ಬಸವಕಲ್ಯಾಣದಲ್ಲಿ 40 ಸಾವಿರ ಮರಾಠಿಗರಾಗಿದ್ದಾರೆ. ಇವರ ಮತ ಗಳಿಸಲು ಮರಾಠ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಆದರೆ, ಇವರು ಬಸವಣ್ಣನ ನಾಡನ್ನು ಉದ್ಧಾರ ಮಾಡಿಲ್ಲ. ತಾಳವಾಡಿ, ಕಾಸರಗೋಡು ಸೇರಿದಂತೆ ಇನ್ನಿತರ ಗಡಿಭಾಗದಲ್ಲಿರುವ ಕನ್ನಡಿಗರ ಕಣ್ಣೀರು ಒರೆಸುವ ಕಾರ್ಯಕ್ಕೆ ಕೈ ಹಾಕಲಿಲ್ಲ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.