ ವೀಕ್ಷಿಸುತ್ತಾ ಚಹಾ ವಿರಾಮದ ವೇಳೆ ಪ್ರತಿಕ್ರಿಯಿಸಿದ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ‘ಪರ್ವ ನಾಟಕವನ್ನು ಪ್ರಸ್ತುತ ಭಾರತದ ಎಲ್ಲರೂ ನೋಡಬೇಕು. ಈ ತರಹದ ಮಹಾಭಾರತವೂ ಇದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಇದು ಅಲೌಕಿಕವಾದದ್ದಲ್ಲ, ಲೌಕಿಕ ಮಹಾಭಾರತ. ಜಿಲ್ಲೆ ಜಿಲ್ಲೆಗಳಲ್ಲೂ ಈ ನಾಟಕ ಪ್ರದರ್ಶನ ಕಾಣಬೇಕು’ ಎಂದು ತಿಳಿಸಿದರು.</p>.<p>ಮಂಡ್ಯದ ಡಯಟ್ ಉಪನ್ಯಾಸಕ ಭಾನುಕುಮಾರ್ ಪ್ರತಿಕ್ರಿಯಿಸಿ, ‘ನಾಟಕ ಅದ್ಭುತವಾಗಿ ಮೂಡಿ ಬಂದಿದೆ. ಆದರೆ, ದೀರ್ಘ ಸಮಯ ತೆಗೆದುಕೊಂಡಿತು. ಕೂರುವುದಕ್ಕೆ ಕಷ್ಟ ಎನಿಸಿತು. ಭೋಜನದ ನಂತರದ ಕೆಲವು ಭಾಗಗಳನ್ನು ಸ್ವಲ್ಪ ಕಡಿಮೆ ಮಾಡಬಹುದು’ ಎಂದು ತಿಳಿಸಿದರು.</p>.<p>ಈ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಪ್ರಕಾಶ್ ಬೆಳವಾಡಿ, ‘ನಾಟಕದ ಸಮಯ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ತಪ್ಪುಗಳನ್ನು ತಿದ್ದುಕೊಂಡು ಮುಂದೆ ಸಾಗುತ್ತೇವೆ’ ಎಂದು ಹೇಳಿದರು.</p>.<p>ಕಲಾವಿದರಾದ ತುಳಸಿ ರಾಮಚಂದ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ನಾಟಕ ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ರಂಗಾಯಣದ ಬಹು ನಿರೀಕ್ಷಿತ ನಾಟಕ ‘ಪರ್ವ’ ಪ್ರದರ್ಶನಕ್ಕೆ 2ನೇ ದಿನವಾದ ಶನಿವಾರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಶೇ 90ರಷ್ಟು ಆಸನಗಳು ಭರ್ತಿಯಾಗಿದ್ದು, ರಾತ್ರಿಯವರೆಗೂ ದಣಿಯದೇ ಪ್ರೇಕ್ಷಕರು ನಾಟಕ ವೀಕ್ಷಿಸಿದರು. ಬೆಂಗಳೂರಿನಿಂದಲೇ ಹೆಚ್ಚಿನ ಮಂದಿ ನಾಟಕ ನೋಡಿದ್ದು ವಿಶೇಷ ಎನಿಸಿತ್ತು.</p>.<p>ನಾಟಕ ವೀಕ್ಷಿಸುತ್ತಾ ಚಹಾ ವಿರಾಮದ ವೇಳೆ ಪ್ರತಿಕ್ರಿಯಿಸಿದ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ‘ಪರ್ವ ನಾಟಕವನ್ನು ಪ್ರಸ್ತುತ ಭಾರತದ ಎಲ್ಲರೂ ನೋಡಬೇಕು. ಈ ತರಹದ ಮಹಾಭಾರತವೂ ಇದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಇದು ಅಲೌಕಿಕವಾದದ್ದಲ್ಲ, ಲೌಕಿಕ ಮಹಾಭಾರತ. ಜಿಲ್ಲೆ ಜಿಲ್ಲೆಗಳಲ್ಲೂ ಈ ನಾಟಕ ಪ್ರದರ್ಶನ ಕಾಣಬೇಕು’ ಎಂದು ತಿಳಿಸಿದರು.</p>.<p>ಮಂಡ್ಯದ ಡಯಟ್ ಉಪನ್ಯಾಸಕ ಭಾನುಕುಮಾರ್ ಪ್ರತಿಕ್ರಿಯಿಸಿ, ‘ನಾಟಕ ಅದ್ಭುತವಾಗಿ ಮೂಡಿ ಬಂದಿದೆ. ಆದರೆ, ದೀರ್ಘ ಸಮಯ ತೆಗೆದುಕೊಂಡಿತು. ಕೂರುವುದಕ್ಕೆ ಕಷ್ಟ ಎನಿಸಿತು. ಭೋಜನದ ನಂತರದ ಕೆಲವು ಭಾಗಗಳನ್ನು ಸ್ವಲ್ಪ ಕಡಿಮೆ ಮಾಡಬಹುದು’ ಎಂದು ತಿಳಿಸಿದರು.</p>.<p>ಈ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಪ್ರಕಾಶ್ ಬೆಳವಾಡಿ, ‘ನಾಟಕದ ಸಮಯ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ತಪ್ಪುಗಳನ್ನು ತಿದ್ದುಕೊಂಡು ಮುಂದೆ ಸಾಗುತ್ತೇವೆ’ ಎಂದು ಹೇಳಿದರು.</p>.<p>ಕಲಾವಿದರಾದ ತುಳಸಿ ರಾಮಚಂದ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ ನಾಟಕ ವೀಕ್ಷಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>