ತಾವು ಬರೆದಿರುವ ‘ಸುಹೇಲ್ದೇವ್: ಸೈಲೆಂಟ್ ಹೀರೊ ಆಫ್ ಹಿಸ್ಟರಿ’ ಕೃತಿ ಬಗ್ಗೆ ಲಂಡನ್ನಿಂದ ಮಾತನಾಡಿದ ಅಮಿಶ್, ‘ವಿದೇಶಿ ಆಕ್ರಮಣಕಾರರ ದಾಳಿ ಹಾಗೂ ಅವರಿಂದ ಉಂಟಾದ ಹಾನಿ ಬಗ್ಗೆ ಒಂದು ಪಂಗಡ ಮುಕ್ತವಾಗಿ ಮಾತನಾಡಲು ಸಿದ್ಧವಿಲ್ಲ. ಖ್ಯಾತ ಸಂಗೀತಗಾರರು, ಕಲಾವಿದರು, ಲೇಖಕರು ಎಂಬುದಾಗಿ ಅವರನ್ನು ಬಿಂಬಿಸುತ್ತಿದೆ. ವಿದೇಶಿ ಆಕ್ರಮಣಕಾರರು ಮಾಡಿದ ಅಪರಾಧಗಳಿಗಾಗಿ ಮತ್ತೊಂದು ಪಂಗಡವು ಈಗಿನ ಪೀಳಿಗೆಯವರು, ಸಹ ಭಾರತೀಯರನ್ನು ದೂಷಿಸುತ್ತಿದೆ. ಬಹಳ ಹಿಂದಿನ ಆ ಅಪರಾಧಕ್ಕೂ ಈಗಿನ ಪೀಳಿಗೆಗೆ ಸಂಬಂಧವಿಲ್ಲದಿದ್ದರೂ ವಿಷಕಾರುತ್ತಿದೆ. ಹೀಗಾಗಿ, ಸತ್ಯ ಹೇಳುವುದು ಅಗತ್ಯವಾಗಿದೆ’ ಎಂದರು.