ಈ ಕುರಿತು ಮಾತನಾಡಿದ ರಾಮೇನಹಳ್ಳಿಯ (ಕೆ.ನಾಗನಹಳ್ಳಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಆರ್.ಭಾಗ್ಯಾ, ‘ಮಕ್ಕಳಿಗೆ ದೇವಸ್ಥಾನದ ಆವರಣದಲ್ಲಿ, ಅರಳಿಕಟ್ಟೆಯ ಬಳಿ, ಅವರವರ ಮನೆಯ ಪಡಸಾಲೆಗಳ ಮೇಲೆಯೇ ಕಲಿಸಲಾಗುತ್ತಿದೆ. ಶಾಲಾ ಕೊಠಡಿಯಲ್ಲಿರುವುದಕ್ಕಿಂತ ಹೆಚ್ಚು ಆಸಕ್ತಿಯಿಂದ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ’ ಎಂದುತಿಳಿಸಿದರು.